ಚಳ್ಳಕೆರೆ ಏ11 ಮುಸ್ಲಿಂ ಸಮುದಾಯದ ಪರಮ ಪವಿತ್ರ ಹಬ್ಬ ರಂಜಾನ್ ಆಚರಣೆ ನಗರದಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು.
ಒಂದು ತಿಂಗಳ ಉಪವಾಸ ವ್ರತಾಚರಣೆ ಬಳಿಕ ಗುರುವಾರ ನಸುಕಿನಲ್ಲಿಯೇ ಪರಿಶುಭ್ರರಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಬಾಂಧವರು
ಹೊಸ ಬಟ್ಟೆಗಳನ್ನು ತೊಟ್ಟು ಪುರುಷರು, ಯುವಕರು ಹಾಗೂ ಮಕ್ಕಳು ನಗರದ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಒಬ್ಬರಿಗೊಬ್ಬರು ರಂಜಾನ್ ಹಬ್ಬದ ಶುಭಾಷಯಗನ್ನು ವಿನಿಮಯ ಮಾಡಿಕೊಂಡರು .
ನಂತರ ಮನೆಯಲ್ಲಿ ಬಳಿಕ ಹಬ್ಬದ ಆಚರಣೆಗೆ ಅಗತ್ಯವಿರುವ ತರಹೇವಾರಿ ಹಬ್ಬದೂಟದ ಸಿದ್ಧತೆ ಮಾಡಿ ಸ್ನೇಹಿತರಿಗೆ ಕರೆದು ಊಟ ಬಡಿಸುತ್ತಾರೆ. ಯಾವುದೇ ಅಹಿತರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಾಜಣ್ಣ. ಠಾಣಾಧಿಕಾರಿ ಕೆ.ಕುಮಾರ್. ಪಿಎಸ್ ಐ ಗಳಾದ ಸತೀಶ್ ನಾಯ್ಕ.ಧರೆಪ್ಪ.ಶಿವರಾಜ್ ಹಾಗೂ ಪೋಲಿಸ್ ಸಿಬ್ಬಂದಿಗಳು ಮೆರವಣಿಗೆ ಹಾಗೂ ಪ್ರಾರ್ಥನೆವೇಳೆ ರಕ್ಷಣೆ ನೀಡಲಾಗಿತ್ತು.
ಶತಾಯಿಷಿ ಹಿರಿಯರ ಕುಟುಂಬಸ್ಥರು ಮನೆಯಲ್ಲೇ ಸಾಮೂಹಿಕ ಪ್ರಾರ್ಥನೆ.
0 Comments