ಚಳ್ಳಕೆರೆ ಜನಧ್ವನಿ ವಾರ್ತೆ ಫೆ.20.
ತೆರಿಗೆ ಸಂಗ್ರಹ ಹಣ ಹಾಗೂ ನರೇಗಾ ಕಾಮಗಾರಿಗಳ ಬೋರ್ಡ್ ಹಣ ದುರುಪ, ಅಕ್ರಮ ಖಾತೆ ಮಾಡಿರುವ ಪಿಡಿಒ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದ್ಯರು ದೂರು ನೀಡಿದ್ದಾರೆ.
ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಪಂ ಕಚೇರಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಮೇ ೨೦೨೨ ರಿಂದ ಇಲ್ಲಿಯವರೆಗೆ ವಸೂಲಿ ಮಾಡಿದ ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮ ಮಾಡದೆ ಹಣ ದುರುಪಯೋಗ ಹಾಗೂ ನರೇಗಾ ಯೋಜನೆಯಡಿಲ್ಲಿ ಕೃಷಿಹೊಂಡ, ಜಾನುವಾರು ಶೆಡ್, ಚೆಕ್ ಡ್ಯಾಂ ಸೇರಿದಂತೆ ವಿವಿಧ ಕಾಮಗಾರಿಗಳ ಫಲಾನುಭವಿಗಳಿಗೆ ಹಣ ನೀಡಿದೆ ಬಿಡಿಸಿಕೊಂಡು ದುರುಪಯೋಗ ಮಾಡಿಕೊಂಡಿದ್ದಾರೆ.
ಗೌರಸಮುದ್ರ ಗ್ರಾಪಂ ವ್ಯಾಪ್ತಿಗೆ ಸೇರಿದ ಓಬಣ್ಣನಹಳ್ಳಿ ಬೆಲ್ದಾರಹಟ್ಟಿ ಗ್ರಾಮದಲ್ಲಿ ಸರಕಾರಿ ರಿ.ಸ.ನಂ ನಲ್ಲಿ ಬರುವ ಸರಕಾರಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಅಕ್ರಮವಾ ಸುಮಾರು ೪೦ ರಿಂದ ೫೦ ಖಾತೆಗಳನ್ನು ಹಂಗಾಮಿ ಖಾತೆಗಳೆಂದು ಮಾಡಿ ಅಕ್ರಮ ಖಾತೆಯಿಂದ ವಸೂಲಿಯಾದ ಕಂದಾಯ ಹಣವನ್ನು ಸಹ ದುರುಪಯೋಗ ಮಾಡಿಕೊಂಡಿದ್ದಾರೆ.
ನರೇಗಾ ಬೋರ್ಡ್ ಹಣ ಬಿಡಿಸಿಕೊಂಡು ಫಲಾನುಭವಿಗಳಿಗೆ ನೀಡದೆ ದುರುಪಯೋಗ ಹಾಗೂ ಗ್ರಾಮಗಳ ಅಭಿವೃದ್ಧಿಗೆಂದು ಸಾರ್ವಜನಿಕರಿಂದ ವಸೂಲಿಯಾದ ಹಣವನ್ನು ಬ್ಯಾಂಕ್ ಖಾತೆಗೆ ಜಮ ಮಾಡದೆ ಹಣ ಖರ್ಚು ಮಾಡಿರುವುದರಿಂದ ಕೂಡಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಜಣ್ಣ, ಸಿದ್ದಪ್ಪ, ಮಾರಣ್ಣ, ಮಂಜುನಾಥ, ಕುಮಾರ್, ತಿಪ್ಪೇಸ್ವಾಮಿ , ಪ್ರಕಾಶ್, ಜೆ.ಬಿ. ಮಾರಣ್ಣ, ಈರಣ್ಣ, ಇತರರ ತಾಲೂಕು ಪಂಚಾಯತ್ ಕಾರ್ಯಾಲಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪಿಡಿಒ ಕರ್ಲಯ್ಯ ಮಾತನಾಡಿ ನಾನು ತೆರಿಗೆ ಹಣವವನ್ನು ವೈಯುಕ್ತಿಕ ಹಾಗೂ ಸ್ವಂತ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿಲ್ಲ ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗಿದೆ ಆದ್ದರಿಂದ ಬ್ಯಾಂಕ್ ಖಾತೆಗೆ ಜಮ ಮಾಡಲು ಸಾಧ್ಯವಾಗಿಲ್ಲ ನರೇಗಾ ಕಾಮಗಾರಿ ನಾಫಲಕ ಬೋರ್ಡ್ ಹಣವನ್ನು ವೆಂಡರ್ ಮೂಲಕ ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments