ಚಳ್ಳಕೆರೆ ಜನಧ್ವನಿ ವಾರ್ತೆ ಜೂ 8 ಸರ್ಕಾರಿ ಕೆಲಸದ ನೌಕರರಿಗೆ ನಿವೃತ್ತಿ ಅನಿರ್ಯವಾಗಿದ್ದು, ಸೇವಾ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದಾಗ ಮಾತ್ರ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.
ನಗರದ ಬಿಇಒ ಕಚೇರಿ ಸಭಾಂಗಣದಲ್ಲಿ ವಯೋನಿವೃತ್ತಿ ಹಾಗೂ ಬಡ್ತಿ ಪಡೆದು ವರ್ಗಾವಣೆಯಾದ ಸಿಬ್ಬದಿಂಗಳಿಗೆ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಪ್ರಭಾರ ಗುಮಸ್ತನಾಗಿ ಕಾರ್ಯ ನಿರ್ವಹಿಸಿ ಬಡ್ತಿಹೊಂದಿ ರಾಮನಗರ ಜಿಲ್ಲೆಗೆ ವರ್ಗಾವಣೆ ಗೊಂಡ ಎಂಜೇರಪ್ಪ ಹಾಗೂ ಪತ್ರಾಂಖಿತ ನಿರ್ದೇಶಕ ವಯೋನಿವೃತ್ತಿ ಹೊಂದಿದ ಧನಂಜಯ ಇವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿ ಕಚೇಗೆ ಕೆಲಸಕ್ಕಾಗಿ ಬಂದ ಶಿಕ್ಷಕ ಹಾಗೂಸಿಬ್ಬಂದಿಂಗೊಳಿಂದಿಗೆ ಉತ್ತಮ ಒಡನಾಟದೊಂದಿಗೆ ಸಕಾಲಕ್ಕೆ ಕೆಲಸ ಮಾಡಿಕೊಡುವ ಮೂಲಕ ಯಾವುದೇ ಕಳಂಕಿತರಾಗದೇ ಜನಸಾಮಾನ್ಯರ ಪ್ರೀತಿಗಳಿಸಿ ನಿವೃತ್ತಿ ಹಾಗೂ ವರ್ಗಾವಣೆ ಹೊಂದಿದ ಕಚೇರಿ ಸಿಬ್ಬಂದಿಗಳಿಗೆ ಬೀಳ್ಕೊಟ್ಟರು.
ನಿವೃತ್ತ ಅಧಿಕಾರಿ ಧನಂಜಯ್ ಮಾತನಾಡಿ ಕರ್ತವ್ಯ ನಿರ್ವಹಿಸುವಾಗ ನಾವು ಮೊದಲು ಕೆಲಸ ತಿಳಿದಿರು ಬಗ್ಗೆ ಸಾರ್ವಜನಿಕ ಕಡಗಳ ಬಗ್ಗೆ ಜೋಪಾನ ಕಾಪಾಡಿಕೊಳ್ಳ ಬೇಕು, ಯಾವುದೇ ಒತ್ತಡಕ್ಕೆ ಮಣಿದು ನಮ್ಮ ಕಾನೂನು ಪರದಿಯನ್ನು ಬಿಟ್ಟು ಕೆಲಸ ಮಾಡಿದಾಗ ನಮ್ಮ ಹುದ್ದೆಗೆ ದಕ್ಕೆ ಬರುತ್ತದೆ. ಜನಸಾಮನ್ಯರಿಗೆ ಸ್ಪಂದಿಸಿ ಕೆಲಸ ಮಾಡಿದಾಗ ನಾವು ಜನಸಾಮ್ಯರ ಮನದಲ್ಲಿ ಹುಳಿಯಲು ಸಾಧ್ಯ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ , ಕಾರ್ಯದರ್ಶಿ ಎಸ್,ಟಿ,ತಿಪ್ಪೇಸ್ವಾಮಿ, ಕಚೇರಿ ಅಧೀಕ್ಷಕ ಸಿದ್ದೇಶ್, ವ್ಯವಸ್ಥಾಪಕ ಪುರುಶೋತ್ತಮ, ಶಿಕ್ಷಕರಾದ ಪಾಲಯ್ಯ, ಈರಣ್ಣ, ಪ್ರಥಮದರ್ಜೆ ಸಹಾಯಕ ಸಿದ್ದೇಶ್, ರಾಜಣ್ಣ, ಸುರೇಶ್ ನಿವೃತ್ತಿ ಜೀವನ ಆರೋಗ್ಯಮಯವಾಗಿರಲಿ ಎಂದು ಶುಭಕೋರಿದರು.
ಕಾರ್ಯಕ್ರಮದಲ್ಲಿ ಸಣ್ಣಬೋರಮ್ಮ, ಪ್ರಕಾಶ್, ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments