ಚಿತ್ರದುರ್ಗ ಮಾ 13:
ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ, ಕಾಮಸಮುದ್ರ, ನೇರ್ಲಗುಂಟೆ, ಓಬಣ್ಣನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಿ.ಓಬನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ, ಸಮಾಪನೆಗೊಂಡಿರುವ ಸಹಕಾರ ಸಂಘಗಳ ರದ್ದತಿಗೆ ಕ್ರಮವಹಿಸಲಾಗಿದೆ.
ಆದೇಶಗಳ ರೀತ್ಯಾ ಸಹಕಾರ ಸಂಘಗಳ ನಿರೀಕ್ಷಕರು, ಚಳ್ಳಕೆರೆ ತಾಲ್ಲೂಕು ಇವರನ್ನು ವಿವಿಧ ಸಹಕಾರ ಸಂಘಗಳ ಸಮಾಪನಾಧಿಕಾರಿಯಾಗಿ ನೇಮಿಸಲಾಗಿರುತ್ತದೆ. ಸಂಘದ ನೊಂದಣಿ ರದ್ಧತಿಯಿಂದ ಬಾಧಿತರಾಗುವ ಸಂಘದ ಷೇರುದಾರರಿಂದ, ಇತರೆ ಸಾರ್ವಜನಿಕರಿಂದ ಇದೇ ಮಾರ್ಚ್ 25 ರವೆರಗೆ ಆಕ್ಷೇಪಣೆಗಳನ್ನು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಟಿಎಪಿಸಿಎಂಎಸ್ ಕಟ್ಟಡ, ಬೆಂಗಳೂರು ರಸ್ತೆ, ಚಳ್ಳಕೆರೆ ಕಚೇರಿಯಲ್ಲಿ ಖುದ್ದು ಹಾಜರಾಗಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಿಗಧಿಪಡಿಸಿದ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಸಂಘದ ನೊಂದಣಿ ರದ್ದತಿಗೆ ಯಾರಿಂದಲೂ ಯಾವುದೇ ತಕರಾರು ಇರುವುದಿಲ್ಲವೆಂದು ಪರಿಗಣಿಸಿ ಮುಂದಿನ ಕ್ರಮಗೊಳ್ಳಲಾಗುವುದು ಎಂದು ಚಳ್ಳಕೆರೆ ಸಹಕಾರ ಸಂಘಗಳ ನಿರೀಕ್ಷಕರು ಹಾಗೂ ಸಮಾಪನಾಧಿಕಾರಿ ಎಸ್.ಸಂಜಯ್ರಾಂ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments