ಮೊಳಕಾಲ್ಕೂರು, ಡಿಸೆಂಬರ್ 05 : ಮಹಾರಾಷ್ಟ್ರ ರಾಜ್ಯದ ಕಾರ್ಗವ್ ಪೋಸ್ಟ್, ರಾಯಗಡ ಜಿಲ್ಲೆ, ರೋಹ
ತಾಲ್ಲೂಕಿನ ಅಸರ್ ಗ್ರಾಮದ ನಿವಾಸಿ ಸಮೀರ್ ತುಕಾರಾಂ ವಾಗೇರಿ ತಂದೆ ಲೇಟ್ ತುಕಾರಾಂ ಸುಮಾರು 25
ವರ್ಷ ವಯಸ್ಸು. ಇವರನ್ನು ಅನಿಲ್ ಗಂಗರಾಮ್ ಚೌವ್ಹಾಣ್ ತಂದೆ ಗಂಗರಾಮ್ ಅಲ್ಲನ ವಾಡಿ ಪೋಸ್ಟ್,
ಪಾರ್ತಡಿ ತಾಲ್ಲೂಕು ಮಹಾರಾಷ್ಟ್ರ ರವರು ಚಿತ್ರದುರ್ಗ ಜಿಲ್ಲೆ ಮೊಳಕಾಲೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ
ಕೂಲಿ ಕೆಲಸಕ್ಕೆಂದು ಕರೆದುಕೊಂಡು ಬಂದಿದ್ದು, ಅಲ್ಲಿಯೇ ಸೀಮೆ ಜಾಲಿ ಕಟ್ಟಿಗೆಗಳನ್ನು ಕಡಿದು ಅವುಗಳನ್ನು
ಸುಟ್ಟು ಇದ್ದಿಲನ್ನು ತಯಾರು ಮಾಡುವ ಕೆಲಸ ಮಾಡಿಕೊಂಡಿದ್ದರು. ಸಮೀರ್ ತುಕಾರಾಂ ವಾಗೇರಿ ರವರ ನಾಲ್ಕು ವರ್ಷಗಳ ಹಿಂದೆ ಪತ್ನಿ
ಮೃತಪಟ್ಟಿದ್ದು ಇದರ ಚಿಂತೆಯಲ್ಲಿ
ಸಮೀರ್ ರವರು ಅತೀಯಾದ ಮಧ್ಯವಸನಿಯಾಗಿರುತ್ತಾರೆ. ಮನಸ್ಸಿಗೆ ತುಂಬಾ ಬೇಸರ ಪಟ್ಟುಕೊಂಡು
ಸಂಸಾರದಲ್ಲಿ ಬೇಸತ್ತು, ಜೀವನದಲ್ಲಿ ಜಿಗುಪ್ಪೆಗೊಂಡು ವಿಷ ಸೇವಿಸಿ ವಾಂತಿ ಮಾಡಿಕೊಂಡು
ಬಿದ್ದಿದ್ದು, ಜೊತೆಯಲ್ಲಿದ್ದ ಅನಿಲ್ ಗಂಗಾರಾಮ್ ರಾಂಪುರ ಸರ್ಕಾರಿ
ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ
ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ನೋಡಲಾಗಿ ಸಮೀರ್ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ
ಎಂದು ತಿಳಿಸಿರುತ್ತಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದಾಖಲಾಗಿರುತ್ತದೆ.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments