ಚಿತ್ರದುರ್ಗ ಡಿ.5 ಇತ್ತೀಚಿನ ದಿನಗಳಲ್ಲಿ ಗಾಂಧಿ ತತ್ವಗಳು ಕಣ್ಮರೆಯಾಗುತ್ತಿರುವುದರಿಂದ ಕರ್ನಾಟಕ ಸರ್ವೋದಯ ಸಂಘ ರಚನೆಯಾಗಿದ್ದು ಈ ಮೂಲಕ ಶಾಲಾ ಕಸಲೇಜ್ .ಜೈಲ್ .ಸಾರ್ವಜನಿಕ ಸ್ಥಳಗಳಲ್ಲಿ ಗಾಂಧಿತತ್ವಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಗಾಂಧಿ ತತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ರೈತ ಮುಖಂಡ ಹೋರಾಟಗಾರ ಕಸವನಹಳ್ಳಿ ರಮೇಶ್ ಜನಧ್ವನಿ ಡಿಜಿಡಲ್ ಮೀಡಿಯಾ ಗೆ ಮಾಹಿತಿ ನೀಡಿದರು. 5.12.2023ರಂದು ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸರ್ವೋದಯ ಮಂಡಲ ತುಮಕೂರು ಜಿಲ್ಲಾಧ್ಯಕ್ಷರಾದ ಆರ್ ವಿ ಪುಟ್ಟ ಕಾಮಣ್ಣ,ನವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕ ಗಾಂಧಿ ಚಿಂತಕರು ಸೇರಿ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು ಅಧ್ಯಕ್ಷರಾಗಿ ಡಾ: ಎಚ್ ಕೆ ಸ್ವಾಮಿ, ಉಪಾಧ್ಯಕ್ಷರಾಗಿ ಡಾ: ದೊಡ್ಡಮಲ್ಲಯ್ಯ ಮತ್ತು ಎಂ ಆರ್ ದಾಸೇಗೌಡರು ಖಜಾಂಚಿಯಾಗಿ ಎಂ ಗೋವಿಂದಪ್ಪ ತುರುವನೂರು, ಕಾರ್ಯದರ್ಶಿಯಾಗಿ ಎಮ್ ಮಂಜುನಾಥ್ ಕಳ್ಳಿಹಟ್ಟಿ,ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಸವನಹಳ್ಳಿರಮೇಶ್, ಎಸ್ ವಿ ರಂಗನಾಥ್ ಯಾದವರೆಡ್ಡಿ, ಕೆ ಮಹಮ್ಮದ್ ಯೂಸುಫ್,ಮಂಜುನಾಥ್ ಮಾಳಿಗೆ,ಎಂಆರ್ ನಾಗರಾಜ್,ಹಾಗೂ ಮಲ್ಲಿಕಾರ್ಜುನ್ ರವರನ್ನು ಆಯ್ಕೆಮಾಡಲಾಯಿತು ಎಂದು ಕಸವನಹಳ್ಳಿ ರಮೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ದೊಡ್ಡಮಲ್ಲಯ್ಯನವರು ಮಾತನಾಡಿ ಮರೆಯಾಗುತ್ತಿರುವ ಗಾಂಧಿ ಚಿಂತನೆಗಳನ್ನು ಮುನ್ನಡೆಗೆ ತರಬೇಕಾದ ಜವಾಬ್ದಾರಿ ಪ್ರಸ್ತುತ ಸಮಾಜದ ಮುಂದಿದೆ ಎಂದು ಹೇಳಿದರು. ಯಾದವ್ ರೆಡ್ಡಿ ಅವರು ಮಾತನಾಡಿ ಬಹುತ್ವ ಭಾರತದ ಪರಿಕಲ್ಪನೆಯನ್ನು ಉಳಿಸಿ ಬೆಳೆಸಬೇಕು ಇದು ಗಾಂಧೀಜಿಯವರ ಮಹೋನ್ನತ ಆಶಯವಾಗಿತ್ತು ಎಂದು ಹೇಳಿದರು ಮುಂದುವರೆದು ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ತುಮಕೂರು ಜಿಲ್ಲಾಧ್ಯಕ್ಷರಾದಂತಹ ಪುಟ್ಟಕಾಮಣ್ಣ,ನವರು ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments