ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ನಗರದ ಜನತೆಯ ಆರಾದ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಶ್ರದ್ಧೆ ಭಕ್ತಿ ಸಂಭ್ರಮದಿAದ ಬುಧವಾರ .ಮದ್ಯಾಹ್ನ 3.30 ಸಮಯಕ್ಕೆ ಸರಿಂಯಾರಿ ಮುಕ್ತಿ ಬಾವುಟ ಹರಾಜು ಮಾಡಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.
ನಗರದ ವಿವಿದೆಡೆಗಳಿಂದ ಬಂದ ಭೃಹತ್ ಹೂವಿನ ಹಾರಗಳು ವೈವಿದ್ಯಮಯ ಬಣ್ಣಗಳ ಬಾವುಟಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಶ್ರೀ ವೀರಭದ್ರಸ್ವಾಮಿಯನ್ನು ಆಸೀನಗೊಳಿಸಿ ವಿಶೇಷ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಜಯಘೋಷಣೆಗಳೊಂದಿಗೆ ಅಪಾರ ಸಂಖ್ಯೆಯ ಭಕ್ತಸಮೂಹ ಸಮ್ಮುಕದಲ್ಲಿ ರಥದ ಹಗ್ಗಕ್ಕೆ ಕೈ ಹಾಕಿದ ನಂತರ ಪುರಂತರ ವೀರನಾಟ್ಯದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ರಥದ ಬೀದಿಯಲ್ಲಿ ಗಾಂಭೀರ್ಯದಿಂದ ಹೊರಟ ತೇರಿನ ಮುಂಭಾಗ ಮಂಗಳವಾಧ್ಯಗಳು ಕರಡಿ ಮಜಲು, ನಂದಿಕೋಲು, ಕೋಲಾಟ, ಮತ್ತಿತರ ಜಾನಪದ ಕಲಾತಂಡಗಳು ಸಾಥ್ ನೀಡಿದವು. ಭಕ್ತಿ ಪರವಶರಾದ ಭಕ್ತಸಮೂಹ ಶ್ರೀ ಸ್ವಾಮಿಗೆ ಜಯಕಾರ ಹಾಕುತ್ತಾ ಸೂರುಬೆಲ್ಲ ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಅರ್ಪಿಸಿ ಪುನೀತ ಭಾವದೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಮುಕ್ತಿಬಾವುಟ ಹರಾಜು:
ತೇರು ಎಳೆಯುವ ಮುನ್ನ ತೇರನ್ನು ಅಲಂಕರಿಸಿದ್ದ ಪ್ರಧಾನ ಮುಕ್ತಿಬಾವುಟವನ್ನು ಹರಾಜು ನಡೆಸಿದಾಗ ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ 27 ಲಕ್ಷ ರೂಗಳಿಗೆ ಕೂಗಿದರೆ, ಚಿತ್ರದುರ್ಗ ಕ್ಷೇತ್ರ ಶಾಸಕ ಕೆ.ಸಿ.ವೀರೇಂದ್ರಪಪ್ಪಿ 30 ಲಕ್ಷ ರೂಗಳಿಗೆ ಹರಾಜಿನಲ್ಲಿ ಭಾಗವಹಿಸಿ ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ದೇವಾಲಯದ ಸಮಿತಿ ಅಧ್ಯಕ್ಷರು ,ಸದಸ್ಯರು, ನಗರಸಭೆ ಸದಸ್ಯರು, ಮಾಜಿ ಜಿಪಂ ,ತಾಪಂ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು, ವಿವಿಧ ಗಣ್ಯರು ಪಾಲ್ಗೊಂಡಿದ್ದರು
0 Comments