ಹಿರಿಯೂರು :
ತೋಟಗಾರಿಕೆ ಇಲಾಖೆಯಲ್ಲಿ ಬೆಳೆವಿಮೆ ಕುರಿತು ಅಧಿಕಾರಿಗಳು ಮತ್ತು ವಿಮೆ ಕಂಪನಿಯ ಎಂಡಿಗಳಿಗೆ ಸಭೆ ಕರೆಯಲಾಗಿದ್ದು, ಸಭೆಗೆ ಬೆಳೆ ವಿಮೆ ಕಂಪೆನಿಯ ಎಂ ಡಿ ಸಭೆಗೆ ಹಾಜರಾಗದೇ ಇರುವುದು ನಿಜಕ್ಕೂ ಖಂಡನೀಯ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತೋಟಗಾರಿಕೆ ಇಲಾಖೆಯಲ್ಲಿ ಬೆಳೆವಿಮೆ ಕುರಿತು ವಿಮೆ ಕಂಪನಿಯ ಅಧಿಕಾರಿಗಳು ಹಾಗೂ ಎಂಡಿಗಳ ವಿರುದ್ಧ ಎಲ್ಲ ರೈತರು ಧಿಕ್ಕಾರ ಕೂಗಿ, ಸುಮಾರು ಮೂರು ಗಂಟೆಗಳ ಕಾಲ ಬಾಗಿಲಲ್ಲಿ ಮಲಗಿ ಪ್ರತಿಭಟನೆ ನಡೆಸಿ, ನಂತರ ಅವರು ಮಾತನಾಡಿದರು.
ಸಭೆಗೆ ಬೆಳೆ ವಿಮೆ ಕಂಪೆನಿಯ ಎಂ ಡಿ ಅವರು ಹಾಜರಾಗದೇ ಇರುವುದನ್ನು ಖಂಡಿಸಿ ತೋಟಗಾರಿಕಾ ಇಲಾಖೆ ಮುಂಭಾಗದಲ್ಲಿ ರೈತರು ಆಕ್ರೋಶಭರಿತರಾಗಿ ಬಾಗಿಲಿಗೆ ಅಡ್ಡವಾಗಿ ಮಲಗಿ ಕಂಪನಿಯ ಮಾಲೀಕರು ಬರುವವರೆಗೂ ನಾವು ತೆರಳುವುದಿಲ್ಲ ಮತ್ತು ಇಲಾಖೆ ಅಧಿಕಾರಿಗಳನ್ನು ಹೊರ ಹೋಗಲು ಬಿಡುವುದಿಲ್ಲ ಎಂದು ದಿಗ್ಬಂದನ ಹಾಕಿ, ಒತ್ತಾಯಿಸಿದರು.
ಕಳೆದ ಬಾರಿ ಅತಿಯಾದ ಮಳೆ ಬಂದು ಅತಿವೃಷ್ಟಿ ಉಂಟಾಗಿ ಅಡಿಕೆ ದಾಳಿಂಬೆ ಮಾವು ಬೆಳೆಗಳು ಸಂಪೂರ್ಣ ಹಾಳಾಗಿರುವುದರಿಂದ ರೈತರಿಗೆ ಬೆಳೆ ವಿಮೆ ಕೊಡಬೇಕಾಗುತ್ತದೆ ಎಂದು ಸಭೆಗೆ ಬಂದಿರುವುದಿಲ್ಲ ಎಂದು ವಿಮೆ ಕಂಪನಿಯ ಮತ್ತು ಅಧಿಕಾರಿಗಳ ವಿರುದ್ಧ ಎಲ್ಲ ರೈತರು ಧಿಕ್ಕಾರ ಕೂಗಿದರು.
