ಚಳ್ಳಕೆರೆ ಜ.4 ಹೊರಗೆ ನೋಡಲು ಶೌಚಾಲಯ ಕಟ್ಟಡ ಸುಂದರವಾಗಿದೆ ಅದೇರೀತಿ ಒಳಗೂ ಸ್ವಚ್ಚತೆ ಮಾಡಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತೆ ಹಿರಿಯಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಎಂ.ವಿಜಯ್ ರವರು ಹೇಳಿದರು. ನಗರದ ಖಾಸಗಿ ಬಸ್ ನಿಲ್ದಾಣ ದಲ್ಲಿರುವಶೌಚಾಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತಮಾಡಿದರು. ಜಿಲ್ಲಾ ನ್ಯಾಯಾದೀಶರು ಶೌಚಾಲಯ ವೀಕ್ಷಣೆಗೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದ ಸಾರ್ವಜನಿಕರು ಸ್ವಾಮಿ ಮೂತ್ರ ವಿಸರ್ಜನೆಗೆ ಎರಡೂ ಪಡೆಯುತ್ತಾರೆ ಆದ್ದರಿಂದ ಯಾರೂ ಮೂತ್ರಾಕಯಕ್ಕೆ ಹೋಗದೆ ಬಸ್ ನಿಲ್ದಾಣದ ಸಮೀಪದ ರಸ್ತೆ ಬದಿಯ ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ಗೊಬ್ಬು ವಾಸನೆ ಬರುತ್ತಿದೆ. ರಾತ್ರಿ ವೇಳೆ ಶೌಚಾದ ತ್ಯಾಜ್ಯವನ್ನು ಚರಂಡಿಗೆ ಬಿಡುತ್ತಾರೆ ಎಂದು ದೂರು ಹೇಳಿಕೊಂಡರು. ಸ್ಥಳದಲ್ಲಿ ಪೌರಾಯುಕ್ತ ಚಂದ್ರಪ್ಪ ಕೂಡಲೆ ಮಾತ್ರಕ್ಕೆ ಎರಡು ರೂ ಹಣ ವಸೂಲಿ ನಿಲ್ಲಿಸ ಬೇಕು ಶೌಚಾಲಯದ ತ್ಯಾಜ್ಯ ಚರಂಡಿಗೆ ಬಿಡುವುದನ್ನು ನಿಲ್ಲಿಸುವಂತೆ ನ್ಯಾಯಾದೀಶರು ಸೂಚನೆ ನೀಡಿದರು. ಪೌರಾಯುಕ್ತ ಚಂದ್ರಪ್ಪ ಮೂತ್ರ ವಿಸರ್ಜನೆಗೆ ಎರಡೂ ವಸೂಲಿ ಮಾಡಿದರೆ ಕ್ರಮ ಕೈಕೊಳ್ಳಲಾಗುವುದು ಎಂದು ಶೌಚಾಲಯ ಗುತ್ತಿಗೆ ದಾರನಿಗೆ ಎಚ್ಚರಿಕೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ವಿಜಯ್ ರವರು ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಪರಿಶೀಲಿಸಿ ನಂತರ ಖಾಸಗಿ ಬಸ್ ನಿಲ್ದಾಣದ ಪರಿಶೀಲನೆ ನಡೆಸಿ ನಂತೆ ಸರಕಾರಿ ಸಾರಿಗೆ ಬಸ್ ನಿಲ್ದಾಣ ಹಾಗೂ ಶೌಚಾಲಯ ವೀಕ್ಷಣೆ ಮಾಡಿದರು . ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments