ಚಳ್ಳಕೆರೆ: ಸರ್ಕಾರಿ ನೌಕರರ ಕುಟುಂಬಸ್ಥರಿಗೂ ಎಸ್ಸಿ_ಎಸ್ಟಿ ನಿಗಮಗಳ ಸಬ್ಸಿಡಿ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದರಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೌದು ಇದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ಸಮೀಪದ ಆಪ್ತರೇ ತಪ್ಪು ಮಾಹಿತಿ ನೀಡಿ ಅರ್ಹರಲ್ಲದವರಿಗೂ ಸೌಲಭ್ಯಕ್ಕೆ ಆಯ್ಕೆ ಮಾಡಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬೆಳಕಿಗೆ ಬಂದಿವೆ. ವಿವಿಧ ನಿಗಮಗಳಿಂದ ನೀಡುವ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹಫಲಾನುಗಳಿಗೆ ನೀಡದೆ ಸರಕಾರಿ ನೌಕರರ ಕುಟುಂಬಸ್ಥರ ಪಾಲಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರಿತ್ತಿದ್ದು ಕೂಡಲೆ ಶಾಸಕರು ಫಲಾನುವಿಗಳ ಪಟ್ಟಿಆಯ್ಕೆ ಸಂದರ್ಭದಲ್ಲಿ ಶಾಸಕರ ಗಮನಕ್ಕೂ ಬಾರದಂತೆ ಸೇರಿಸಿ ಕಳಿಸುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದು ಕೂಡಲೇ ಶಾಸಕರು ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಅಥವಾ ಅಂತವರ ಹೆಸರು ಪಟ್ಟಿಯಲ್ಲಿದ್ದರೆ ಪರಿಶೀಲನೆ ನಡೆಸಿ ಅರ್ಹರಿಗೆ ಸರಕಾರಿ ಸಾಲ ಸೌಲಭ್ಯ ದೊರೆಯುವಂತೆ ಸೌಲಭ್ಯ ವಂಚಿತ ಫಲಾನುಭವಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಲಾದರೂ ಅರ್ಹರಿಗೆ ಸರಕಾರಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಲಭ್ಯವಾಗುವುದೇ ಕಾದು ನೋಡ ಬೇಕಿದೆ. .
0 Comments