ಚಳ್ಳಕೆರೆ: ರೈತರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ರಾಜ್ಯ ಸರ್ಕಾರದ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಹಾಗೂ ರಾಜ್ಯದ ರೈತರಿಗೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಶ್ರೀಕಂಠ ಮೂರ್ತಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ರವರು ರಾಜ್ಯದ ರೈತರ ಕುರಿತು ವಿವಧಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ರೈತರು ಯಾವತ್ತು ಬರಗಾಲವನ್ನು ಬಯಸಿದವರಲ್ಲ ರೈತರ ಕಸುಬು ಕೃಷಿಯಾಗಿದೆ ಸಚಿವರು ಪದೇ ಪದೇ ಅನ್ನದಾತರನ್ನು ಅವಮಾನಿಸಿ ರೈತರ ಜೀವನವನ್ನು ಹಂಗಿಸುವುದು ಮಾನಸಿಕ ದೌರ್ಜನ್ಯ ಮಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ರೈತರಿಗೆ 5 ಲಕ್ಷ ಪರಿಹಾರ ಹೆಚ್ಚಿಸಿದ್ದಕ್ಕೆ ಹೆಚ್ಚು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ರೈತರಿಗೆ ನೀರು ಮತ್ತು ವಿದ್ಯುತ್ತನ್ನು ಉಚಿತವಾಗಿ ಕೊಟ್ಟರು ಬರಗಾಲ ಬಯಸುತ್ತಿದ್ದಾರೆ ರೈತರ ಸಾಲ ಮನ್ನಾ ಆಗುತ್ತದೆ ಎಂಬ ಆಶಯದಿಂದ ಬರಗಾಲವನ್ನು ರೈತರು ಹೆಚ್ಚು ಅಪೇಕ್ಷಿಸುತ್ತಿದ್ದಾರೆ ಎಂಬ ರೈತರನ್ನು ಅವಮಾನಿಸುವಂತಹ ಹೇಳಿಕೆ ನೀಡುತ್ತಿರುವ ಸಚಿವರು ರೈತರೇ 50 ಲಕ್ಷಕ್ಕೂ ಹೆಚ್ಚು ಹಣ ನೀಡುತ್ತಾರೆ ಸಚಿವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಇಂತಹ ಕೀಳು ಹೇಳಿಕೆಗಳನ್ನು ನೀಡುವ ಸಚಿವರನ್ನು ಸಚಿವ ಸಂಪುಟದಿಂದ ಮಾನ್ಯ ಮುಖ್ಯಮಂತ್ರಿ ಅವರು ಕೂಡಲೇ ವಜಾ ಮಾಡಬೇಕು ಮತ್ತು ರೈತರು ಬೆಳೆದಿರುವ ಅನ್ನ ತಿನ್ನುವಂತಹವರಾದರೆ ತಕ್ಷಣ ರೈತರಿಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ರೈತರು ಬಿಸಿಲಿಗೆ ಬೆನ್ನು ಒಡ್ಡಿ ಮಳೆಯನ್ನು ನಂಬಿ ಎಂತಹ ಕಷ್ಟ ಬಂದರೂ 140 ಕೋಟಿ ಜನಕ್ಕೆ ಊಟ ಹಾಕುತ್ತಾರೆ ರೈತರನ್ನು ಪ್ರತಿ ತುತ್ತು ತಿನ್ನುವಾಗಲು ನೆನೆಸಿಕೊಂಡು ಪ್ರೋತ್ಸಾಹಿಸಿ ಗೌರವಿಸಬೇಕೆ ವಿನಃ ಇಂತಹ ಕೀಳು ಹೇಳಿಕೆಗಳನ್ನು ನೀಡುವುದು ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಲ್ಲ ಶಿವಾನಂದ ಪಾಟೀಲರು ಬಹಿರಂಗವಾಗಿ ರೈತರ ಕ್ಷಮೆ ಕೋರಬೇಕು ಇಲ್ಲದಿದ್ದರೆ ರಾಜ್ಯದ ರೈತರೆಲ್ಲರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಬಸವರಾಜು ಜಿಲ್ಲಾ ಉಪಾಧ್ಯಕ್ಷ ಎರಿಸ್ವಾಮಿ ರೈತ ಮುಖಂಡರಾದ ತಿಪ್ಪೇಸ್ವಾಮಿ ರಾಮಚಂದ್ರಪ್ಪ ಅಜ್ಜಪ್ಪ ವೀರೇಶ್ ಶಿವಣ್ಣ ಜಯಣ್ಣ ರತ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments