ಚಳ್ಳಕೆರೆ ಜನಧ್ವನಿ ವಾರ್ತೆ ಮೇ 13. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024- 25ನೇ ಸಾಲಿನ ಪದವಿ ಹಾಗೂ ಸ್ನಾತಕೋತರ ಪದವಿಗಳಿಗೆ ಪ್ರವೇಶಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕೂಡಲೇ ಅರ್ಜಿ ಸಲ್ಲಿಸುವಂತೆ ಪ್ರಚಾರ್ಯ ಪ್ರೊ. ಬಿ ಎಸ್ ಮಂಜುನಾಥ್ ತಿಳಿಸಿದ್ದಾರೆ.
ಹೆಚ್ ಪಿ ಪಿ ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗ್ರಾಮೀಣ ಹಾಗೂ ವಿವಿಧ ತಾಲೂಕು ಕೇಂದ್ರಗಳಿಂದ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ವಸತಿ ನಿಯಲದ ವ್ಯವಸ್ಥೆ , ಗುಣ ಮಟ್ಟದ ನುರಿತ ಉಪನ್ಯಾಸಕರಿಂದ ಪಠ್ಯಭೋದನೆ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡೆ, ಎನ್ ಎನ್ಎಸ್ ಎಸ್ , ಸೇರಿದಂತೆ ವಿವಿಧ ಕೋರ್ಸ್ ಗಳಿದ್ದ್ಉ ಕಳೆದ ಸಾಲಿನಿಂದ ಬಿಸಿಎ ಕೋರ್ಸ್ ಆರಂಭಿಸಿದ್ದು ಉತ್ತಮ ಬೇಡಿಕೆ ಇದೆ ಈ ವಿಷಯದಲ್ಲಿ ವ್ಯಾಸಂಗ ಮಾಡಲು ಬೆಂಗಳೂರು ಸೇರಿದಂತೆ ವಿವಿಧನಗರದ ಖಾಸಗಿ ಕಾಲೇನಿನಲ್ಲಿ ದುಬಾರಿ ಶುಲ್ಕ ನೀಡಿ ವ್ಯಾಸಂಗ ಮಾಡ ಬೇಕಿತ್ತು ಈಗ ಚಳ್ಳಕೆರೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲೇ ಪ್ರಾರಂಭವಾಗಿದ್ದು ಯಾವುದೇ ಡೊನೇಷನ್ ಇಲ್ಲದೆ ಸಾರಕಾರಿ ಶುಲ್ಕ ಕಟ್ಟಿ ವ್ಯಾಸಂಗ ಮಾಡಬಹುತಾಗಿದೆ.
ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಬೋಧಕ ವರ್ಗವಿದ್ದು ವಿದ್ಯಾರ್ಥಿಗಳಿಗೆ ಕಲಿಯಲು ಉತ್ತಮ ಅನುಕೂಲಕರ ವಾತಾವರಣವಿದೆ ಕಾಲೇಜಿನಲ್ಲಿ ಬಿಎ ಪದವಿ ಬಿಎಸ್ಸಿ ಪದವಿ ಬಿ ಸಿ ಎ ಪದವಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಪದವಿ ಸ್ನಾತಕೋತ್ತರ ಪದವಿಗಳಾದ ಎಂಎ ಕನ್ನಡ ಎಂ ಎ ಸಮಾಜಶಾಸ್ತ್ರ ಎಂಕಾಂ ಪದವಿಗಳು ಕಾರ್ಯ ಆರಂಭಿಸಿದ್ದು ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಕಾಲೇಜಿನ ಸಮಯದಲ್ಲಿ ಪಡೆದು ದಾಖಲಾತಿ ಪಡೆಯಬೇಕು ಎಂದು ತಿಳಿಸಿದರು.
