ಚಳ್ಳಕೆರೆ ಮಾ.25. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಕೈವಾರ ತಾತಯ್ಯ ಅವರು ಅಂದಿನ ಕಾಲದಲ್ಲೇ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸರಳವಾಗಿ ಆತೋಜಿಸಿದ್ದ ಯೋಗಿನಾರೇಯಣ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ಪುಸ್ಪನಮನ ಸಲ್ಲಿಸಿ ಮಾತನಾಡಿದರು,
ಕೈವಾರ ತಾತಯ್ಯ ಅವರು ಸಮಾಜದಲ್ಲಿ ಬೇರೂರಿದ್ದ ಹಲವು ಮೂಢನಂಬಿಕೆ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ಮಾಡಿದ್ದರು. ಅವರ ಸಂದೇಶ, ತತ್ವಗಳು ಸಮಾಜಕ್ಕೆ ಅತ್ಯಂತ ಅವಶ್ಯಕ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಬಿ.ಸಿ.ಸಂಜೀವಮೂರ್ತಿ, ಬಿ.ವಿ. ಮಂಜುನಾಥ್, ಬಿ.ವಿ.ಚಿದಾನಂದಮೂರ್ತಿ, ನಿರಂಜನ್, ಸುರೇಶ್, ಸುನಿತಾಗೋಪಾಲಕೃಷ್ಣ, ನಾಗರಾಜ್, ವೆಂಕಟೇಶ್ ಇತರರಿದ್ದರು.
0 Comments