ಚಳ್ಳಕೆರೆ ಫೆ.13 ಕಳೆದ ಹಲವಾರು ವರ್ಷಗಳಿಂದ ನೇಕಾರರ ಸಮುದಾಯ ಆರಾಧ್ಯದೈವ ಭಕ್ತ ಮಾರ್ಕಂಡೇಯ ಜಯಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಿದ್ದು, ಸಮುದಾಯದ ಸಂಘಟನೆಗೆ ಈ ಕಾರ್ಯಕ್ರಮ ಹೆಚ್ಚು ಶಕ್ತಿ ನೀಡುತ್ತದೆ ಎಂದುಜಂಟಿ ಕೃಷಿ ರ್ಧೇಶಕ ಡಾ.ಮಂಜುನಾಥ್ ಹೇಳಿದರು.
ನಗರದ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯ ಸಂಘಟನೆಯಾದ ಮಾತ್ರ ಸಾಧ್ಯ ಸಮುದಾಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂತಹ ಕಾರ್ಯಕ್ರಮದಲ್ಲಿ ಹೆಚ್ಷಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು ಮಕ್ಕಳಿಗೆ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸಿದರೆ ಸಾಮಾಜದಲ್ಲಿ ಗೌರವ ಹಾಗೂ ಪಧವಿ ದೊರೆಯುತ್ತದೆ ಎಂದು ತಿಳಿಸಿದರು.
ನಗರಸಭಾ ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ಪದ್ಮಸಾಲಿ ಸಮಾಜದಲ್ಲಿ ರಾಜಕೀಯ ಕ್ಷೇತ್ರವೂ ಸೇರಿದಂತೆ ಇತರೆ ಎಲ್ಲಾ ಕ್ಷೇತ್ರಗಳನ್ನು ನಮ್ಮ ಸಮುದಾಯಕ್ಕೆ ಪ್ರಾತಿನಿತ್ಯ ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ನಮ್ಮ ಬೇಡಿಕೆಗಳನ್ನು ಜನಪ್ರತಿನಿಧಿ ಹಾಗೂ ಸರಕಾರ ಗಮನಸೆಳೆಯಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರುಮ
ಕಾರ್ಯದರ್ಶಿ ಸತ್ಯ ನಾರಾಯಣ ಸ್ವಾಗತಿಸಿದರು, ಪಿ.ತಿಪ್ಪೇಸ್ವಾಮಿ, ಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆ ದೇವಿಚಕ್ರವರ್ತಿ, ನಗಸಭೆ ಸದಸ್ಯೆ ಮಂಜುಳ,ಹೆಚ್.ರವಿ.ರಮೇಶ್, ಲಕ್ಷ್ಮಿ ವೇಂಕಟೇಶ್, ಡಾ.ಶ್ರೀನಿವಾಸ್ ಬಾಬು,ಚಿದಾನಂದ.ಪ್ರಹ್ಲಾದ್, ಮಲ್ಲಿಕಾರ್ಜುನ. ಇತರರಿದ್ದರು.
ಕಾರ್ಯಕ್ರಮದ ಮೊದಲು ಮಾರ್ಖಾಂಡೇಯ ಭಾವ ಚಿತ್ರದೊಂದಿಗೆ ನಗರದ ಪ್ರಮು ರಸ್ತೆಯಲ್ಲಿ ಮೆರವವಣಿಗೆ ನಡೆಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments