ಜನಧ್ವನಿ ಡಿಜಿಟಲ್ ಮೀಡಿಯಾ ವರಧಿ ಫಲಶೃತಿ
ಚಳ್ಳಕೆರೆ ಆ.4. ಸಾಂಕ್ರಮಿಕ ರೋಗ ಭೀತಿಯಲ್ಲಿ ದುರ್ಗವರ ಗ್ರಾಮಸ್ಥರು ಎಂಬ ತಲೆಬರಹದಡಿಯಲ್ಲಿ ಸುದ್ದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸ್ವಚ್ಚತೆಗೊಳಿಸಲು ಮುಂದಾದ ಅಧಿಕಾರಿಗಳು.
ಸುದ್ದಿ ಪ್ರಕಟಿಸುವ ಮುನ್ನ. .
ಸುದ್ದಿ ಬೆಳಕು ಚೆಲ್ಲಿದ ನಂತರ
ಹೌದು ಇದು ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಪಂ ವ್ಯಾಪ್ತಿಯ ದುರ್ಗಾವರ ಗ್ರಾಮದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಸಾಂಕ್ರಮಿಕ ರೋಗ ಭೀತಿಯಲ್ಲಿ ಗ್ರಾಮಸ್ಥರು ದಿನ ನಿತ್ಯ ಜೀವನ ಸಾಗಿಸುವುದು ಅನಿವಾರ್ಯವಾಗಿದೆ ಎಂದು ಸುದ್ದಿ ಪ್ರಕಟಿಸಲಾಗಿತ್ತು ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಪಂ ಅಧಿಕಾರಿಗಳು ಗ್ರಾಮದಲ್ಲಿನ ಚರಂಡಿಗಳ ಸ್ವಚ್ವತೆಗೆ ಮುಂದಾಗಿ ಕ್ರಿಮಿನಾಸಕ ಔಷಧಿ ಸಿಂಪರಣೆ ಮಾಡಲು ಮುಂದಾಗಿದ್ದಾರೆ
ಗ್ರಾಮಸ್ಥರು ಜನಧ್ವನಿ ಡಿಜಿಟಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಇನ್ನು ಮುಂದೆಯಾದರೂ ಮಾಧ್ಯಮದಲ್ಲಿ ಪ್ರಕಟವಾಗುವ ಮುನ್ನವೇ ಸ್ವಚ್ಚತೆಗೆ ಗ್ರಾಪಂ ಆಡಳಿತ ಮುಂದಾಗಬೇಕಿದೆ.
0 Comments