ಹಿರಿಯೂರು :
ಈ ಹಿಂದೆ ಹಾಗೂ ಈಗಲೂ ಸಹ ಕೆಲವೊಂದು ವರ್ಚುಯಲ್ ಯುನಿವರ್ಸಿಟಿಗಳು ಗೌರವ ಡಾಕ್ಟರ್ ಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ, ಪದವಿಗಳಿಗಾಗಿ ಹಂಬಲಿಸುವವರಿಗೆ ಒಂದು ಡಾಕ್ಟರೇಟ್ ಗೆ ಇಷ್ಟು ಹಣ ಎಂದು ಫಿಕ್ಸ್ ಮಾಡಿ ಹಣ ಪಡೆದು ಕೊಡುತ್ತಿದ್ದು, ಇದನ್ನು ಕೆಲವರು ಕೊಂಡುಕೊಂಡು ಹೆಸರಿನ ಮುಂದೆ ಲಗ್ಗತ್ತಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಹೇಳಿದರು.
ಇದು ಇತ್ತೀಚಿಗೆ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲೂ ಸಹ ಕಾಸಿಗಾಗಿಯೂ, ಪ್ರಭಾವಕ್ಕಾಗಿಯೂ, ಮುಂದೆ ಸರ್ಕಾರದ ಉನ್ನತ ಪದವಿಗಳಿಗಾಗಿಯೂ ಕೆಲವೊಂದು ವ್ಯಾಪಾರಿ ಮನೋಭಾವದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜಕಾರಣಿಗಳಿಗೆ, ಧಾರ್ಮಿಕ ನೇತಾರರಿಗೆ, ಸೇವೆಯ ಗಂಧ-ಗಾಳಿ ಗೊತ್ತಿಲ್ಲದ ಜನರನ್ನು ಹಿಂಡಿ ಹಿಪ್ಪೆ ಮಾಡುವ ಜನರಿಗೆ ಗೌರವ ಡಾಕ್ಟರೇಟ್ ಗಳನ್ನು, ರೆಡ್ ಕಾರ್ಪೆಟ್ ಹಾಸಿ ಕೊಡ ಮಾಡುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗಳ ಗೌರವ ಹಾದಿ – ಬೀದಿಯಲ್ಲಿ ಹೀಯಾಳಿಸುವ ಮಟ್ಟಕ್ಕೆ ಬಂದು ನಿಂತಿರುವುದು ಇಂದಿನ ದುರಂತವಾಗಿದೆ.
ಸರ್ಕಾರದ ಪ್ರತಿಷ್ಠಿತ ಸ್ವಯತ್ತ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಹಿಂದೆ ಗೌರವಾನ್ವಿತ ವಿಶ್ವಮಾನ್ಯ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಇಂತಹ ಕರ್ನಾಟಕ ಕಂಡ ಮೇರು ಸಾಹಿತಿಗಳ ಹೆಸರಿಗೆ- ಕೆಸರು ಬಳಿಯುವ ಪ್ರತೀಕವಾಗಿ ಡಾಕ್ಟರೇಟ್ಗಳನ್ನು ಅನರ್ಹರಿಗೆ ಕೊಡುತ್ತಿರುವುದು ಎಷ್ಟು ಸರಿ.
ಈಗಾಗಲೇ ರಾಜ್ಯದ ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರುಗಳು ಸೂಟ್ ