ಚಳ್ಳಕೆರೆ ಆ.20.ನಗರಕ್ಕೆ ಹೊಂದಿಕೊಂಡ ಸುತ್ತಲಿನ ಪ್ರದೇಶದಲ್ಲಿ ಸಾಕು ಹಂದಿಗಳು ಕಳೆದ ಕೆಲ ದಿನಗಳಿಮದ ರೈತರ ಹೊಲದಲ್ಲಿನಬೆಳೆಗಳನ್ನು ನಾಶಪಡಿಸುತ್ತಿ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು ಇದು ನಗರಕ್ಕೆ ಹೊಂದಿಕೊಂಡ ನರಹರಿ ನಗರ. ಮುಖ್ಯ ರಸ್ತೆಗೆ ಹೊಂದಿಕೊಂಡ ಪೆಟ್ರೋಲ್ ಬಂಕ್ ಹಿಂಭಾಗ ರೈತರು ಬೆಳೆದ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಹಾಳು ಮಾಡುತ್ತಿದ್ದು ಹಾಕಿದ ಬಂಡವಾಳ ಕೈಸೇರದೆ ನಷ್ಟ ಅನುಭವಿಸುವಂತಾಗಿದೆ.
ನರಹರಿ ನಗರದ ಮಹೇಶ್ ಎಂಬ ರೈತ 5 ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದು ಈಗಾಗಲೆ ಸಾಕು ಹಂದಿಗಳು ರಾತ್ರಿವೇಳೆ ಜಮೀನಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿವೆ ನನಗೆ ಅನಾರೋಗ್ಯದಿಂದ ಕಾಲಿಗೆ ಗ್ಯಾಂಗ್ ರಿಂಗ್ ಆಗಿ ಒಂದು ಕಾಲನ್ನು ತೆಗೆಯಲಾಗಿದ್ದು ನಾನು ಜಮೀನಿಗೆ ಹೋಗಲು ಆಗುತ್ತಿಲ್ಲ ಇರುವ ಒಬ್ನ ಮಗ ರಾತ್ರಿ ನಿದ್ದೆಗೆಟ್ಟು ಹಂದಿಗಳನ್ನು ಕಾಯುವ ಪರಿಸ್ಥಿತಿ ಬಂದೆದೆ ಈಗಗಲೆ ಸುನಾರು ಒಂದು ಎಕರಗೂ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು ರಸ್ತೆಯ ಮುಖ್ಯರಸ್ತೆಗೆ ಹೊಂದಿಕೊಂಡ ಪೆಟ್ರೊಲ್ ಬಂಕ್ ನ ಹಿಂಭಾಗದಲ್ಲಿ ಮಂಜುನಾಥ ಸೇರಿ ಇಬ್ಬರು ಬೇರೆಯವರ ಜಮೀನು ಗುತ್ತಿಗೆ ಪಡೆದು ಬಂಡವಾಳ ಹಾಕಿ ಬಿತ್ತನೆ ಮಾಡಿದ ಬೆಳೆಗಳನ್ನು ಸಾಕು ಜನನ ಹಂದಿಗಳು ಹಾಳು ಮಾಡಿರುವುದರಿಂದ ಬೇಸತ್ತು ಜಮೀನಿಗೆ ಹೋಗುವುದನ್ನೇ ಕೈಬಿಟ್ಟಿದ್ದಾರೆ.
ಈಗಾಗಲೆ ರೈತರು ವಿದ್ಯುತ್ ಕಣ್ಣಾಮುಚ್ಚಾಲೆ.ಸಮರ್ಪಕ ಮಳೆ ಇಲ್ಲದೇ ಒಂದೆಡೆ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಅದ್ಹೇಗೋ ಜೀವ ಹಿಡಿದ ಮೆಕ್ಕೆಜೋಳ ಸೇರಿ ಇತರ ಬೆಳೆಗಳನ್ನು ಸಾಕು ಹಂದಿಗಳ ಹಿಂಡು ನಾಶಪಡಿಸುತ್ತಿದೆ. ಸಾಕು ಹಂದಿಗಳ ಹಾವಳಿ ಜಾಸ್ತಿಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಹಂದಿಗಳು ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ’’ ಎಂದು ಈ ಪ್ರದೇಶದ ರೈತರು ಅಳಲುತೋಡಿಕೊಂಡಿದ್ದಾರೆ. ಹಂದಿ ಮಾಲಿಕರು ನೆಮ್ಮದಿಯಿಂದ ನಿದ್ದೆ ಮಾಡಿದರೆ ಇತ್ತ ರೈತರ ನೆಮ್ನದಿ ಹಾಳು ಮಾಡುತ್ತಿವೆ. ಸಾಕು ಹಂದಿಗಳಿಂದ ರೈತರ ಬೆಳೆ ಹಾಳಾಗಿದ್ದು ಇದರ ನಷ್ಟ ತುಂಬುವವರು ಯಾರೂ ?. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಹಂದಿಗಳು ಹಂದಿಗಳ ಹಾವಳಿ ನಿಯಂತ್ರಣ ಮಾಡುವ ಜತೆಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
0 Comments