ಚಳ್ಳಕೆರೆ ಜನಧ್ವನಿ ವಾರ್ತೆ ನ.24 ಅಕ್ರಮವಾಗಿ ಸರಕಾರಿ ಗೋಮಾಳ ಭೂವಿಯನ್ನು ಒತ್ತುವರಿ ತೆರವುಗಳಿಸು ವಂತೆ ಕಳೆದ ಮೂರು ವರ್ಷಗಳಿಂದ ಸರಕಾರಿ ಭೂಮಿ ಉಳಿಗಗಾ ಕಚೇರಿಗಳ ಮೆಟ್ಟಿಲೇರಿದರೂ ಪ್ರುಯೋಜವಾಗಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾನೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಪಂ ವ್ಯಾಪ್ತಿಯ ಜಡೆಕುಂಟೆ ಗ್ರಾಮದ ವೆಂಕಟೇಶ್ವರನ(ಅಜ್ಜಿಕಟ್ಟೆ) ನಗರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ನೌಕರನ ಕುಂಟುಂಬ ಸಾರ್ವಜನಿಕರಿಗೆ ಮೀಸಲಿಟ್ಟ ಬಡವನಹಳ್ಳಿಕಾವಲು ಸರಕಾರಿ ಗೋಮಾಳ ರಿ ಸಂ ನಂ.46 ರಲ್ಲಿ ಕರಾಬು 8 ಎಕರೆ 32 ಗುಂಟೆ ಭೂಮಿ ಇದ್ದು ಈ ಭೂಮಿಯನ್ನು ಅಜ್ಜಿಕಟ್ಟೆಯ ಗ್ರಾಮದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ನೌಕರನ ಕುಟುಂಬಸ್ಥರು ಸರಕಾರಿ ಗೋಮಾಳದ ಜಾಗವನ್ನು ಗಿಡಗೆಂಟೆಗಳು ತೆಗೆದು ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆ.
ಸರಕಾರಿ ಗೋಮಾಳ ಒತ್ತುವರಿ ಮಾಡಿಕೊಂಡ ಕುಂಟುಂಬಸ್ಥರಿಗೆ ಸುಮಾರು 40 ಎಕರೆ ಭೂಮಿಯನ್ನು ಅಕ್ರಮ ಸಕ್ರಮ ಸಾಗುವಳಿ ಪತ್ರವನ್ನು ಸಹ ನೀಡಿದ್ದಾರೆ ನಮಗೆ ಇದಕ್ಕೆ ತಕರಾರಿಲ್ಲ. ಅದೇ ಕುಟುಂಬಸ್ಥರೆ ಮತ್ತೆ ಸರಕಾರಿ ಶಾಲೆ ಹಾಗೂ ಸಾರ್ವಜನಿಕ ಮೀಸಲಿಟ್ಟ ಸರಕಾರಿ ಖರಾಬು 8 ಎಕರೆ ಭೂಮಿಯನ್ನು ಸಹ ಒತ್ತು ವರಿ ಮಾಡಿಕೊಂಡಿರುವ ಬಗ್ಗೆ ನಮ್ಮ ತಕರಾರು. ಈ ಭೂಮಿಯ ಒತ್ತುವರಿ ತೆರವುಗೊಳಿಸಿ ಗ್ರಾಮದ ಬಡ ಜನರಿಗೆ ಆಶ್ರಯ ನಿವೇಶನಗಳಿಗೆ ಮೀಸಲಿಡುವಂತೆ ಸುಮಾರು ಮೂರು ವರ್ಷಗಳಿಂದ ತಾಲೂಕು ಕಚೇರಿ. ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಮನವಿ ನೀಡಿ ಅಲೆದಾಡಿದಾರು ಯಾವುದೇ ಪ್ರಯೋಜವಾಗದೆ ವಿಧನಾ ಸೌಧ ಮೆಟ್ಟಿಲೇರಿ ಬಿಜೆಪಿ ಸರಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಇವರಿಗೆ ಮನವಿ ನೀಡಿದರೂ ಸಹ ಸರಕಾರಿ ಗೋಮಾಳ ಜಾಗ ಅಕ್ರಮ ಒತ್ತುವರಿ ತೆರವುಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೆ ತರವುಗೊಳಿಸಲು ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಅಜ್ಜಿಕಟ್ಟೆ ಗ್ರಾಮದ ವೆಂಕಟೇಶ್ ಹಾಗೂ ಅಜ್ಜಿಕಟ್ಟೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಸರಕಾರಿ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಸಾರ್ಜನಿಕ ಇತಾಶಕ್ತಿಗೆ ಮೀಸಲಿಡುವರೇ ಕಾದು ನೋಡ ಬೇಕಿದೆ.
0 Comments