ಚಳ್ಳಕೆರೆ ಮೇ 25 ಸಾರ್ವಜನಿಕರಿಗೆ ಸೇವೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಸರಕಾರ ನೀಡಿದ ಸಿಮ್ ಗಳನ್ನು ಪಿಡಿಒಗಳು ಬಳಸುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ತಾಲೂಕಿನ 40 ಗ್ರಾ.ಪಂ. ಪಿಡಿಒ ಗಳಿಗೆ ಉಚಿತವಾಗಿ ನೀಡಿದ ಮೊಬೈಲ್ ಸಿಮ್ ಬದಲಿಗೆ ಖಾಸಗಿ ಮೊಬೈಲ್ ಸಿಮ್ ಬಳಸುತ್ತಿರುವುದರಿಂದ ಯಾರನ್ನು ಸಂಪರ್ಕಿಸಬೇಕೆಂಬುದು ತಿಳಿಯದಂತಾಗಿದೆ.
2010-11 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆಯು ಪ್ರತಿ ಪಿಡಿಒಗಳಿಗೆ ಬಿಎಸ್ಸೆನ್ನೆಲ್ ನಂಬರನ್ನು ನೀಡಲಾಗಿತ್ತು. ಸಾರ್ವಜನಿಕರ ಹಾಗೂ ಮೇಲಧಿಕಾರಿಗಳ ಸಂಪರ್ಕಕ್ಕೆ ಅನುಕೂಲವಾಗಲಿ ಎಂಬುದು ಇದರ ಉದ್ದೇಶವಾಗಿತ್ತು. ಮೊಬೈಲ್ ಸಿಮ್ ನೀಡಿದಾಗಲೇ ಯಾರೂ ಸ್ವಿಚ್ಡ್ ಆಫ್ ಮಾಡಬಾರದು, 24 ಗಂಟೆಗಳ ಕಾಲ ಫೋನ್ ಚಾಲನೆಯಲ್ಲಿಡಬೇಕು ಎಂದು ತಿಳಿಸಿತ್ತು. ಆದರೆ ಕೆಲವು ಪಿಡಿಒಗಳು ಸರಕಾರ ನೀಡಿದ ಬಿಎಸ್ಸೆನ್ನೆಲ್ ನಂಬರ್ನ್ನು ಬಳಸದೇ ರದ್ದಾಗಿದ್ದು ಆ ನಂಬರ್ ಬೇರೆಯವರಿಗೆ ಹೋಗಿದೆ ಖಾಸಗಿ ನಂಬರ್ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಪಿಡಿಒಗಳನ್ನು ಅಗತ್ಯವಿದ್ದಾಗ ಸಂಪರ್ಕಿಸುವುದು ಸಾರ್ವಜನಿಕರಿಗೆ ತಲೆನೋವಾಗಿದೆ.
ಸಿಮ್ ಬಳಕೆ ಮಾಡಿದ ಗ್ರಾಪಂ.
ಮೈಲನಹಳ್ಳಿ, ಘಟಪರ್ತಿ, ದೇವರೆಡ್ಡಹಳ್ಳಿ, ತಿಮ್ಮಪ್ಪಯನಹಳ್ಳಿ, ಮಲ್ಲೂರಹಳ್ಳಿ, ಗೌಡಗೆರೆ, ನನ್ನಿವಾಳ, ಅಬ್ಬೇನಹಳ್ಳಿ, ಮನ್ನೇಕೋಟೆ, ಓಬಳಾಪುರ, ರೇಣುಕಾಪುರ, ಗೋಪನಹಳ್ಳಿ ಒಟ್ಟು 14 ಗ್ರಾಪಂ ಪಿಡಿಒಗಳು ಸರಕಾರಿ ಸಿಮ್ ಬಳಕೆ ಮಾಡದೆ ದೂರ ಉಳಿದಿರುವ ಬಗ್ಗೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಸಂದೇಶ ಕೇಳಿ ಸುಸ್ತು: ಯಾವಾಗ ಕರೆ ಮಾಡಿದರೂ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ. ನೀವು ಕೆರೆ ಮಾಡಿದ ಸಂಖ್ಯೆ ಇನ್ ವ್ಯಾಲಿಡ್ ಆಗಿದೆ ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂಬ ಸಂದೇಶ ಬರುತ್ತಿದೆ. ಇನ್ನು ಕೆಲವು ಸಿಮ್ ಬೇರೆಯವರಿಗೆ ಹೋಗಿವೆ ಇದನ್ನು ಕೇಳಿ ಕೇಳಿ ಸಾರ್ವಜನಿಕರು ಸುಸ್ತಾಗುತ್ತಿದ್ದಾರೆ. ದಿನಪೂರ್ತಿ ಕರೆ ಮಾಡಿದಾಗಲೂ ಇದೇ ಸಂದೇಶ ಕೇಳಿದ ಕೆಲವರು ಪಿಡಿಒಗಳ ಮೇಲೆ ಅಸಮದಾನಕ್ಕೆ ಕಾರಣವಾಗಿದೆ.
.ಇನ್ನಾದರೂ ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಬೇಕು. ಪಿಡಿಒಗಳು ಸಕರಿ ಸಿಮ್ ದೂರವಾಣಿ ಮೂಲಕ ಸಾರ್ವಜನಿಕ ಸಂಪರ್ಕಕ್ಕೆ ಸಿಗಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 Comments