ಚಳ್ಳಕೆರೆ ಡಿ.26 ಸಾರಿಗೆ ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ಗ್ರಾಮಗಳಿಗೆ ಶಕ್ತಿ ಯೋಜನೆಯಡಿ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು ಗ್ರಾಮೀಣ ಜನರು ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ವಿವಿಧ ಗ್ರಾಮಗಳಿಗೆ ಸಂಚರಿಸಲು ಸಹಕಾರಿಯಾಗುವಂತೆ ಎರಡು ಸಾರಿಗೆ ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನಸಂಪರ್ಕ ಸಭೆ ಆಯೋಜಿಸಿದಾಗ ಗ್ರಾಮೀಣ ಜನರ ಬೇಡಿಯಂತೆ ಶಾಲೆ ಮಕ್ಕಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಸಾಣೀಕೆರೆ.ಕಾಪರಹಳ್ಳಿ.ಹುಲಿಕುಂಟೆ.ಬೆಳೆಗೆರೆ. ನಾರಾಯಣಪುರ.ಗೊರ್ಲತ್ .ಕಮರಹಳ್ಳಿ.ಬೋವಿಕಾಲೋನಿ ಮಾರ್ಗವಾಗಿ ಬೆಳಗ್ಗೆ ಶಾಲಾ ಪ್ರಾರಂಭ ಹಾಗೂ ಶಾಲೆ ಬಿಡುವ ಸಮಕ್ಕೆ ಬಸ್ ಸಂಚರಿಸಲಿದೆ ಅದೇ ರೀತಿ ಮತ್ತೊಂದ ಚಳ್ಳಕೆರೆ. ಬೊಮ್ಮಸಂದ್ರ.ಕರಿಕೆರೆ .ಮಿರಸಾಭಿಹಳ್ಳಿ ಮಾರ್ಗವಾಗಿ ಮತ್ತೊಂದು ಬಸ್ ಸಂಚರಿಸಲಿದೆ
ಎರಡು ಗ್ರಾಮೀಣ ಮಾರ್ಗದಲ್ಲಿ ಬಹಳ ವರ್ಷಗಳಿಂದ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದರು ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿಯೋಜನೆ ಜಾರಿಗೆ ತಂದ ಮೇಲೆ ಸಾರಿಗೆ ಬಸ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಸಾರಿಗೆ ಸಚಿವರು ಹೊಸ ಬಸ್ ಗಳ ಖರೀದಿಗೆ ಮುಂದಾಗಿದ್ದು ಹಂತಹಂತಬಾಗಿ ಸಾರಿಗೆ ಬಸ್ ಗಳನ್ನು ಎಲ್ಲಾ ಗ್ರಾಮಗಳಿಗೆ ಬಿಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಶಾಸಕರ ಬಳಿ ಡಿಪೋದಿಂದ ಬರುವ ಹಾಗೂ ವಿವಿಧ ಕಡೆಯಿಂದ ಬರುವ ಸಾರಿಗೆ ಬಸ್ ಗಳಿಗೆ ವಿದ್ಯರ್ಥಿನಿಕಯದ ಬಳಿ ನಿಲ್ಲಿಸದೆ ಬರುತ್ತಾರೆ ನಾವು ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಬರುವಂತ ಪರಿಸ್ಥಿತಿ ಇದೆ ಸಾರಿಗೆ ಬಸ್ ನಿಲ್ಲಿಸಿ ಕರೆತರುವ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳ ಬಳಿ ಅಳಲು ತೋಡಿಕೊಂಡರು. ಸ್ಥಳದಲ್ಲಿ ಸಾರಿಗೆ ಡಿಪೋ ವ್ಯವಸ್ಥಾಪರಿಗೆ ಶಾಲಾ ಮಕ್ಕಳನ್ನು ಕರೆ ತರುವ ವ್ಯವಸ್ಥೆ ಮಾಡುವಂತೆ ಸೂಚಿಸಿದು. ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ.ಜಿಪಂ ಕೆಡಿಪಿ ಸದಸ್ಯ ರಂಗಸ್ವಾಮಿ.ಮಾಜಿ ನಗರಸಭೆ ಸದಸ್ಯರಾದ ಚೇತನ್ ಕುಮಾರ್. ಪ್ರಸನ್ನಕುಮಾರ್. ಡಿಪೋ ವ್ಯವಸ್ಥಾಪಕ ಪ್ರಭು.ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments