ಚಳ್ಳಕೆರೆ ಡಿ29. ರೈತರಿಗಾಗಿ ಬರುವ ಸೌಲಭ್ಯಗಳನ್ನು ರೈತರ ಹೆಸರಿನಲ್ಲಿ ವಂಚನೆ ಮಾಡಿದ ಅಧಿಕಾರ ವಿರುದ್ದಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ಸಹಾಯಕ ಕೃಷಿ ನಿರ್ಧೇಶಕರ ಕಚೇರಿ ಆವರದಲ್ಲಿ ಕೃಷಿ ಇಲಾಖೆವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಚಳ್ಳಕೆರೆ ತಾಲೂಕು ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಸಕಾಲಕ್ಕೆ ಮಳೆ ಬೆಳೆಯಿಲ್ಲದೆ ಸಂಕಷ್ಟದಲ್ಲಿರುವ ರೈತರು ಬೆಳೆ ನಷ್ಟಕ್ಕೆ ಸಿಲುಕಿದ್ದಾರೆ ಇಂತಹ ಪರಿಸ್ಥಿಯಲ್ಲಿ ರೈತರಿಗೆ ಬರುವ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ರೈತರ ಹೆಸರಿನಲ್ಲಿ ಬೇರೆಯವರ ಖಾತೆಗೆ ಹಣ ಹಾಕಿ ವಂಚನೆ ಮಾಡುತ್ತಿದ್ದು ಇಂತಹ ಅಧಿಕಾರಿಗಳ ವಿರುದ್ದ ತನಿಖೆ ಎಂಬ ವಿಚಾರದಲ್ಲಿ ವಿಳಂಬದೋರಣೆ ಸಹಿಸಲ್ಲ ಕೂಡಲೆ ಬೆಳೆ ಪರಿಹಾರ .ಬೆಳೆ ವಿಮೆ ವಂಚನೆ ಮಾಡಿದವರ ಬಗ್ಗೆ ಕ್ರಮ ಕೈ ವಿಳಂಬ ಮಾಡುತ್ತಿರುವುದು ಅವರ ರಕ್ಷಣೆಗೆ ನಿಂತದಿದೆ ರೈತರಿಗೆ ವಂಚನೆಯಾದರೆ ನಾನು ಸಹಿಸಯವುದಿಲ್ಲ. ಸರಕಾರದ ಯೋಜನೆಗಳು ಸಕಾರಕ್ಕೆ ರೈತರಿಗೆ ತಲುಪಿಸುವಂತೆ ಅಧಿಕಾರಿಗಳಿ ತಾಕೀತು ಮಾಡಿದರು. ಎಲ್ಲಾ ರೈತರು ಬುದ್ದಿವಂತರಿರಯವುದಿಲ್ಲ ಅನಕ್ಷಸ್ಥರಿದ್ದಾರೆ ಗುಣಮಟ್ಟದ ಬೀಜ. ಗೊಬ್ಬರ ವಿತರಣೆ ಮಾಡಬೇಕು ಕೃಷಿ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವಂತೆ ತಿಳಿಸಿದರುಮ ದೇಶದ ಎರಡು ಕಣ್ಣುಗಳಾಗಿರುವ ಬೆಳೆ ಬೆಳೆಯುವ ರೈತ ಹಾಗೂ ಗಡಿ ಕಾಯುವ ಯೋಧರನ್ನು ಸದಾ ಗೌರವಿಸುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಯಾವುದೇ ರಾಜಕೀಯ ಪಕ್ಷ ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ರೈತ ಬೆಳೆ ಬೆಳೆದರೆ ದೇಶದ ಜೊತೆಗೆ ನಾವು ಉಳಿಯುತ್ತೇವೆ ತಾಲೂಕಿನಲ್ಲಿ ಮಳೆ ಬಾರದೆ ಇರುವುದರಿಂದ ಬರಗಾಲ ಆವರಿಸಿದ್ದು ಹೀಗಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಸೌಲಭ್ಯವನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ರೈತರಿಗೆ ಅನುಕೂಲವಾಗುವಂತಹ ಅನುಗ್ರಹ ಯೋಜನೆ, ಸರ್ಕಾರ ಜಾರಿಗೆ ತಂದಿದೆ ಸಹಕಾರಿ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಂಡು ಕೃಷಿ ಅಧಿಕಾರಿಗಳ ಸಹಾಯದಿಂದ ಉತ್ತಮ ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ ಪಿ ಭೂತಯ್ಯ ಮಾತನಾಡಿ ಮಾಜಿ ದಿವಂಗರ ಕೃಷಿ ಸಚಿವ ಚೌದರಿ ಹೆಸರಿನಲ್ಲಿ ರೈತ ದಿನಾಚರಣೆ ಮಾಡುತ್ತೇವೆ ಆದರೆ ಸರಕಾರ ಅವರ ಆದರ್ಶಗಳನ್ನು ಜಾರಿಗೆ ತರದೆ ಕಳಪೆ ಬಿತ್ತನೆ.ಬೀಜ ಗೊಬ್ಬರ ಕಂಪನಿಗಳನ್ನು ಬರಮಾಡಿಕೊಂಡು ರಾಸಾನಿಕ ಗೊಬ್ಬರ ಕ್ರಿಮಿ ನಾಷಕ ಔಷಧಿಯನ್ನು ರೈತರಿಗೆ ವಿತರಣೆ ಮಾಡುವುದರಿಂದ ಭುಮಿ ಬರಡಾಗಿ ಮನುಷ್ಯರು ಅನೇಕ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡಿದೆ. ಸರಕಾರ ಜಾರಿಗೆ ತಂದ ಭೂಚೇತನ ಕಾರ್ಯಕ್ರಮ ರದ್ದು ಮಾಡಿರುವುದರಿಂದ ರೈತರಿಗೆ ಮಣ್ಣು ನೀರು ಪರೀಕ್ಷೆಮ ಭೂತೇನ ಯೋಜನೆ ಜಾರಿಗೊಳಿಸುವಂತೆ ಸರಕಾರದ ಗಮನಹರಿಸುವಂತೆ ಶಾಸಕರ ಗಮನ ಸೆಳೆದರು.
ರೈತ ಮುಖಂಡ ಸೋಮಗುದ್ಧು ರಂಗಸ್ವಾಮಿ ಮಾತನಾಡಿ ಚೌದರಿ ಚರಣ್ ಸಿಂಗ್ ಪ್ರಧಾನಮಂತ್ರಿಯಾಗಿ ಆರು ತಿಂಗಳ ಅಧಿಕಾರ ಅವಧಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ ಮಹಾನ್ ತ್ಯಾಗಮಯಿ ಬೆಳೆ ವಿಮೆ ಬೆಳೆಗಳಿಗೆ ಬೆಂಬಲ ಬೆಲೆ ಮೊದಲು ಘೋಷಿಸಿದ ಕೀರ್ತಿ ಚರಣ್ ಸಿಂಗ್ ರವರಿಗೆ ಸಲ್ಲಬೇಕು ಇಂದಿನ ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ ಆದರೆ ಬೆನ್ನೆಲುಬನ್ನು ಮುರಿಯಲು ಸದಾ ಹವಣಿಸುತ್ತಿರುತ್ತಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡ ದೊಡ್ಡಳ್ಳಾರ್ತಿ ಕರಿಯಣ್ಣ ಕೃಷಿ ಇಲಾಖೆ ಉಪ ನಿರ್ದೇಶಕ ಬಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು ತೋಟಗಾರಿಕೆ
ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯ ರಮೇಶ್ ಗೌಡ ಕೃಷಿ ಸಹಾಯಕ ನಿರ್ದೇಶಕ ಡಾಕ್ಟರ್ ಅಶೋಕ್ ತಿಪ್ಪೇಸ್ವಾಮಿ . ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾಕ್ಟರ್ ವಿರುಪಾಕ್ಷಪ್ಪ ಶ್ರೀಕಂಠ ಮೂರ್ತಿ . ಚಿಕ್ಕಣ್ಣ. ತಿಪ್ಪೇಶ್ ಜಿಟಿ ಕರಿಯಣ್ಣ ಪ್ರಗತಿಪರ ರೈತ ದಯಾನಂದ ಮೂರ್ತಿ . ವಿಜ್ಞಾನಿ ಓಂಕಾರಪ್ಪ .ಕೃಷಿ ಉಪನಿರ್ಧೇಶಕ ಪ್ರಭಾಕರ್. ಡಾ.ರೇವಣ್ಣ. ಕೃಷಿ ಅಧಿಕಾರಿ ತಿಪ್ಪೇಸ್ವಾಮಿ.ಹೇಮ್ಲನಾಯ್ಕ.ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕ ರೈತರಿಗೆ ಸನ್ಮಾನಿಸಿ ಗೌರವಿಸಿದರು.
0 Comments