ಕೊನೆಗೆ ತೋಟಗಾರಿಕಾ ಜಿಲ್ಲಾ ಉಪನಿರ್ದೇಶಕರು ಸವಿತಾ ಮತ್ತು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರ ಮನವೊಲಿಸಿ ಖಂಡಿತವಾಗಿಯೂ ಕಂಪನಿಯ ಮಾಲೀಕರನ್ನು ಕರೆಸಿ ನಿಮಗೆ ವಿಮೆ ಕಂಪನಿಯಿಂದ ಬರಬೇಕಾಗಿರುವ ಎಲ್ಲಾ ಹಣವನ್ನು ಕೊಡಿಸುತ್ತೇವೆ ಮತ್ತು ವಿಮೆಹಣ ಯಾರಿಗೆ ಬಂದಿರುವುದಿಲ್ಲ ಅವರೆಲ್ಲರ ಪಟ್ಟಿ ಮಾಡಿ ಎಲ್ಲರಿಗೂ ಹಣ ಕೊಡುಸುತ್ತೇವೆ ಎಂದು ಭರವಸೆ ನೀಡಿದರಲ್ಲದೆ,ನಂತರ ಸಭೆ ನಡೆಸಿ ರೈತರ ಅಹವಾಲುಗಳನ್ನು ಸ್ವೀಕರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಓಂಕಾರಪ್ಪ ಮಾತನಾಡಿ, ಅತಿಯಾದ ಮಳೆ ಆಗಿರುವುದರಿಂದ ನಮ್ಮ ತಾಲೂಕಿನಲ್ಲಿ ಅನೇಕ ರೋಗಗಳು ಉಲ್ಬಣಿಸುವ ಸಂಭವವಿದ್ದು, ತೇವಾಂಶ ಹೆಚ್ಚಾಗಿ ಕೊಳೆರೋಗ ಮತ್ತು ಅರಳು ಉದುರುವಿಕೆ ಹೆಚ್ಚಾಗಿದ್ದು, ಅನೇಕ ರೈತರು ತೋಟಗಳನ್ನ ಕಳೆದುಕೊಂಡಿದ್ದಾರೆ ಮತ್ತು ದಿನನಿತ್ಯ ರೈತರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅನೇಕ ಸಮಸ್ಯೆಗಳನ್ನು ತರುತ್ತಾರೆ ಎಂದರಲ್ಲದೆ,
ರೈತರು ಬೆಳಗ್ಗೆ ಬೇಕಾದ ನೀರನ್ನು ಮಾತ್ರ ಕಟ್ಟಬೇಕು ಮತ್ತು ಹೆಚ್ಚಿಗೆ ಕೊಟ್ಟಿಗೆ ಗೊಬ್ಬರವನ್ನ ಬಳಸಬೇಕು ಎಂದು ಮಾರ್ಗದರ್ಶನ ನೀಡಿದರು ಕೊನೆಯಲ್ಲಿ ಮುಂದಿನ ವಾರದೊಳಗಾಗಿ ಅವರಿಗೆ ಪತ್ರ ಬರೆಯುವ ಮೂಲಕ ಸಮಯ ನಿಗದಿ ಮಾಡಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು
ಈ ಸಭೆಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಆಲೂರು ಸಿದ್ಧರಾಮಣ್ಣ, ವೈ.ಶಿವಣ್ಣ, ರಂಗಸ್ವಾಮಿ, ಅರಳಿಕೆರೆ ತಿಪ್ಪೇಸ್ವಾಮಿ, ಮೀಸೆರಾಮಣ್ಣ, ಗೌಡಪ್ಪ, ತಿಮ್ಮಾರೆಡ್ಡಿ, ವಿರೂಪಾಕ್ಷಪ್ಪ, ಜಯಣ್ಣ, ಶಶಿ, ರಾಮಕೃಷ್ಣ, ಶಿವಣ್ಣ, ಚಂದ್ರಪ್ಪ, ಸತೀಶ್, ಬಾಲು ತಿಮ್ಮಣ್ಣ, ಕವಿತಾ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments