ಚಳ್ಳಕೆರೆ: ಮಾನವರಾದ ನಾವು ಜಾತಿ ಧರ್ಮಗಳನ್ನು ಗೌರವಿಸುವ ಮುನ್ನ ಮಾನವ ಧರ್ಮವನ್ನು ಗೌರವಿಸುವುದು, ಉತ್ತಮ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ ತಿಳಿಸಿದರು
ತಾಲ್ಲೂಕಿನ ನಗರಂಗೆರೆ ಗ್ರಾಮದ ಬಳಿ ಇರುವ ಗರೀಬ್ ಷಾ ವಲೀ ದರ್ಗಾದಲ್ಲಿ ನಡೆದ ಉರೂಸ್ ಮತ್ತು ಖವಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಗರೀಬ್ ಷಾ ವಲಿ ಸೇರಿದಂತೆ ಎಲ್ಲಾ ಧರ್ಮದ ದಾರ್ಶನಿಕರು ಸಮಾಜದಲ್ಲಿ ಶಾಂತಿಯನ್ನು ಬಯಸಿದ್ದರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಾಘವೇಂದ್ರ ಸ್ವಾಮಿ ಬಸವಣ್ಣ ಬುದ್ಧ ಅಂಬೇಡ್ಕರ್ ರವರು ಸಮಾಜದಲ್ಲಿ ಎಲ್ಲಾ ಜಾತಿ ಧರ್ಮಗಳು ಸಮಾನ ಮನಸ್ಥಿತಿಯಲ್ಲಿ ಬದುಕಬೇಕು ಎಂಬ ಆಶಯವನ್ನು ಹೊಂದಿದ್ದರು ಇತ್ತೀಚಿನ ದಿನಗಳಲ್ಲಿ ರಾಜಕಾರಣದ ಕಾರಣದಿಂದಾಗಿ ಧರ್ಮಗಳ ನಡುವೆ ಕಲುಷಿತ ವಾತಾವರಣ ನಿರ್ಮಿಸಲು ರಾಜಕೀಯ ಪಕ್ಷಗಳು ಮುಂದಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಕಾಂಗ್ರೆಸ್ ಪಕ್ಷ ಸರ್ವಧರ್ಮದ ಹಿತವನ್ನು ಕಾಯುವ ಪಕ್ಷವಾಗಿದ್ದು ಜಾತಿ ರಾಜಕಾರಣ ಮಾಡದೆ ಎಲ್ಲರನ್ನೂ ಸಮಾನವಾದ ದೃಷ್ಟಿಕೋನದಿಂದ ನೋಡಿದ ಹಿನ್ನೆಲೆಯಲ್ಲಿ ಇಂದು ರಾಜ್ಯದಲ್ಲಿ ಅಧಿಕಾರ ಹಿಡಿದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿರುವುದು ಎಲ್ಲ ಧರ್ಮದ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಿದೆ ಗರಿಬ್ ಷಾ ವಾಲಿ ರವರ ಗದ್ದುಗೆ ದರ್ಶನದಿಂದ ತಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದ್ದು ಜನರ ನಂಬಿಕೆಯ ಸ್ಥಳವಾಗಿ ಮಾರ್ಪಟ್ಟಿದೆ ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರವಿಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಭಕ್ತಾಧಿಗಳು, ಮುಸ್ಲಿಂ ಭಾಂದವರು ಉಪಸ್ಥಿತರಿದ್ದರು.
0 Comments