ಚಳ್ಳಕೆರೆ ಜನಧ್ವನಿ ವಾರ್ತೆ ಡಿ.6 ಚರಂಡಿಗಳು ಸ್ವಚ್ಚತೆಯಿಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲಿ ನಿಂತು ಸಾಂಕ್ರಮಿಕ ರೋಗ ಬೀತಿಯಲ್ಲಿ ಬುಡಕಟ್ಟು ಜನರು ಜೀವನ ಸಾಗಿಸುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರದ ಕೂಗಳತೆಯ ದೂರದಲ್ಲಿರುವ ದೊಡ್ಡ ಗೊಲ್ಲರಹಟ್ಟಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು ಒಂದು ವರ್ಷದಿಂದಲೂ ಚರಂಡಿ ಸ್ವಚ್ಚತೆಯಿಲ್ಲದೆ ತ್ಯಾಜ್ಯ ನೀರು ರಸ್ತೆ ಮೇಲೆ ನಿಂತು ಸೊಳ್ಳೆಗ ಉತ್ಪತ್ತಿ ಕೇಂದ್ರವಾಗಿದ್ದು ಸಾಂಕ್ರಮಿಕ ರೋಗ ಭೀತಿಯಲ್ಲಿ ಇಲ್ಲಿನ ಜನರು ನಿತ್ಯ ಜೀವನ ಸಾಗಿಸುವಂತಾಗಿದೆ.
![](https://janadhwani.in/wp-content/uploads/2023/12/IMG-20231206-WA0291.jpg)
ಕೊಳಚೆ ನೀರಿನ ಸಮೀಪವೆ ಅಂಗನವಾಡಿ ಕೇಂದ್ರವಿದ್ದು ಮಕ್ಕಳು ದಿನ ನಿತ್ಯ ಅಂಗನವಾಡಿ ಕೇಂದ್ರಕ್ಕೆ ಹೋಗುವಾಗ ಕೊಳಚೆ ನೀರು ತುಳಿದುಕೊಂಡು ದಾಟಿ ಕೊಂಡು ಹೋಗ ಬೇಕಾದ ಅನಿವಾರ್ಯತೆ.ಅಂಗನವಾಡಿ ಕೇಂದ್ರಕ್ಕೆ ಗರ್ಭಿಣಿ.ಬಾಣಂತಿಯರೂ ಸಹ ಪೌಷ್ಠಿಕ ಆಹಾರ ಪಡೆಯಲು ಹೋಗುತ್ತಾರೆ.
ಆರೋಗ್ಯ ಇಲಾಖೆ ನೀರು ನಿಲ್ಲಂತೆ ನೋಡಿಕೊಳ್ಳು ಕಾಲರ.ಮಲೇರಿಯಾ.ಡೆಂಗ್ಯೋ ಜ್ವರ ಬರುತ್ತದೆ ನಿಮ್ಮ ಸುತ್ತ ಮುತ್ತ ಸ್ವಚ್ಚತೆ ಕಾಪಾಡಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹಣ ಹೊಳೆ ಹರಿಸುತ್ತದೆ ಆದರೆ ಇತ್ತ ಗ್ರಾಮಗಳ ಸ್ವಚ್ಚತೆ ಇಲ್ಲದೆ ಸಾಂಕ್ರಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.
![](https://janadhwani.in/wp-content/uploads/2023/12/IMG-20231206-WA0284.jpg)
![](https://janadhwani.in/wp-content/uploads/2023/12/IMG-20231206-WA0282.jpg)
0 Comments