ಬಿ ಸಿ ಎ ಪದವಿ ಕಡೆ ವಿದ್ಯಾರ್ಥಿಗಳ ಒಲವು: ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆ ಹೊಂದುವ ವಿದ್ಯಾರ್ಥಿಗಳು ಪ್ರವೇಶಾತಿ ಸಿಗದಿದ್ದ ಸಂದರ್ಭದಲ್ಲಿ ಬಿಸಿಎ ಪದವಿಯನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದಾಗಿ ಇಂಜಿನಿಯರಿಂಗ್ ಪದವಿ ಸಮಾನವಾಗಿ ಬಿ ಸಿ ಎ ಪದವಿಗೆ ಹೆಚ್ಚಿನ ಒತ್ತನ್ನು ವಿದ್ಯಾರ್ಥಿಗಳು ನೀಡುತ್ತಿದ್ದಾರೆ ಹೆಚ್ಚಿನ ದಾಖಲಾತಿಗಳು ಬಿಸಿಎ ಪದವಿಗೆ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಪತ್ರಿಕೋದ್ಯಮ ಪದವಿಗೆ ಆಸಕ್ತಿ ತೋರದ ವಿದ್ಯಾರ್ಥಿಗಳು: ಕಾಲೇಜಿನಲ್ಲಿ ಕಳೆದ ಸುಮಾರು ವರ್ಷಗಳಿಂದ ಪತ್ರಿಕೋದ್ಯಮ ಪದವಿ ಪ್ರಾರಂಭವಾಗಿದ್ದರೂ ಸಹ ವಿದ್ಯಾರ್ಥಿಗಳನ್ನು ಪತ್ರಿಕೋದ್ಯಮ ಪದವಿ ಆಕರ್ಷಿಸುವಲ್ಲಿ ಹಿಂದೆ ಬಿದ್ದಿದೆ ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಹಾಗೂ ಪೋಷಕರ ಅಸಡ್ಡೆ ಕಾರಣವಾಗಿದೆ ಪತ್ರಿಕೋದ್ಯಮ ಪದವಿ ಪಡೆದರೆ ಉದ್ಯೋಗ ದೊರೆಯುವುದಿಲ್ಲ ಎಂಬ ಕೀಳರುಮೆಯಿಂದ ಹೊರ ಬಂದಾಗ ಮಾತ್ರ ವಿಷಯಕ್ಕೆ ಮನ್ನಣೆ ದೊರೆತಂತಾಗುತ್ತದೆ
ಡಿಜಿಟಲ್ ಗ್ರಂಥಾಲಯವಿದ್ದು ವಿದ್ಯಾರ್ಥಿಗಳ ಅಧ್ಯಯನದ ಸಲುವಾಗಿ ಹೆಚ್ಚಿನ ಪುಸ್ತಕಗಳು ದೊರೆಯುತ್ತವೆ ಪಿ ಹೆಚ್ ಡಿ ಪಡೆದಿರುವ ಉತ್ತಮ ಬೋಧಕ ವರ್ಗ ವಿಜ್ಞಾನ ಪ್ರಯೋಗಾಲಯಗಳು ಡಿಜಿಟಲ್ ಲೈಬ್ರರಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಸೌಲಭ್ಯ ಸುಸಜ್ಜಿತ ಗಣಕಯಂತ್ರ ಕೊಠಡಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಕಾಲೇಜು ವತಿಯಿಂದ ನೀಡಲಾಗುವುದು ತಾಲೂಕಿನಾದ್ಯಾಂತ ಆರು ವಲಯಗಳನ್ನಾಗಿ ರೂಪಿಸಿ ಐದು ಜನ ಒಳಗೊಂಡ 6 ತಂಡಗಳನ್ನಾಗಿ ರಚಿಸಲಾಗಿದ್ದು ಆ ತಂಡಗಳು ವಿವಿಧ ಪಿಯುಸಿ ಕಾಲೇಜುಗಳಿಗೆ ತೆರಳಿ ನಮ್ಮ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಮಾಹಿತಿ ನೀಡಲಿದ್ದು ಹೆಚ್ಚಿನ ದಾಖಲಾತಿಗಳನ್ನು ಹೊಂದಲು ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಹೆಚ್.ಟಿ.ತಿಪ್ಪೇಸ್ವಾಮಿ ಗಂಗಾಧರ್ ಕೆ ಚಿತ್ತಯ್ಯ ಇದ್ದರು.
0 Comments