ಚಳ್ಳಕೆರೆ ಸೆ.20.ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರಮಹೋತ್ಸವ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಡಗರ ಸಂಭ್ರಮದಿಂದ ಸಿಡಿ ಉತ್ಸವ ಜರುಗಿತು.
ದೇವಸ್ಥಾನದ ಮುಂಭಾಗದಲ್ಲಿ ಭೂಮಿಗೆ ನೇರವಾಗಿ ಕಂಬವೊಂದನ್ನು ಸ್ಥಾಪನೆ ಮಾಡಲಾಗಿರುವ ಮಲ್ಲಕಂಬದ ಮೇಲೆ ತಿರುಗಣಿಯನ್ನು ಇಡಲಾಗುತ್ತದೆ. ಈ ತಿರುಗಣಿಗೆ ಸಮಾನಂತರವಾಗಿ ಪ್ರತಿಷ್ಠಾಪಿಸಲಾಗುವ ಸಿಡಿಗಂಬವು ಸುಲಭವಾಗಿ ತಿರುಗಲು ವ್ಯವಸ್ಥೆ ಮಾಡುತ್ತದೆ. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ 3 ಬಾರಿ ಕಂಬ ತಿರುಗಿಸಲಾಗುತ್ತದೆ. ಸಿಡಿ ಮರಕ್ಕೆ ಕಟ್ಟುವ ಮನುಷ್ಯ ಉಪವಾಸ ಭಯ ಭಕ್ತಿಯಿಂದ ನಡೆಮುಡಿಯಲ್ಲಿ ಪೂಜೆಯೊಂದಿಗೆ ಕರೆತಂದು ಸಿ ಡಿ ಮರಕ್ಕೆ ಬಟ್ಟೆಯಿಂದ ಕಟ್ಟಿದ ನಂತರ ಸಿಡಿ ಮರವನ್ನು ಮೂರು ಬಾರಿ ಸುತ್ತಿಸಿ ನಂತರ ಕೆಳಗಿಸುತ್ತಾರೆ. ಸಿಡಿ ಉತ್ಸವದಲ್ಲಿ ಗೊರವಗಳ ಕುಣಿತದೊಂದಿಗೆ ದೋಣಿಗೆ ಹಣ್ಣು ಹಾಕಿ ಮಣೇವು ಹಾಕುತ್ತಾರೆ. ಸಿಡಿ ಉತ್ಸವದಲ್ಲಿ ಗೌರಸಮುದ್ರ ಗ್ರಾಮದ ಸುತ್ತ ಮುತ್ತಲಿನ ಪ್ರದೇಶ ಭಕ್ತರು ಭಾಗವಹಿಸಿದ್ದರು ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು. ಗ್ರಾಪಂ ಅಧ್ಯಕ್ಷ.ಉಪಾಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.
![](https://janadhwani.in/wp-content/uploads/2023/09/Screenshot_20230920_161524.png)
ಸುತ್ತ ಮುತ್ತಲ ಹಳ್ಳಿಗಳ ಸಹಸ್ರಾರ ಭಕ್ತರ ಸಮ್ಮುಖದಲ್ಲಿ ಹರಕೆ ಹೊತ್ತ ಭಕ್ತರು ಬೇವಿನ ಸೀರೆಯುಟ್ಟು ಮತ್ತು ಸಿಡಿ ಆಡಿ ಹರಕೆ ತೀರಿಸಿದರು. ಈ ಕೌತುಕದ ಕ್ಷಣ ನೋಡಲು ಸಾವಿರಾರು ಭಕ್ತರು ಕಣಿವೆಯಲ್ಲಿ ಸೇರಿದ್ದರು.
0 Comments