ಹಿರಿಯೂರು :
ಅನೇಕ ಬ್ಯಾಂಕುಗಳಲ್ಲಿ ಸರ್ಕಾರದಿಂದ ರೈತರ ಖಾತೆಗೆ ಬೆಳೆ ಪರಿಹಾರ ಬೆಳೆ ವಿಮೆ ಪ್ರಧಾನ ಮಂತ್ರಿ ಕಿಸಾನ್ ಸಲ್ಮಾನ್ ಪರಿಹಾರಗಳು ಬಂದರೆ ಅದನ್ನು ನೇರವಾಗಿ ಸಾಲಕ್ಕೆ ಜಮಾ ಮಾಡುತ್ತಾರೆ. ಮತ್ತು ಸರ್ಕಾರ ಬರಗಾಲ ಘೋಷಣೆ ಮಾಡಿದೆ ಇಂಥ ಸಂದರ್ಭದಲ್ಲಿ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಅನೇಕ ಬೋರ್ವೆಲ್ ಗಳನ್ನ ಕೂರಿಸಿ ಸಾಲ ಮಾಡಿಕೊಂಡಿರುತ್ತಾರೆ ಎಂಬುದಾಗಿ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕು ಕಚೇರಿಯಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ತಾಲೂಕಿನ ಎಲ್ಲಾ ಬ್ಯಾಂಕಿನ ಶಾಕಾ ಅಧಿಕಾರಿಗಳು ಮತ್ತು ರೈತ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಟ್ಯಾಂಕರ್ ಗಳ ಮುಖಾಂತರ ನೀರನ್ನ ಆಯಿಸಿ ತೋಟಗಳನ್ನು ಉಳಿಸಿಕೊಳ್ಳಲು ಅರೆ ಸಾಹಸ ಪಡುತ್ತಾರೆ ಈಗಿನ ಪರಿಸ್ಥಿತಿಯಲ್ಲಿ ಜೀವನ ಸಾಗಿಸಲು ಕಷ್ಟಕರವಾಗಿದೆ ಇಂಥ ಸಂದರ್ಭದಲ್ಲಿ ಸಹ ಬ್ಯಾಂಕಿನಿಂದ ನೋಟಿಸ್ ಕಳಿಸಿ ರೈತರಿಗೆ ಕಿರುಕುಳ ನೀಡುತ್ತಾರೆ ಇದು ನಿಲ್ಲಬೇಕು ಮತ್ತು ರೈತರಿಗೆ ಪುನಃ ಬೆಳೆ ಬೆಳೆಯಲು ಹೊಸದಾಗಿ ಸಾಲವನ್ನು ನೀಡಬೇಕು ಎಂದರಲ್ಲದೆ,
ಅನೇಕ ಬ್ಯಾಂಕುಗಳಲ್ಲಿ ರೈತರು ಒಡವೆ ಇಟ್ಟಿದ್ದಾರೆ ಶೂರಿಟಿದಾರರ ಸಾಲ ಬಾಕಿ ಇದ್ದರೆ ಅಂತವರ ಒಡವೆಯನ್ನು ಬಿಡಿಸಿ ಕೊಡುವುದಿಲ್ಲ. ಮತ್ತು ನಗರದಲ್ಲಿ ಪ್ರೈವೇಟ್ ಬ್ಯಾಂಕುಗಳು ದುಬಾರಿ ಬಡ್ಡಿ ವಸೂಲಾತಿ ಮಾಡುವುದರ ಜೊತೆಗೆ ರೈತರಿಗೆ ಟ್ರ್ಯಾಕ್ಟರ್ ಸಾಲಾ ತೆಗೆದುಕೊಳ್ಳಲು ಏಜೆನ್ಸಿ ಮೂಲಕ ಒತ್ತಡ ಹಾಕಿ ಟ್ಯಾಕ್ಟರ್ ತೆಗೆದುಕೊಂಡು ಒಂದು ಕಂತು ಕಟ್ಟದಿದ್ದರೆ ಅಂತ ಗಾಡಿಗಳನ್ನು ಹಿಡಿದು ಮಾರಾಟ ಮಾಡುತ್ತಾರೆ ಎಂಬುದಾಗಿ ದೂರಿದರು.
ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಇದ್ದ ಹಣ ಬೇರೆ ಬೇರೆ ರೀತಿಯ ಸರ್ವಿಸ್ ಗಳು ಎಂದು ಹೇಳಿ ಹಣ ಕಟ್ ಮಾಡುತ್ತಾರೆ. ಮತ್ತು ಕೇಂದ್ರ ಸರ್ಕಾರದಿಂದ ಕಡಿಮೆ ಬಡ್ಡಿಯಲ್ಲಿ ಕುರಿ ತೆಗೆದುಕೊಳ್ಳಲು ಅರ್ಜಿ ಹಾಕಿದರೆ ಅಂತವರಿಗೆ ಲೋನ್ ಕೊಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಯಲ್ಲದಕೆರೆ ಗ್ರಾಮದಲ್ಲಿ ಯಾವುದಾದರೂ ಒಂದು ಬ್ಯಾಂಕ್ ಶಾಖೆಯನ್ನು ಪ್ರಾರಂಭಿಸಬೇಕು ಬಹಳ ದೂರದಿಂದ ರೈತರು ನಗರಕ್ಕೆ ಬರಬೇಕಾಗುತ್ತದೆ ತಾವು ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕು ಎಂಬುದಾಗಿ ಸಭೆಯಲ್ಲಿ ಮನವಿ ಮಾಡಿದರು.
ಸಂಘದ ಕಾರ್ಯದರ್ಶಿಗಳಾದ ಆಲೂರು ಸಿದ್ಧರಾಮಣ್ಣ ಮಾತನಾಡಿ, ಸೀನಿಯರ್ ಸಿಟಿಜನ್ ಗ್ರಾಹಕರಿಗೆ ಪ್ರತ್ಯೇಕ ಲೈನ ಮಾಡಿ ಬೇಗ ಹಣ ಕೊಡುವಂತೆ ಮಾಡಬೇಕು ಮತ್ತು ಕೆಲವು ಬ್ಯಾಂಕುಗಳು ಮಹಡಿ ಮೇಲೆ ಶಾಖೆ ತೆರೆದಿದ್ದಾರೆ, ಅಲ್ಲಿಗೆ ಹತ್ತಿ ಹೋಗಲು ವಯಸ್ಸಾದವರಿಗೆ ಆಗುವುದಿಲ್ಲ ಎಂಬುದಾಗಿ ಹೇಳಿದರು.
ನಮ್ಮ ರೈತರ ಸಮಸ್ಯೆಯನ್ನು ಆಲಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ತಹಶೀಲ್ದಾರ್ ಅವರು ಶಾಖ ಅಧಿಕಾರಿಗಳಿಗೆ ಕಡಕ್ ವಾರ್ನಿಂಗ್ ಮಾಡಿ ಯಾವುದೇ ಸರ್ಕಾರದ ಅನುದಾನವನ್ನ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು, ಬರಗಾಲ ಇರುವುದರಿಂದ ರೈತರಿಗೆ ಸಾಲ ವಸೂಲಾತಿ ಮಾಡುವಂತೆ ಯಾವುದೇ ಒತ್ತಡ ಹಾಕಬಾರದು ಎಂಬುದಾಗಿ ಸೂಚನೆ ನೀಡಿದರು.
ಯಾವುದೇ ಖಾಸಗಿ ಬ್ಯಾಂಕುಗಳು ರೈತರಿಗೆ ಕಿರುಕುಳ ನೀಡಿದರೆ ಅಂತಹ ಬ್ಯಾಂಕುಗಳು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಆದಷ್ಟು ಬೇಗ ಯಲ್ಲದಕೆರೆ ಗ್ರಾಮದಲ್ಲಿ ಬ್ಯಾಂಕ್ ಶಾಖೆ ಪ್ರಾರಂಭ ಮಾಡಲು ಪ್ರಸ್ತಾವನೆ ಗ್ರಹಿಸಲಾಗುವುದು ಯಾವುದೇ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟರೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂಬುದಾಗಿ ತಿಳಿಸಿದರು.
ಈ ಸಭೆಯಲ್ಲಿ ರೈತಮುಖಂಡರುಗಳಾದ ಅರಳೀಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಆದಿರಾಳು ನಾಗರಾಜಪ್ಪ, ವೈ.ಶಿವಣ್ಣ, ಹೊಸಕೆರೆ ಜಯಣ್ಣ, ಜಗದೀಶ್, ಎಂ.ಡಿ.ರವಿ, ರಾಮಕೃಷ್ಣ, ಬಾಲಕೃಷ್ಣ, ರಂಗಸ್ವಾಮಿ, ವಿರೂಪಾಕ್ಷಪ್ಪ, ಶಶಿಧರ್, ಗೋಪಾಲಪ್ಪ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments