ಸರಕಾರಿ ಶಾಲೆಗೆ ರಾಷ್ಟ್ರನಾಯಕರ ಭಾವಚಿತ್ರಗನ್ನು ಕೊಡುಗೆ ನೀಡಿದ ಗ್ರಾಪಂ ಅಧ್ಯಕ್ಷ ವೆಂಕಟೇಶ್.

by | 16/11/23 | ಸಾಮಾಜಿಕ


ಚಳ್ಳಕೆರೆ ನ.16 ನಾಡು ನುಡಿ.ಜಲ .ಭಾಷೆ ದೇಶ ಉಳಿವಿಗಾಗಿ
ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳು ಅನುಸರಿಸಬೇಕು ಎಂದು ಗ್ರಾಪಂ ಅಧ್ಯಕ್ಚ ಜಿ.ಎನ್ .ವೆಂಕಟೇಶ್ ಕಿವಿಮಾತು ಹೇಳಿದರು
ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೊಡ್ಢೇರಿ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್ ರಾಷ್ಟ್ರನಾಯಕರ ಪೋಟೊಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ಶಿಕ್ಷಕರು ಅವರಿಗೆ ರಾಷ್ಟ್ರ ನಾಯಕರು ದೇಶಕ್ಕಾಗಿ ತ್ಯಾಗ ಮಾಡಿದ ಇತಿಹಾಸವ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಒತ್ತಿ ಹೇಳಿದರು.

ಮುಖ್ಯಶಿಕ್ಷಕ ನಾಗರಾಜ್ ಮಾತನಾಡಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳಿಗೆ ತಿಳಿಸಲು ಈ ಭಾವ ಚಿತ್ರಗಳನ್ನು ಮಕ್ಕಳಿಗೆ ಸಹಕಾರಿಯಾಗಲಿವೆ ದಾನಿಗಳು ನೀಡಿದ ರಾಷ್ಟ್ರನಾಯಕರ ಪೋಟೋಗಳನ್ನು ರಕ್ಷಣೆ ಮಾಡುವ ಜತೆಗೆ ಅವರ ಇತಿಹಾಸ ಮಕ್ಕಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು. ಸಿ ಆರ್ ಪಿ ರಾಧಾ ಶಾಲಾ ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *