ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಗ್ರಾಮಗಳ ಆಯ್ಕೆಯಾಗಳ ಗ್ರಾಮಗಳ ಕಡತಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಸರಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಸುನಾರು ಹತ್ತು ವರ್ಷಗಳಿಂದ ಸುಮಾರು 50 ಕ್ಕೂ ಹೆಚ್ಚು ಮನೆಗಳಿದ್ದರೆ ಕಂದಾಯ ಗ್ರಾಮ 20 ಕ್ಕೂ ಹೆಚ್ಚು ಮನೆಗಳಿದ್ದರೆ ಉಪ ಗ್ರಾಮ ಎಂದು ಆಯ್ಕೆ ಮಾಡಿ ವಾಸದ ಮನೆಗಳನ್ನಯ ಅಳತೆ ಮಾಡಿ ಹಕ್ಕು ಪತ್ರ ನೀಡಲಾಗುವಯದು.
ಖಾಸಗಿ ಹಾಗೂ ಸರಕಾರಿ ಜಮೀನಿನನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಹಕ್ಕು ಪತ್ರಗಳಿಲ್ಲದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು ಇದನ್ನು ಮನಗಂಡ ಸರಕಾರ ಕಂದಾಯ ಗ್ರಾಮಗಳನ್ನು ಆಯ್ಕೆ ಮಾಡಿ ಹಕ್ಕು ಪತ್ರಗಳನ್ನು ನೀಡಿ ಗ್ರಾಪಂ ಕಚೇರಿಗೆ ವಹಿಸಲಾಗುವುದು ರಸ್ತೆ.ಚರಂಡಿ.ಬೀದಿ ದೀಪ ಕುಡಿಯುವ ನೀರು ವಸತಿ ಸೌಲಭ್ಯ ನೀಡಲು ಸಹಕಾರಿಯಾಗಲಿದೆ. ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಜಮೀನು ಮಾಲಿಕರಿಗೆ ಸತಕಾತದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಶಿರಸ್ತೆದಾರ್ ಸದಾಶಿವಪ್ಪ.ಸರ್ವೆ ಇಲಾಖೆ ಎಡಿಎಲ್ ಆರ್ ಬಾಬುರೆಡ್ಡಿ ಕಂದಾಯ ನಿರೀಕ್ಷ ಲಿಂಗೇಗೌಡ. ಹಾಗೂ ಗ್ರಾಮಲಡಕ್ಕಾಧಿಕಾರಿಗಳು ಮದಾಯಗ್ರಾಮಗಳ ಆಯ್ಕೆಯಾದ ಗ್ರಾಮಸ್ಥರು ಉಪಸ್ಥಿತರಿದ್ದರು.30
0 Comments