ಚಳ್ಳಕೆರೆ ಜನಧ್ವನಿ ವಾರ್ತೆ ಡಿ.17. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಏನೇ ಬರೆದರೂ ಸಹ ತಾವು ಅದಕ್ಕೆ ತಕ್ಷಣವೇ ಸ್ಪಂದಿಸುತ್ತಿದ್ದು, ನೈಜ ಹಾಗೂ ನಿಷ್ಠುರ ವರದಿಗಾರಿಕೆಗೆ ಇಲ್ಲಿನ ಪತ್ರಕರ್ತರು ಹೆಸರಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಹಾಗೂ ತಾಲೂಕು ಸಂಘಗಳ ಸಂಯಯೋಗದೊಂದಿಗೆ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಹ ಪತ್ರಕರ್ತರಾಗಿದ್ದರು ಎಬ್ಬ ಹೆಮ್ಮೆಯ ವಿಚಾರವಾಗಿದ್ದು ಸೂರ್ಯ ಚಂದ್ರ ಇರುವವರೆಗೆ ಅವರ ಜೀವಂತಾಗಿರುವಂತೆಹ ಕೊಡುಗೆಗಳನ್ನು ನೀಡಿದ್ದಾರೆ.
ಅದೇ ರೀತಿ ಪತ್ರಕರ್ತರೂ ದಿನಿತ್ಯ ಹಾಗೂ ಹೋಗುಗಳ ಹಾಗೂ ಅಭಿವೃದ್ಧಿಗಳ ಬಗ್ಗೆ ಸುದ್ದಿ ಬಿತ್ತಿರುವ ಪತ್ರಕರ್ತರ ಹಲವು ದಿನಗಳ ಬೇಡಿಯಾದ ನಿವೇಶನ ಹಾಗೂ ಇತರ ಬೇಡಿಕೆಗಳನ್ನುಹಂತ ಹಂತವಾಗಿ ಈಡೇರಿಸಲಾಗುವುದು. ಪತ್ರಕರ್ತರು ಒಂದೇ ವೇಧಿಯಡಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.
ರಾಷ್ಟ್ರೀಯ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ವಿಜಯಕರ್ನಾಟಕ ವರದಿಗಾಠ ಎಂ.ಎನ್. ಅಹೋಬಲಪತಿ ಮಾತನಾಡಿ ಇಂದು ಪತ್ರಿಕಾದಿನಾಚರಣೆ ದಿನ ಕೇವಲ ಡಿ.ವಿ.ಗುಂಡಪ್ಪನವರ ಪೋಟೊ ಜತೆ ಡಾ.ಅಂಬೇಡ್ಕರ್ ಭಾವಚಿತ್ರವು ಸಹ ಇಡಬೇಕಿದೆ ಡಾ .ಬಿ.ಆರ್ ಅಂಬೇಡ್ಕರ್ ಸಹ ಮೂರು ಪತ್ರಿಕೆಗಳನನ್ನು ನಡೆಸುವ ಮೂಲಕ ಸಾಮಜ ಕಟ್ಟ ಕಡೆಯ ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಹೋರಾಡಿದ ಮಾಹನ್ ವ್ಯಕ್ತಿಯಾಗಿದ್ದಾರೆ.
ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಸಂಸ್ಥೆಯಿಂದ ವೇತನ ನೀಡುತ್ತದೆ ಆದರೆ ನಗರ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಯಾವುದೇ ವೇತನ ನೀಡದೆ ಇರುವುದರಿಂದ ಸಂಕಷ್ಟದಲ್ಲಿ ಸುದ್ದಿ ಸಂಗ್ರಹಿಸ ಕಳಿಸ ಬೇಕಾದ ಅನಿವಾರ್ಯತೆ ಇದೆ ಆದ್ದರಿಂದ ಉಚಿತ ಬಸ್ ಪಾಸ್ ಹಾಗೂ ಯಾವುದೇ ಯೋಜನೆಯಡಿಯಲ್ಲಿ ನಿವೇಶ ನೀಡಬೇಕಿದೆ. ಇಂದು ಪ್ರತಿಕೆಗಳೂ ಸಹ ಸಂಕಷ್ಟಕ್ಕೆ ಸಿಲುಕಿದ್ದು ಕೊಂಡು ಓದುಗಳ ಸಂಖ್ಯೆಯಾಗಿದ್ದು ಪತ್ರಿಕೆಗಳನ್ನು ಕೊಂಡು ಓದಿದಾಗ ಮಾತ್ರ ಪತ್ರಿಕಗಳ ಉಳಿಯಲು ಸಾಧ್ಯ.
ಜನಪ್ರತಿ ನಿಧಿ ಹಾಗೂ ಅಧಿಕಾರಿಗಳಲ್ಲಿ ಯಾರು ಪತ್ರಕರ್ತರು ಎಂಬ ಅನುಮಾನಕ್ಕೆ ಎಡೆಯಾಗಿದ್ದು ದಿನ ನಿತ್ಯ ಸುದ್ದಿ ಬರೆಯುವ ಅರ್ಹ ಪತ್ರಕರ್ತರನ್ನು ಗುರುತಿಸುವ ಮೂಲಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಟ್ಟ ಹಾಗೂ ಪತ್ರಕರ್ತರಿಗೆ ನಿವೇಶನ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಶಾಸಕಲ್ಲಿ ಮನವಿ ಮಾಡಿಕೊಂಡರು.
ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ಪತ್ರಕರ್ತ ಹೆಂಜೇರಪ್ಪ ಮಾತನಾಡಿ ಪತ್ರಿಕೆ ವಿತರಕರು ಹಾಗೂ ಹಂಚಿಕೆ ಮಾಡುವವರನ್ನು ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರು ಎಂದು ಘೋಷಣೆ ಮಾಡಿದ್ದು ಪತ್ರಿಕೆ ವಿತರಣೆ ಮಾಡುವಾಗ ಮೃತ ಪಟ್ಟರೆ 2 ಲಕ್ಷ ರೂ ಪರಿಹಾರ ದೊರೆಯಲಿದೆ, ಬಿಪಿಎಸ್ ಪಡಿತರ ವಂಚಿತರ ಪತ್ರಿಕಾ ವಿತರಕರಿಗೆ ಹಾಗೂ ಹಂಚಿತರಾರರಿಗೆ ಬಿಪಿಎಲ್ ಪಡಿತರ ಚೀಟಿ ನೀಡಿದರೆ 5 ಲಕ್ಷ ರೂ ವರೆಗೆ ಅವರ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ.
ಪತ್ರಿಕೆಗಳು ಸಂಕಷ್ಟದಲ್ಲಿದ್ದು ಎಸ್ಸಿ-ಎಸ್ಟಿ ಪತ್ರಿಕೆಗಳಿಗೆ ನಾಲ್ಕು ಪುಟ ಜಾಹಿರಾತು ನೀಡಿದ್ದ ಸರಕಾರ ಎರಡು ಪುಟಗಳಿಗೆ ಇಳಿಸಿದ್ದು ನಾಲ್ಕು ಜಾಹಿರಾತು ಹಾಗೂ ಗಡಿ ಭಾಗದ ಪತ್ರಿಕೆಗಳು ನೀಡ ಬೇಕಾದ ಜಾಹಿತು ಸೌಲಭ್ಯಗಳನ್ನು ಸರಕಾರದ ಗಮನ ಸೆಳೆಯುವಂತೆ ಶಾಸರ ಗಮನ ಸೆಳೆದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ ಗೌಡ, ಕನ್ನಡರಾಜ್ಯೊತ್ಸವ ಪಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ, ಡಿವೈಎಸ್ ಪಿ ರಾಜಣ್ಣ, ಡಾ.ನಾಗೇಂದ್ರನಾಯ್ಕ. ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿದರ.
ಇದೇ ಸಂದರ್ಭದಲ್ಲಿ ವಿವಿಧ ಸಾಧಕ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ,ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಖಜಾಂಚಿ ಡಿ.ಕುಮಾರಸ್ವಾಮಿ, ಚಳ್ಳೆರೆವೀರೇಶ್ ಅಪ್ಪು.ರೂತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ತಾಲೂಕು ಕರವೇ ಅಧ್ಯಕ್ಷ ಸ್ವಪ್ನ ವೆಂಕಟೇಶ್, ಸಮಾಜ ಸೇವಕ ಸೈಯಾದ್, ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments