ಚಳ್ಳಕೆರೆ:ನಗರದ ಬಳ್ಳಾರಿ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಸಿ ಎನ್ ಜಿ ಗ್ಯಾಸ್ ಅಭಾವ ಉಂಟಾಗಿ ಆಟೋ ಚಾಲಕರು ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ
ಈ ವೇಳೆ ಮಾತನಾಡಿದ ಆಟೋ ಚಾಲಕ ವೆಂಕಟೇಶ್ ದಿನನಿತ್ಯ ನಮಗೆ ಆಟೋ ಓಡಿಸಲು ಸಿಎನ್ಜಿ ಗ್ಯಾಸ್ ಬಳಕೆ ಅನಿವಾರ್ಯವಾಗಿದೆ ಯಾವ ವೇಳೆಯಲ್ಲಿಯೇ ಬಂದರು ಬಂಕ್ ಮಾಲೀಕರು ಸ್ಟಾಕ್ ಇಲ್ಲ ಎಂಬ ಉಡಾಫೆ ಉತ್ತರ ನೀಡಿ ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಈ ಉದ್ಯೋಗದಿಂದಲೇ ನಮ್ಮ ಜೀವನ ನಡೆಯುತ್ತಿರುವುದರಿಂದ ನಾವು ಬಂದ ವೇಳೆಯಲ್ಲಿ ಗ್ಯಾಸ್ ತುಂಬಿಕೊಟ್ಟರೆ ಅನುಕೂಲವಾಗುತ್ತದೆ ನಮ್ಮ ಜೀವನದ ಸ್ಥಿತಿ ಹೇಳಬಾರದಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು
ಆಟೋ ಚಾಲಕ ಕೊಟ್ರೇಶ್ ಮಾತನಾಡಿ ಸಿ ಎನ್ ಜಿ ಗ್ಯಾಸ್ ಬಂಕಿನಲ್ಲಿ ಕೇವಲ ಒಂದು ಲೋಡ್ ಬರುತ್ತಿರುವುದರಿಂದ ಆಟೋ ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ದಿನನಿತ್ಯ ಎರಡು ಲೋಡ್ ಬಂದರೆ ಅನುಕೂಲವಾಗುತ್ತದೆ ಇಲ್ಲದಿದ್ದರೆ ಮತ್ತೊಂದು ಗ್ಯಾಸ್ ಬಂಕ್ ತೆರೆಯಬೇಕು ಈ ಸಮಸ್ಯೆಯಿಂದ ಶಾಲಾ ಮಕ್ಕಳನ್ನು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಹೀಗಾಗಿ ದುಡಿಮೆ ಇಲ್ಲದೆ ಆಟೋ ಸಾಲದ ಕಂತನ್ನು ಸಹ ಕಟ್ಟಲು ಸಾಧ್ಯವಾಗುತ್ತಿಲ್ಲ ದಿನಗಟ್ಟಲೆ ಗ್ಯಾಸ್ ಗಾಗಿ ಕಾಯುತ್ತಿರುವುದರಿಂದ ತಮ್ಮ ದಿನ ನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು ಚಾಲಕರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ಬಂಕಿನ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಬಂಕ್ ಮಾಲಿಕ ವಿನಯ್ ಮಾತನಾಡಿ ಕಳೆದ 15 ದಿನಗಳಿಂದ ಈ ಸಮಸ್ಯೆ ಉಂಟಾಗಿದೆ ಗುಜರಾತ್ ರಾಜ್ಯದಿಂದ ಗ್ಯಾಸ್ ರವಾನೆಯಾಗುತ್ತಿದ್ದು ಕಂಪನಿಯಲ್ಲಿ ನಿರ್ವಹಣೆ ನಡೆಯುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ ಕಂಪನಿ ಕಡೆಯಿಂದ ಯಾವುದೇ ರೀತಿಯ ಮಾಹಿತಿ ಇಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಆಟೋ ಚಾಲಕರಾದ ವೆಂಕಟೇಶ್ ಮಂಜುನಾಥ ವೀರೇಶ್ ತಿಪ್ಪೇಸ್ವಾಮಿ ಅಭಿ ನಾಗೇಶ್ ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
0 Comments