ಚಳ್ಳಕೆರೆ ಜನಧ್ವನಿ ವಾರ್ತೆ ಜೂ 12
ಸಭೆಗೆ ಗೈರು ಹಾಜರಿಯಾದ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಕಾರಣಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಪಂ ಸಿಇಒ ದೀವಾಕರ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕಿನ 40 ಗ್ರಾಪಂ ಪಿಡಿಒಗಳಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ವೀಡಿಯೋ ಸಂವಾದದ ಸಭೆಯಲ್ಲಿ ಪಿಡಿಒಗಳ ಹಾಜರಾತಿ ಪಡೆದು ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬಿಡುಗಡೆ ಮಾಡುವ ಯೋಜನೆಗಳನ್ನು ಸಮರ್ಪಕರವಾಗಿ ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ನೀಡುವ ಜತೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗ್ರಾಮಗಳ ಅರ್ವತೋಮುಖ ಅಭಿವೃದ್ಧಿಗೆ ಪಿಡಿಗಳು ಶ್ರಮಿಸ ಬೇಕು ಎಂದು ತಿಳಿಸಿದರು.
ಕಚೇರಿ ಸಿಬ್ಬಂದಿಗಳ ವೇತನವನ್ನು ಪಂಚತAತ್ರ ಹಾಜರಾತಿಯ ಆಥಾರದ ಮೇಲೆ ಪಾವತಿ ಮಾಡಬೇಕು. ಇನ್ನು ಮುಂದೆ ಕರ್ತವ್ಯದ ವೇಳೆ ಎಲ್ಲೋ ಇದ್ದು ಕಚೇರಿಯಲ್ಲಿದ್ದೇನೆ ಎಂದು ಸುಳ್ಳು ಹೇಳುವಂತೆ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಲೊಕೇಶನ್ ದಾಖಲಿಸಲ್ಪಡುತ್ತದೆ. ಪಂಚತAತ್ರ ಅರಿಯರ್ಸ್ ಬಾಕಿ ಎರಡು ದಿನದಲ್ಲಿ ಮುಕ್ತಾಯ ಮಾಡಬೇಕು ದಿನ ನಿತ್ಯವದ ಪಂಚಾಯಿತಿಯ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು ಆಸ್ತಿ ಸಮೀಕ್ಷೆ ಮಾಸಾಂತ್ಯಕ್ಕೆ ಪೂರ್ಣಗೊಳಿಸುವುದು.
ಬೀದಿ ದೀಪ, ಸ್ವಚ್ಚತೆ. ಕುಡಿಯುವ ನೀರಿನ ಪೂರೈಕೆ ಸಮಸ್ಯೆಯಾಗದಂತೆ ನಿಗಾವಹಿಸ ಬೇಕು, ಪ್ರತಿ ಗ್ರಾಮದಲ್ಲಿರುವ ನೀರಿನ ಟ್ಯಾಂಕ್-ತೊಟ್ಟಿ ಸ್ವಚ್ಛಗೊಳಿಸುವುದು. 14 ನೇ ಹಣಕಾಸು ಬಾಕಿ ಮೊತ್ತ ಪಾವತಿಸಿ, ದಾಖಲೆ ನೀಡಬೇಕು.
ಗ್ರಂಥಾಲಯಗಳನ್ನು ಆಗಸ್ಟ್ ಹದಿನೈದನೇ ತಾರೀಖಿನೊಳಗೆ +ಡಿಜಿಟಲ್ ಲೈಬ್ರರಿ ಹಾಗೂ ಬೀಕನ್ ಗ್ರಂಥಾಲಯ ಮಾಡಿಕೊಳ್ಳುವುದು. ಮಿಷನ್ ಅಂತ್ಯೋದಯ ತುರ್ತಾಗಿ ಮುಕ್ತಾಯ ಮಾಡುವುದು. ದೂರದೃಷ್ಟಿ ಯೋಜನೆ ಎಲ್ಲಾ ಹಂತದ ಸಭೆಗಳನ್ನು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಬೇಕು.
ಸಮುದಾಯ ಹಾಗೂ ವೈಯಕ್ತಿಕ ಶೌಚಾಲಯ ಫಲಾನುಭವಿಗಳಿಗೆ ಅನುದಾನ ಪಾವತಿಸಿ ಘನತ್ಯಾಜ್ಯ ವಿಲೇವಾರಿ ವಾಹನ-ಘಟಕದ ನಿರ್ವಹಣೆ ಸ್ವಸಹಾಯ ಸಂಘಗಳಿಗೆ ನೀಡಬೇಕು ಮನೆ ಬಾಗಿಲಿಗೆ ಇ-ಸ್ವತ್ತು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು ವಸತಿ ಯೋಜನೆ ಜಿಪಿಎಸ್ ವೇಗ ಪಡೆಯಲಿ. ನರೇಗಾ ಕಾಮಗಾರಿ ಮುಕ್ತಾಯ ಮಾಡಿ.
ಎಲ್ಲಾ ಪಿಡಿಒಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಸ್ಪಂಧಿಸಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಹಾಗೂ ನಿಮ್ಮ ಬಗ್ಗೆ ದೂರುಗಳು ಬರುವುದಿಲ್ಲ ಆದ್ದರಿಂದ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಪಿಡಿಒಗಳು ಜಿಪಂ ಇಇಒ ತಾಕೀತು ಮಾಡಿದರು.
0 Comments