ಚಳ್ಳಕೆರೆ: ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕುಗಳನ್ನು ಯಾವುದೇ ಒಂದು ವರ್ಗಕ್ಕೆ ಮೀಸಲಾಗಿರದೆ ಪ್ರತಿಯೊಬ್ಬ ಪ್ರಜೆಯು ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ತಿಳಿಸಿದರು.
ನಗರದ ಚಳ್ಳಕೆರಮ್ಮ ದೇವಾಲಯದ ಮುಂದೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಜನರಿಗೂ ಹಾಗೂ ಶಾಲಾ ವಿದ್ಯಾರ್ಥಿಗಳಿಗೂ ಸಂವಿಧಾನದ ಆಶಯ ಹಾಗೂ ಧ್ಯೇಯವನ್ನು ತಿಳಿಸುವ ನಿಟ್ಟಿನಲ್ಲಿ ಈ ಜಾತ ನಡೆಸಲಾಗುತ್ತಿದೆ ಸಂವಿಧಾನ ಎಲ್ಲ ವರ್ಗದವರಿಗೂ ಸಮಾನತೆ ನೀಡಿ ವಿಶ್ವವೇ ಮೆಚ್ಚುವಂತಹ ಸಂವಿಧಾನ ಎನಿಸಿಕೊಂಡಿದೆ.ಎಂದರು
ಸಂವಿಧಾನ ಜಾಗೃತಿ ಜಾತವನ್ನು ಚಳ್ಳಕೆರಮ್ಮ ದೇವಾಲಯದ ಮುಂದೆ ಸ್ವಾಗತಿಸಿ, ಬಳ್ಳಾರಿ ರಸ್ತೆ ನೆಹರು ವೃತ್ತ ಚಿತ್ರದುರ್ಗ ರಸ್ತೆ ಅಂಬೇಡ್ಕರ್ ವೃತ್ತ ವಾಲ್ಮೀಕಿ ವೃತ್ತ ಜಗಜೀವನ್ ರಾಮ್ ವೃತ್ತ ಗಳಲ್ಲಿ ವಿವಿಧ ಶಾಲಾ ಮಕ್ಕಳೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ನಗರಸಭೆ ಆವರಣದಲ್ಲಿ ಸಮಾವೇಶಗೊಳ್ಳಲಾಯಿತು.
ಸಮಾವೇಶದಲ್ಲಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ ಅಂಬೇಡ್ಕರ್ ಅವರ ದೂರ ದೃಷ್ಟಿ ಯೋಚನೆಯಿಂದ ಇಂದು ಭಾರತ ಅದ್ಭುತವಾದಂತಹ ಸಂವಿಧಾನವನ್ನು ಹೊಂದಿದೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಾವೆಲ್ಲರೂ ನಡೆಯಬೇಕಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಸಂವಿಧಾನಕ್ಕೆ ಅಗೌರವ ತೋರುವುದನ್ನು ಅಪರಾಧವಾಗಿದ್ದು ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ಪೌರಾಯುಕ್ತ ಚಂದ್ರಪ್ಪ ತಹಶೀಲ್ದಾರ್ ರೆಹಾನ್ ಪಾಷಾ ಬಿಒ ಸುರೇಶ್ ವಕೀಲರಾದ ಪಾಪಣ್ಣ ವಿಜಯ್ ಕುಮಾರ್ ಚಂದ್ರು ಮಂಜುಳಮ್ಮ ಶಶಿಧರ್ ಡಿ ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು
0 Comments