ಹಿರಿಯೂರು :
ರಾಜ್ಯದ ಎಲ್ಲಾ ಸಹಕಾರಿ ಸಂಘಗಳಿಂದ ಸಹಕಾರ ಶಿಕ್ಷಣ ನಿಧಿಗೆ ತನ್ನ ನಿವ್ವಳಲಾಭದ ಶೇ.1 ರಷ್ಟು ಮೊತ್ತವನ್ನು ನೀಡಬೇಕಾಗಿದ್ದು, ಇದು ಸಹಕಾರ ಸಂಘಗಳಿಂದ ಸಹಕಾರ ಶಿಕ್ಷಣಕ್ಷೇತ್ರದ ಪ್ರಗತಿಗೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ ಎಂಬುದಾಗಿ ಚಿತ್ರದುರ್ಗ ಯೂನಿಯನ್ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್ ಹೇಳಿದರು.
ನಗರದ ವಾಣಿವಿಲಾಸ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಫೆಡರೇಶನ್ ಲಿಮಿಟೆಡ್ ಸಂಸ್ಥೆಯ ಪರವಾಗಿ ವಾಣಿವಿಲಾಸ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ ಪಡೆದು ನಂತರ ಅವರು ಮಾತನಾಡಿದರು.
ಸಹಕಾರ ಶಿಕ್ಷಣ ನಿಧಿಗೆ ಸಹಕಾರಿ ಸಂಘಗಳು ಲಾಭದ ಶೇ.1ರಷ್ಟು ಹಣವನ್ನು ಪ್ರತಿವರ್ಷವೂ ನೀಡುತ್ತಾ ಬರುತ್ತಿವೆ, ಇದರಿಂದ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿಗಳಿಗೆ ಹಾಗೂ ಸಹಕಾರಿ ಸಂಘಗಳ ನೌಕರ ವರ್ಗದವರಿಗೆ ಅಗತ್ಯವಾದ ಹೊಸಹೊಸ ಆವಿಷ್ಕಾರಗಳು, ತರಬೇತಿ, ಸೇರಿದಂತೆ ಸಹಕಾರ ಶಿಕ್ಷಣ ನೀಡಲು ಸಹಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ವೀರಶೈವ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧ ಸಹಕಾರ ಸಂಘಗಳಿಂದ ಸಹಕಾರ ಶಿಕ್ಷಣ ನಿಧಿಯ ಚೆಕ್ ಗಳನ್ನು ಪಡೆಯಲಾಯಿತು ಎಂಬುದಾಗಿ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಯೂನಿಯನ್ ವ್ಯವಸ್ಥಾಪಕರಾದ ಶ್ರೀಮತಿ ಸೌಮ್ಯ, ವಾಣಿವಿಲಾಸ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ, ವಾಣಿವಿಲಾಸ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕರಾದ ಶ್ರೀಮತಿನಂದಿನಿ, ಲೇಖಪಾಲಕರಾದ ಶಿವರಾಜ ನಾಯಕ, ಉಮೇಶ್ ಯಾದವ್, ಚೈತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments