ಚಳ್ಳಕೆರೆ ಜನಧ್ವನಿ ವಾರ್ತೆ ಮೇ 10 ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಆಧುನಿಕ ಸಮಾಜದಲ್ಲಿ ಬಸವಣ್ಣನವರ ವಚನಗಳು ಸಮಾಜದ ಅನಿಷ್ಟ ಪದ್ದತಿಗಳನ್ನು ದೂರ ಮಾಡುವಲ್ಲಿ ಯಶಸ್ವಿಯಾದವು ಎಂದು ಲೇಖಕಿ ಹಾಗೂ ಶಿಕ್ಷಕಿ ಶಬ್ರಿನಾ ಮಹಮ್ಮದ್ ಹೇಳಿದರು.
ನಗರದ ಬಳ್ಳಾರಿ ರಸ್ತೆಯ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 891 ನೇ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಾರುವ ದೃಷ್ಟಿಯಿಂದ ಅನುಭವಮಂಟಪವನ್ನು ಪ್ರಾರಂಭಿಸಿ ಅಲ್ಲಿ ಎಲ್ಲಾ ಜಾತಿಯ ಸ್ವಾಮೀಜಿಗಳನ್ನು ಒಗ್ಗೂಡಿಸಿ ಸರ್ವರಿಗೂ ಸಮಾನತೆ ಸಾರುವ ಉದ್ದೇಶದಿಂದ ವಚನಗಳ ರಚನೆಗೆ ಮುಂದಾದವರು. ಅವರ ಆದರ್ಶಗಳನ್ನು ದೇಶಕ್ಕೆ ಬಿತ್ತರಿಸುವ ಮೂಲಕ ಜನರನ್ನು ಜಾಗೃತಿ ಮೂಡಿಸಿದ್ದರು ಎಂದರು
ಬಸವಲಿಂಗಮಹಾ ಸಿದ್ದಯ್ಯನಕೋಟೆ ಶಾಖಾ ಮಠಾದೀಶರು ಆಶೀರ್ವಚನ ನೀಡಿ, ಸಮಾಜದಲ್ಲಿ ಅಡಗಿದ್ದ ಮೌಢ್ಯ, ಕಂದಾಚಾರ,ಅಸಮಾನತೆಗಳ ವಿರುದ್ಧ ಹೋರಾಡಿದ ಮಹನೀಯರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಬಸವಣ್ಣನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸಮಾಜಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು. ೧೨ ನೇ ಶತಮಾನದ ವಚನಗಳ ಶತಮಾನ ವಾಗಿ ರೂಪುಗೊಂಡಿದೆ ಎಂದರು. ಕಾರ್ಯಕ್ರಮದ ಮೊದಲು ಬಸವಂಟಪದಿಂದ ಪ್ರಮುಖ ರಸ್ತೆಗಳಲ್ಲಿ ಬಸವಣ್ಣನ ವಚನತತ್ವದೊಂದಿ ಭಜನೆ ಮಾಡುವ ಮೂಲಕ ಜಾಥ ನಡೆಸಿ ನಂತರ ಬಸವ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು. ನಗರಸಭೆ ಸದಸ್ಯೆ ಮಂಜುಳ ಆರ್. ಪ್ರಸನ್ನಕುಮಾರ್
ಹನುಮಂತಪ್ಪ ಮಾಸ್ಟರ್, ಶರಣೆ ಜ್ಯೋತಿ ನಾಗರಜ್.ಶರಣೆ ಪ್ರತಿಬಾ ಬಸವರಾಜ್, ಹಾಗೂ ರಾಷ್ಟ್ರೀಯ ಬಸವದಳದ ಅಧ್ಯಕ್ಷರು.ಸದಸ್ಯರು ಇತರರಿದ್ದರು
![](https://janadhwani.in/wp-content/uploads/2024/05/IMG-20240510-WA0109.jpg)
0 Comments