ಹಾಯ್ಕಲ್ ಆ.19. ದೊಡ್ಡ ಪ್ರಮಾಣದ ನೀರು ಸಂಗ್ರಹವಾಗಿ ನೀರಿನ ಮೇಲೆ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಬೀತಿಯಲ್ಲಿ ಗ್ರಾಮಸ್ಥರು. ಹೌದು ಚಿತ್ರದುರ್ಗ ತಾಲೂಕಿನ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬೆಳಗಟ್ಟ ಗ್ರಾಪಂ ವ್ಯಾಪ್ತಿ ಹಾಯ್ಕಲ್ಲಿ ಗ್ರಾಮದಲ್ಲಿ ತ್ಯಾಜ್ಯ ನೀರು ನಿಂತು ಕೆರೆಯಂತಾಗಿದ್ದು ಸಮೀಪದಲ್ಲೇ ಕುಡಿಯುವ ನೀರಿನ ಮಿನಿಟ್ಯಾಂಕ್ ಇದ್ದು ಗ್ರಾಮದ ಹಾಗೂ ಕುಡಿಯುವ ನೀರಿನ ಟ್ಯಾಂಕ್ ನೀರು ಬಂದು ನಿಂತು ಕೆರೆಯಂತಾಗಿದ್ದು ಸುಮಾರು ಎರಡು ವರ್ಷಗಳು ಕಳೆದರು ಈ ಸಾಕಷ್ಟು ಬಾರಿ ಅಧಿಕಾರಿಗಳ ಗಮನ ಸೆಳೆದರೂ ದುರಸ್ಥಿ ಭಾಗ್ಯ ಮಾತ್ರ ಕಂಡಿಲ್ಲ
ಈಹಾಗಲೇ ಕವಾಡಿಗರ ಹಟ್ಟಿ ಕಲುಷಿತ ನೀರು ಘಟನೆ. ಆಶ್ರಯ ಬಡಾವಣೆ ಜನರು ಸಾಂಕ್ರಮಿಕ ರೋಗಗಳಿಗೆ ತುತ್ತಾಗಿ ಸಾವು ನೋವು ಕಂಡ ಬೆನ್ನಲ್ಲೇ ಎಚ್ಚತ್ತಾ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಕುಡಿಯುವ ನೀರಿನ ಮೂಲ ಹಾಗೂ ಚರಂಡಿಗಳ ಸ್ವಚ್ಚತೆಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ.ಆಶಾ.ಅಂಗನವಾಡಿ.ಶಾಲಾ ಮಕ್ಕಳಿಂದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಪಂಜಿನ ಮೆರವಣಿ.ಜಾಗೃತಿ ಜಾಥ ಮಾಡಲು ಮುಂದಾಗಿದ್ದು ಹಾಯ್ಕಲ್ ಗ್ರಾಮದಲ್ಲಿ ಮುಖ್ಯ ರಸ್ತೆಯ ಬಳಿಯೇ ತ್ಯಾಜ್ಯ ನೀರು ನಿಂತು ಕೆರೆಯಂತಾದರೂ ಸಹ ನಿಂತ ನೀರು ಹರಿಯುವಂತೆ ಮಾಡಲು ಅಧಿಕಾರಿಗಳು ಇಚ್ಚಾ ಶಕ್ತಿ ತೋರುತ್ತಿಲ್ಲ ಗ್ರಾಮಸ್ಥರು ಮಾತ್ರ ಸಾಂಕ್ರಮಿಕ ರೋಗ ಭೀತಿಯಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಗಿದೆ ಈಗಲಾದರೂ ಸಂಬಂಧ ಪಟ್ಟ ಅಧಿಜಾರಿಗಳು ನಿಂತ ನೀರು ಹರಿಯುವಂತೆ ಮಾಡುವರೇ ಕಾದು ನೋಡ ಬೇಕಿದೆ.
ಗ್ರಾಮಸ್ಥರ ಆತಂಕ ಜಿಲ್ಲೆಯ ತುರುವ ನೂರು ಹೋಬಳಿ ಹಾಯಕಲ್ ಗ್ರಾಮದಲ್ಲಿ ಇರುವ ಬಾವಿಗೆ ಕಲುಷಿತ ನೀರು ಹರಿದು ಬಂದ ಕಾರಣ ಪರಿಸರ ತುಂಬಾ ಹದಗೆಟ್ಟು ಹೋಗಿದೆ ಆದ್ದರಿಂದ ಕೂಡಲೆ ದುರಸ್ಥಿ ಪಡಿಸುವಂತೆ ಆಗ್ರಹ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments