ಚಳ್ಳಕೆರೆಜನಧ್ವನಿ ವಾರ್ತೆ ಫೆ.15
ಸರಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಗೆ ಬರುವ ಸಾರ್ವನಿಕರಿಗೆ ಕಚೇರಿಗೆ ಅಲೆದಾಡಿಸದೇ ನಿಗಧಿತ ಸಮಯದೊಳಗೆ ಕೆಲಸ ಮಾಡಿಕೊಂಡುವAತೆ ಸಿಬ್ಬಂದಿಗಳಿಗೆ ತಹಶೀಲ್ದಾರ್ ರೇಹಾನ್ ಪಾಷಾ ತಾಕೀತು ಮಾಡಿದರು.
ನಗರದ ತಾಲೂಕು ಕಚೇರಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಪಡಸಾಲೆ, ಪಹಣಿ ಸೇರಿದಂತೆ ವಿವಿಧ ಶಾಖೆಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಹಾಗೂ ವಿವಿಧ ಗ್ರಾಮೀಣ ಭಾಗದಿಂದ ದಿನ ನಿತ್ಯ ಪಡಿತರ ಚೀಟಿಗಾಗರಿ ಅಲೆದಾಡುತ್ತಿದ್ದು ಇದನ್ನು ಗಮನಿಸಿದ ತಹಶೀಲ್ದಾರ್ ಆಹಾರ ಇಲಾಖೆಗೆ ಶಾಖೆಗೆ ಭೇಟಿ ನೀಡಿ ಬಡ ಕುಟುಂಬದ ಕೆಲಸ ಸದಸ್ಯರಿಗೆ ಗಂಭೀರ ಖಾಯಿಲೆ ಚಿಕಿತ್ಸೆ ಮಾಡಿಸಿಕೊಳ್ಳಲು ಹಣವಿರುವುದಿಲ್ಲ ಪಿಪಿಎಲ್ ಪಡಿತರ ಚೀಟಿ ಇದ್ದರೆ ಸರಕಾರ ಉಚಿತ ಚಿಕಿತ್ಸೆ ನೀಡುತ್ತದೆ ಎಂಬ ಮಹತ್ವಾಂಕ್ಷೆಯಿAದ ಜನರು ಪಡಿತರ ಚೀಟಿಗಾಗಿ ವರ್ಷಗಳಟ್ಟೆ ಅಲೆದಾಡುತ್ತಿರುವು ಆರೋಪಗಳು ಕೇಳಿ ಬರುತ್ತಿವೆ.
೧೯ ವರ್ಷದ ಮನಗೊಬ್ಬರಿಗೆ ಕಿಡ್ನಿ ಸಮಸ್ಯೆಯಿಂದ ಈಗಾಗಲೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಅವರು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಬಂದಿಲ್ಲ ಎಂದ ಕಚೇರಿಗೆ ಅಲೆದಾಡುತ್ತಿದ್ದಾರೆ . ತುರ್ತು ಅಗತ್ಯ ಇವರವರಿಗೆ ಕೂಡಲೆ ಪರಿಶೀಲನೆ ನಡೆಸಿ ಅಂತರವ ಪಡಿತರ ಚೀಟಿಯನ್ನು ಕೂಡಲೆ ಮಂಜುರಾತಿ ಮಾಡಿಸಿಕೊಡಬೇಕು.
ಪಡಿತರ ಚೀಟಿಗಾಗಿ ಅರ್ಜಿಸಲ್ಲಿದವರ ಅರ್ಜಿಗಳನ್ನು ಮೊದಲು ಅವರ ದಾಖಲೆಗಳು ಸರಿಯಾಗಿವೆ ಎಂಬುದನ್ನು ಮೊದಲೇ ಪರಿಶೀಲನೆ ನಡೆಸಿ ಅರ್ಹ ಫಲಾನುಗಳಿಗೆ ಪಡಿತರ ಚೀಟಿ ವ್ಯಸ್ಥೆ ಮಾಡ ಬೇಕು ಜನರನ್ನು ಕಚೇರಿಗೆ ಅಲೆದಾಡಿಸದೇ ಇರುವ ವ್ಯವಸ್ಥೆಯಲ್ಲೇ ಜನರ ಕೆಲಸಗಳನ್ನು ಮಾಡಿಕೊಡುವಂತೆ ತಿಳಿಸಿದರು.
ಕಂದಾಯ ನಿರೀಕ್ಷದ ಲಿಂಗೇಗೌಡ, ಆಹಾರ ಇಲಾಖೆ ಶಿರಸ್ತೆದಾರ್ ಶ್ರೀನಿವಾಸ್ ಇದ್ದರು.
0 Comments