ಸರಕಾರಿ ಸಿಮ್ ಬಳಕೆ ಮಾಡದೆ ಪಿಡಿಒಗಳು-ಸಾರ್ವಜನಿಕರ ಆರೋಪ.

by | 25/05/24 | ಜನಧ್ವನಿ


ಚಳ್ಳಕೆರೆ ಮೇ 25 ಸಾರ್ವಜನಿಕರಿಗೆ ಸೇವೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಸರಕಾರ ನೀಡಿದ ಸಿಮ್ ಗಳನ್ನು ಪಿಡಿಒಗಳು ಬಳಸುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಹೌದು ಇದು ಚಳ್ಳಕೆರೆ ತಾಲೂಕಿನ 40 ಗ್ರಾ.ಪಂ. ಪಿಡಿಒ ಗಳಿಗೆ ಉಚಿತವಾಗಿ ನೀಡಿದ ಮೊಬೈಲ್‌ ಸಿಮ್ ಬದಲಿಗೆ ಖಾಸಗಿ ಮೊಬೈಲ್ ಸಿಮ್ ಬಳಸುತ್ತಿರುವುದರಿಂದ ಯಾರನ್ನು ಸಂಪರ್ಕಿಸಬೇಕೆಂಬುದು ತಿಳಿಯದಂತಾಗಿದೆ.

2010-11 ನೇ ಸಾಲಿನಲ್ಲಿ ಪಂಚಾಯತ್‌ ರಾಜ್‌ ಇಲಾಖೆಯು ಪ್ರತಿ ಪಿಡಿಒಗಳಿಗೆ ಬಿಎಸ್ಸೆನ್ನೆಲ್‌ ನಂಬರನ್ನು ನೀಡಲಾಗಿತ್ತು. ಸಾರ್ವಜನಿಕರ ಹಾಗೂ ಮೇಲಧಿಕಾರಿಗಳ ಸಂಪರ್ಕಕ್ಕೆ ಅನುಕೂಲವಾಗಲಿ ಎಂಬುದು ಇದರ ಉದ್ದೇಶವಾಗಿತ್ತು. ಮೊಬೈಲ್‌ ಸಿಮ್ ನೀಡಿದಾಗಲೇ ಯಾರೂ ಸ್ವಿಚ್ಡ್‌ ಆಫ್‌ ಮಾಡಬಾರದು, 24 ಗಂಟೆಗಳ ಕಾಲ ಫೋನ್‌ ಚಾಲನೆಯಲ್ಲಿಡಬೇಕು ಎಂದು ತಿಳಿಸಿತ್ತು. ಆದರೆ ಕೆಲವು ಪಿಡಿಒಗಳು ಸರಕಾರ ನೀಡಿದ ಬಿಎಸ್ಸೆನ್ನೆಲ್‌ ನಂಬರ್‌ನ್ನು ಬಳಸದೇ ರದ್ದಾಗಿದ್ದು ಆ ನಂಬರ್ ಬೇರೆಯವರಿಗೆ ಹೋಗಿದೆ ಖಾಸಗಿ ನಂಬರ್‌ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಪಿಡಿಒಗಳನ್ನು ಅಗತ್ಯವಿದ್ದಾಗ ಸಂಪರ್ಕಿಸುವುದು ಸಾರ್ವಜನಿಕರಿಗೆ ತಲೆನೋವಾಗಿದೆ.

ಸಿಮ್ ಬಳಕೆ ಮಾಡಿದ ಗ್ರಾಪಂ.

ಮೈಲನಹಳ್ಳಿ, ಘಟಪರ್ತಿ, ದೇವರೆಡ್ಡಹಳ್ಳಿ, ತಿಮ್ಮಪ್ಪಯನಹಳ್ಳಿ, ಮಲ್ಲೂರಹಳ್ಳಿ, ಗೌಡಗೆರೆ, ನನ್ನಿವಾಳ, ಅಬ್ಬೇನಹಳ್ಳಿ, ಮನ್ನೇಕೋಟೆ, ಓಬಳಾಪುರ, ರೇಣುಕಾಪುರ, ಗೋಪನಹಳ್ಳಿ ಒಟ್ಟು 14 ಗ್ರಾಪಂ ಪಿಡಿಒಗಳು ಸರಕಾರಿ ಸಿಮ್ ಬಳಕೆ ಮಾಡದೆ ದೂರ ಉಳಿದಿರುವ ಬಗ್ಗೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಸಂದೇಶ ಕೇಳಿ ಸುಸ್ತು: ಯಾವಾಗ ಕರೆ ಮಾಡಿದರೂ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ. ನೀವು ಕೆರೆ ಮಾಡಿದ ಸಂಖ್ಯೆ ಇನ್ ವ್ಯಾಲಿಡ್ ಆಗಿದೆ ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂಬ ಸಂದೇಶ ಬರುತ್ತಿದೆ. ಇನ್ನು ಕೆಲವು ಸಿಮ್ ಬೇರೆಯವರಿಗೆ ಹೋಗಿವೆ ಇದನ್ನು ಕೇಳಿ ಕೇಳಿ ಸಾರ್ವಜನಿಕರು ಸುಸ್ತಾಗುತ್ತಿದ್ದಾರೆ. ದಿನಪೂರ್ತಿ ಕರೆ ಮಾಡಿದಾಗಲೂ ಇದೇ ಸಂದೇಶ ಕೇಳಿದ ಕೆಲವರು ಪಿಡಿಒಗಳ ಮೇಲೆ ಅಸಮದಾನಕ್ಕೆ ಕಾರಣವಾಗಿದೆ.

.ಇನ್ನಾದರೂ ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಬೇಕು. ಪಿಡಿಒಗಳು ಸಕರಿ ಸಿಮ್ ದೂರವಾಣಿ ಮೂಲಕ ಸಾರ್ವಜನಿಕ ಸಂಪರ್ಕಕ್ಕೆ ಸಿಗಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page