ಚಳ್ಳಕೆರೆ ನ.8 ಸಾಮಾಜಿಕ ಭದ್ರತಾ ಪಿಂಚಿಣಿ ಪಡೆಯಲು ಶಾಸಕರ ಬಳಿ ಬರಬೇಕು ನಿಗಧಿತ ಅವಧಿಯೊಳಗೆ ಸಂಬಳ ಮಾಡಿಕೊಡದೆ ನಿನ್ನ ಬಳಿ ಇಟ್ಟುಕೊಂಡರೆ ಮುಗಿತಾ ಎಂದು ಶಾಸಕ ಟಿ.ರಘುಮೂರ್ತಿ ಗರಂ.
![](https://janadhwani.in/wp-content/uploads/2023/11/IMG-20231108-WA0186-1.jpg)
ತಾಲೂಕಿನಲ್ಲಿ ಬರಗಾಲವಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರು. ಮೇವು ಕೊರತೆಯಾಗದಂತೆ ಮುಂಜಾಗ್ರತೆ ವಹಿಸ ಬೇಳು ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಮೂಲಕ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಬೇಕು. ಗ್ರಾಮೀಣ ಭಾಗದಲ್ಲಿರು ಕುಡುವ ನೀರಿನ ಘಟಕಗಳ ದುರಸ್ಥಿ .ಬೀದಿ ದೀಪ.ಸ್ವಚ್ಚತೆ. ಬೆಳೆ ವಿಮೆ.ಬೆಳೆ ಪರಿಹಾರ. ವೃದ್ದರಿಗೆ.ಅಂಗವಿಕರಿಗೆ. ವಿಧವೆ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಿಣಿಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಲೆದಾಡದಂತೆ. ಸ್ಮಶಾನ ಅಭಿವೃದ್ಧಿ. ರೈತರ ಜಮೀನುಗಳಿಗೆ ಹೋಗುವ ದಾರಿ ಹಾಗೂ ಒತ್ತುವರಿ ತೆರವು.ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
![](https://janadhwani.in/wp-content/uploads/2023/11/IMG-20231108-WA0171.jpg)
0 Comments