ನಾಯಕನಹಟ್ಟಿ:: ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದಲ್ಲಿ ಸಾಮಾಜಿಕ ನಾಟಕ ಪ್ರೇಮಪಂಜರ ಅರ್ಥಾರ್ಥ ರವಿಚಂದ್ರ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಬರಗಾಲದ ನಡುವೆ ಕಲಾವಿದರು ಸಾಮಾಜಿಕ ನಾಟಕ ಪ್ರದರ್ಶನ ಮಾಡುವುದು ತುಂಬಾ ಕಷ್ಟ.
ಸಮಾಜದಲ್ಲಿ ಸಾಹಿತ್ಯ ಕಲೆ ಸಂಗೀತ ನೃತ್ಯ ಎಲ್ಲವನ್ನು ಉಳಿಸಿಕೊಳ್ಳಲು ಸಾಮಾಜಿಕ ನಾಟಕಗಳು ತುಂಬಾ ಮುಖ್ಯ ಎಂದರು.
ಸಭೆಯಲ್ಲಿ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ . ಮುದಿಯಪ್ಪ ಮಾತನಾಡಿ ಜೋಗಿಹಟ್ಟಿ ಗ್ರಾಮ ಬುಡಕಟ್ಟು ಸಂಸ್ಕೃತಿ ಆಚರಣೆಗಳು ಸೇರಿದಂತೆ ಕಲೆ ಮತ್ತು ಸಾಂಸ್ಕೃತಿಗೆ ಅಷ್ಟೇ ಹೆಸರುವಾಸಿ ಆದ ಗ್ರಾಮ ಗ್ರಾಮೀಣ ಪ್ರದೇಶದ ಕಲೆ ಇಂದಿನ ದಿನಮಾನಗಳಲ್ಲಿ ಅಳಿವಿನಂಚಿನಲ್ಲಿದೆ ಗ್ರಾಮೀಣ ಜನ ಜೀವನವನ್ನು ಕಥಾನಕವನ್ನಾಗಿಸಿಕೊಂಡು ಪಾತ್ರಗಳಿಗೆ ಜೀವ ತುಂಬುವುದು ಕಷ್ಟಕರವಾದ ಕಲೆಯಾಗಿದೆ ಗ್ರಾಮದ ಪ್ರತಿಯೊಬ್ಬರೂ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸಿ ಆರ್ಥಿಕವಾಗಿ ನೆರವು ನೀಡಿ ಬೆಳೆಸಬೇಕಿದೆ ಎಂದರು.
ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಮಾತನಾಡಿ ನಮ್ಮ ಭಾರತ ದೇಶ ಸಾಹಿತ್ಯ ಕಲೆ ಸಂಸ್ಕೃತಿಗೆ ಶೌರ್ಯ ಪರಾಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ.
ಕಲೆ ಮತ್ತು ಸಾಂಸ್ಕೃತಿ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಪ್ರದೇಶದ ಯುವಕರು ಮತ್ತು ಗ್ರಾಮಸ್ಥರು ಮುಂಚೂಣಿಯಲ್ಲಿರಬೇಕು ಎಂದರು.
ಇನ್ನೂ ಸಭೆಯಲ್ಲಿ ನಾಯಕನಹಟ್ಟಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಕಾರ್ಯಧ್ಯಕ್ಷ ಎಸ್ ಟಿ ಬೋರ್ ಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಟಿ. ರಂಗಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಾಗೂ ಸಭೆಯ ಅಧ್ಯಕ್ಷತೆಯನ್ನು ಎಚ್ ಸಿ ತಿಪ್ಪೇಸ್ವಾಮಿ ವಹಿಸಿದ್ದರು
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭೀಮಕೊಂಡನಹಳ್ಳಿ ಎಸ್ ಓ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಬೋರಯ್ಯ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರಾದ ಎಸ್. ವೆಂಕಟೇಶ್ ದಳಪತಿ, ಎಸ್ ಸಿ ನಾಗಪ್ಪ, ಸದಸ್ಯೆ ಮಾಜಿ ಉಪಾಧ್ಯಕ್ಷೆ ರೇವಮ್ಮ ಡಿ ಕೆ ಬಸವರಾಜ್, ಬಿ ಮಂಜಮ್ಮ, ಸರೋಜಮ್ಮ ಕರಿಬಸವರಾಜ್, ಮಂಜಮ್ಮ, ಮಂಜುಳಾ ರಂಗಸ್ವಾಮಿ ಭೀಮಗೊಂಡನಹಳ್ಳಿ, ಜಿ ಒ.ಓಬಳೇಶ್, ಮತ್ತು ಗ್ರಾಮದ ಮುಖಂಡರಾದ ಎಂ ಜಿ ತಿಪ್ಪೇಸ್ವಾಮಿ, ಜಿ ಸಿ ಬಾಲಯ್ಯ ಕಾರ್ಯದರ್ಶಿ ಉ.ಗ್ರಾ. ಅಭಿವೃದ್ಧಿ ಸಂಸ್ಥೆ ಜೋಗಿಹಟ್ಟಿ, ಎಚ್ ಬಿ ತಿಪ್ಪೇಸ್ವಾಮಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕರ ಕಂಪನಿ ಜೋಗಿಹಟ್ಟಿ, ಜಿ ಮುರುಳಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಜೋಗಿಹಟ್ಟಿ, ಸಿ ಎಸ್ ಚನ್ನಪ್ಪ, ಎಸ್ ಜಿ ವೆಂಕಟೇಶ್ ಗುತ್ತಿಗೆದಾರರು. ಎಂ ಜಿ ಬಸವರಾಜ್, ಬಿ ಕರಿಬಸವರಾಜ್, ಸಿ ಕೆ ಬಾಲರಾಜ್, ಶಾಂತಪ್ಪ, ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ಸಂಗೀತ ನಿರ್ದೇಶಕ ಎಸ್ ಬಿ ಗೋವಿಂದಪ್ಪ, ಸಂಘದ ಮ್ಯಾನೇಜರ್ ಎಂ ಬಿ ಸಣ್ಣ ಬಾಲಯ್ಯ, ಕೆ ಜಿ ಮಂಜುನಾಥ್, ಸ್ಟೇಜ್ ಮ್ಯಾನೇಜರ್ ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು ವಿವಿಧ ಹಳ್ಳಿಗಳ ಕಲಾವಿದರು ಇದ್ದರು
0 Comments