ಬೆಂಗಳೂರು : ಜನರ ಬಳಿ ಆಡಳಿತ.. ಜನರ ಕಷ್ಟಗಳನ್ನ ಪರಿಹರಿಸೋದೇ ನಮ್ಮ ಕಾಯಕ ಇದೇ ದ್ಯೇಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದೀಗ ಆಡಳಿತ ಯಂತ್ರವನ್ನ ಜನರ ಬಳಿಗೆ ಕೊಂಡೊಯ್ಯುತ್ತಿದೆ. ಸಿಎಂ ಸಿದ್ದರಾಮಯ್ಯ ಇಂದು ಮೆಗಾ ಜನತಾ ದರ್ಶನ ಮಾಡ್ತಿದ್ದಾರೆ.ಬೆಳಗ್ಗೆಯಿಂದ ಜನರ ಅಹವಾಲು ಆಲಿಸ್ತಿದ್ದು, ಸಿಎಂ ಗೃಹ ಕಚೇರಿಗೆ ಕೃಷ್ಣಾಗೆ ಸಾವಿರಾರು ಜನರು ಹರಿದು ಬಂದಿದ್ದಾರೆ.
ಇಂದು ಬೆಳಗ್ಗೆಯಿಂದಲೆ ಜನಸ್ಪಂದನಾ ಹೆಸರಿನಲ್ಲಿ, ಸಿಎಂ ಸಿದ್ದರಾಮಯ್ಯರ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಾವಿರಾರು ಜನ ಸಿಎಂ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಕೆಲವರಿಗೆ ಸಿಎಂ ಅವರು ಕೂತಲ್ಲೇ ಪರಿಹಾರ ನೀಡಿ ಸ್ಪಂದಿಸುತ್ತಿದ್ದಾರೆ.
ಗ್ರಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಜನತಾದರ್ಶನ ಜನತಾದರ್ಶನದ ವೇಳೆ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಜರುಗಿತು.ಜನತಾದರ್ಶನ ವೇಳೆ ಇಲಾಖೆಯ ಕುರಿತಂತೆ ಮಾಹಿತಿಗೆ ಹುಡುಕಾಟ ನಡೆಸಲಾಗಿತ್ತು.
ಈ ವೇಳೆ ಆ ಎಲ್ಲಿ ಅಧಿಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅದಕ್ಕೆ ಕೆಲ ಅಧಿಕಾರಿಗಳು ಊಟಕ್ಕೆ ಹೋಗಿದ್ದಾರೆ ಅಂದಿದ್ದಕ್ಕೆ, ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆದರು. ನಾನೇ ಇಲ್ಲಿ ಹಸಿದುಕೊಂಡು ಕೂತಿದ್ದೇನೆ.ಜನತಾದರ್ಶನ ಮುಗಿಯುವ ತನಕ ಯಾರು ಹೋಗಬೇಡಿ ಎಂದು ಗರಂ ಆದರು.ಸಿಎಂ ಸೂಚನೆ ಹಿನ್ನೆಲೆ ಮೈಕ್ ನಲ್ಲಿ ಅಧಿಕಾರಿಗಳು ಅನೌನ್ಸ್ ಮಾಡಿದರು. : ಬೆಂಗಳೂರಿನಲ್ಲಿ ಸಿಎಂ ಜನತಾ ದರ್ಶನ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಅಹವಾಲು, ದೂರುಗಳನ್ನು ಸಲ್ಲಿಸುತ್ತಿದ್ದಾರೆ
ಮಗನಿಗೆ ಕಿಡ್ನಿ ಸಮಸ್ಯೆ ಇದೆ ವರ್ಗಾವಣೆ ಮಾಡಿ ಎಂದು ಶಿಕ್ಷಕರೊಬ್ಬರು ಸಿಎಂ ಬಳಿ ಕಣ್ಣೀರಿಟ್ಟಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ತಮ್ಮನ್ನು ಕನಕಪುರಕ್ಕೆ ವರ್ಗಾವಣೆ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.ನನ್ನ ಮಗನಿಗೆ ಕಿಡ್ನಿ ಸಮಸ್ಯೆ ಇದೆ. ಟ್ರೀಟ್ ಮೆಂಟ್ ಗೋಸ್ಕರ ಕನಕಪುರಕ್ಕೆ ಪ್ರತಿ ಸಾರಿ ಹೋಗಬೇಕು, ಆಸ್ಪತ್ರೆ ಇದ್ದ ಕಡೆ ವರ್ಗಾವಣೆ ಮಾಡಿಕೊಡಿ ಎಂದು ಶಿಕ್ಷಕರೊಬ್ಬರು ಸಿಎಂ ಬಳಿ ಕಣ್ಣೀರಿಟ್ಟಿದ್ದಾರೆ.ಶಿಕ್ಷಕನ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ತಕ್ಷಣ ವರ್ಗಾವಣೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಹಿಳೆಯೊಬ್ಬರು ನನ್ನ ಮಗನ ಆಪರೇಷನ್ ಗೆ ಸಹಾಯ ಮಾಡಿ ಸಿಎಂ ಬಳಿ ಮನವಿ ಸಲ್ಲಿಸಿದ್ದಾರೆ. ಅದೇ ರೀತಿ ಲೈನ್ ಮ್ಯಾನ್ ಒಬ್ಬರು ಕೆಲಸ ಮಾಡುವಾಗ ನನ್ನ ಕೈ ಹೋಗಿದೆ. ಇದಕ್ಕೆ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಹೀಗೆ ಹಲವಾರು ಸಮಸ್ಯೆ, ದೂರುಗಳನ್ನು ಹೊತ್ತ ಸಾರ್ವಜನಿಕರು ಸಿಎಂ ಬಳಿ ದೂರು, ಅಹವಾಲು ಸಲ್ಲಿಸಿ ಸಹಾಯಕ್ಕಾಗಿ ಮೊರೆ ಇಡುತ್ತಿರುವ ದೃಶ್ಯಗಳು ಕಂಡು ಬಂದಿತು.
0 Comments