ನಾಯಕನಹಟ್ಟಿ ಮಾ.13 ಪಟ್ಟಣ ಪಂಚಾಯತಿ ವ್ಯಾಪ್ತಿಯ ಸಮೀಪದ ಕನ್ನಯ್ಯನಹಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕ ದೇವಿ ಜಾತ್ರೆ ಸೋಮವಾರದಿಂದ ಬುಧವಾರದವರೆಗೆ ಅದ್ದೂರಿಯಾಗಿ ಮ್ಯಾಸ ನಾಯಕರ ಬುಡಕಟ್ಟು ಸಂಸ್ಕೃತಿ ಅನಾವರಣಗೊಂಡವು ಜಾತ್ರೆ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆಯಿತು.
ಗ್ರಾಮದ ಮುಖಂಡ ಕೆ ಟಿ ಪ್ರಹ್ಲಾದ್ ಮಾತನಾಡಿ. ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ದುರ್ಗಾಂಬಿಕ ದೇವಿ ಜಾತ್ರೆ ಪ್ರತಿ ವರ್ಷ ಸಂಪ್ರದಾಯದAತೆ ಮಾರ್ಚ್ ತಿಂಗಳಿನಲ್ಲಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ ಎಂದರು.
ಇನ್ನೂ ಪೂಜಾರಿ ಸುರೇಶ್ ಮಾತನಾಡಿ ಪೂರ್ವಜರ ಕಾಲದಿಂದಲೂ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ, ಸಕಲ ರೋಗ ನಿವಾರಣೆಗೆ ಶ್ರೀದೇವಿಯ ಆಶೀರ್ವಾದದಿಂದ ಗ್ರಾಮದ ಜನರಿಗೆ ಸಿಡುಬು ಜ್ವರ ಅಮ್ಮ ಹೀಗೆ ಹಲವು ರೋಗಗಳನ್ನು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ , ಯಜಮಾನ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ,
ಕೆ ಪಿ ನಾಗರಾಜ್, ಕೆ.ಮುತ್ತಯ್ಯ, ಬಸಯ್ಯ, ಡ್ರೈವರ್ ತಿಪ್ಪೇಸ್ವಾಮಿ, ಪಾಲಯ್ಯ ಸೇರಿದಂತೆ ಕನ್ನಯ್ಯನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು.
0 Comments