ನಾಯಕನಹಟ್ಟಿ ಆ.31: ಯಾವುದೇ ಸರ್ಕಾರದ ಸವಲತ್ತುಗಳು ಪಡೆಯಬೇಕೆಂದರೆ ಫಲಾನುಭವಿಗಳು ಎನ್.ಪಿ.ಸಿ.ಐ. ಬ್ಯಾಂಕಿನಲ್ಲಿ ಕಡ್ಡಾಯವಾಗಿ ಮಾಡಿಸಬೇಕು ಇಲ್ಲವಾದಲ್ಲಿ ನಿಮಗೆ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಎಂದು ಚಿತ್ರದುರ್ಗ ಜಿಲ್ಲೆಯ ಉಪ ವಿಭಾಗದ ಅಧಿಕಾರಿಯಾದ ಕಾರ್ತಿಕ್ ಹೇಳಿದರು.
ಪಟ್ಟಣದ ನಾಡಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪಿಂಚಣಿ ಅದಲತ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತರಿಸಿ ನಂತರ ಮಾತನಾಡಿದ ಅವರು. ನಿಮ್ಮ ಕುಟುಂಬದ ತಂದೆ ತಾಯಿ ಇಬ್ಬರೂ ಮರಣ ಹೊಂದಿದ ಪಕ್ಷದಲ್ಲಿ ಅವರ ವಾರಸುದಾರರಾದ ಸಂದರ್ಭದಲ್ಲಿ ಮಕ್ಕಳಿಗೆ ಪೌತಿ ಖಾತೆ ಮಾಡಿಸಲಾಗುತ್ತದೆ ಎಂದು ಅವರು ತಿಳಿಸಿದರು .
ಪಿಂಚಣಿ ಪಡೆಯುವಂತ ಫಲಾನುಭವಿಗಳು ನಿಮ್ಮ ಸಮಸ್ಯೆಗಳು ಏನಾದರೂ ಇದ್ದರೆ ತಿಳಿಸಿ ಸ್ಥಳದಲ್ಲಿ ಕೆಲಸ ಮಾಡಲಾಗುತ್ತದೆ. ಎಂದು ಅವರು ಮಾತನಾಡಿದರು.
ಚಳ್ಳಕೆರೆ ತಹಸಿಲ್ದಾರ್ ರೇಹಾನ್ ಪಾಷ ಮಾತನಾಡಿ ನಿಮ್ಮ ಊರಿನ ಅಕ್ಕಪಕ್ಕದ ತೃತೀಯ ಲಿಂಗಗಳು ಇದ್ದರೆ ತಿಳಿಸಿ ಸ್ಥಳದಲ್ಲೇ ಆದೇಶ ಪತ್ರವನ್ನು ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.
ನಾಯಕನಹಟ್ಟಿ ಹೋಬಳಿಯಲ್ಲಿ 9413 ಪಿಂಚಣಿಯನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ಸರ್ಕಾರದ ಆದೇಶದಂತೆ ಪ್ರತಿ ತಿಂಗಳಿಗೊಮ್ಮೆ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಿಂಚಣಿ ಅದಾ ಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಸಾಮಾಜಿಕ ಭದ್ರತೆ ಯೋಜನೆಗಳ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೆಎಮ್ ಶಿವ ಸ್ವಾಮಿ ಉಪ ತಹಸೀಲ್ದಾರ್ ಶಕುಂತಲಾ ಬಿ ಕಂದಾಯ ಇಲಾಖೆಯ ಉಪನಿರೀಕ್ಷಕರಾದ ಚೇತನ್ ಕುಮಾರ್, ಗ್ರಾಮದ ಆಡಳಿತ ಅಧಿಕಾರಿಯಾದಂತ ಹರೀಶ್, ರವಿ, ಜೈರಾಮ್, ಜಗದೀಶ್, ಶಂಕರ್, ಪುಷ್ಪಲತ, ಗ್ರಾಮ ಸಹಾಯಕರಾದ ತಿಮ್ಮಪ್ಪಯ್ಯನಳ್ಳಿ ಹರೀಶ್, ಕುಮಾರ್, ಓಬಣ್ಣ, ಚನ್ನಬಸವ, ಹೇಮಂತ್ ನಾಯಕ್, ನಾಗರಾಜ್, ತಿಮ್ಮಣ್ಣ, ಓಬಣ್ಣ. ತಿಪ್ಪೇಸ್ವಾಮಿ, ಆಧಾರ್ ಕಾರ್ಡ್ ಕಂಪ್ಯೂಟರ್ ಆಪರೇಟರ್ ವೀರೇಶ್ ಹಾಗೂ ನಾಡಕಚೇರಿಯ ಸಿಬ್ಬಂದಿಗಳು ಇನ್ನಿತರರು ಇದ್ದರು.
0 Comments