ಚಳ್ಳಕೆರೆ ಜನಧ್ವನಿ ವಾರ್ತೆ.12. ಅತಿ ವೃಷ್ಠಿ ಅನಾವೃಷ್ಠಿಗೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸಹ ಬರ ಅಧ್ಯಯನ ತಂಡ ಇಣಿಕಿ ನೋಡಿಲ್ಲ ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಾಜಿತ ಜೆಡಿಎಸ್ ಅಭ್ಯರ್ಥಿ ಟಿ.ವೀರಭದ್ರಪ್ಪ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಮೊಳಕಾಲ್ಮೂರು ತಾಲೂಕಿನಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಹಣೆ ಪಟ್ಟಿಕೊಂಡು ಕಳೆದ ಸುಮಾರು 15 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದರೂ ಸಹ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆ ಒಣಗಿ ಹೋಗಿದ್ದರೂ ಸಹ ಬರ ಅಧ್ಯಯನ ತಂಡ ಭೇಟಿ ನೀಡಿಲ್ಲ ಬೆಳೆ ನಷ್ಟವಾಗಿ ಮೂರು ತಿಂಗಳು ಕಳೆದರೂ ಬೆಳೆ ಪರಿಹಾರ .ಬೆಳೆ ವಿಮೆ ಬಿಡುಗಡೆ ಮಾಡಿಲ್ಲ ಬಿಸಿಲ ನಾಡು.ಬಯಲು ಪ್ರದೇಶ. ಬೆಂಗಾಡು ಎಂದು ಹಣೆ ಪಟ್ಟಿಕೊಂಡಿದ್ದರೂ ಸಹ ಬುಡಕಟ್ಟು ಸಂಸ್ಕೃತಿ ಹೊಂದಿದ ಈ ತಾಲೂಕಿನಲ್ಲಿ ದೇವರ ಎತ್ತುಗಳಿವೆ ಹಾಗೂ ರೈತರ ಎತ್ತುಗಳಿಗೆ ಮೆರವಿನ ಕೊರತೆ ಇದೆ ಆದರೂ ಸಹ ಗೋಶಾಲೆ ಪ್ರಾರಂಭಿಸಲು ಮುಂದಾಗಿಲ್ಲ. ಸಿ.ಎಂ. ಕುರ್ಚಿ ಉಳಿಸಿಕೊಳ್ಳಲು ಡಿನ್ನರ್ ಪಾರ್ಟಿಯಲ್ಲಿ ತೊಡಗಿದ್ದಾರೆ ಕೂಡಲೆ ಕಾಂಗ್ರೆಸ್ ಸರಕಾರ ರೈತರ ಸಂಕಷ್ಟಕ್ಕೆ ದಾವಿಸಿ ಗೋಶಾಲೆ. ಬೆಳೆ ಪರಿಹಾರ. ಬೆಳೆ ವಿಮೆಯನ್ನು ರೈತರ ಖಾತೆಗೆ ಬಿಡುಗಡೆ ಮಾಡಿವಂತೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ.ವೀರಭದ್ರಪ್ಪ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ದೀಪಾವಳಿ ಹಾಗೂ ನರಕ ಚತುರ್ದಶಿ ಹಬ್ಬದ ಶುಭಾಷಯ ಕೋರಿದ್ದಾರೆ.
0 Comments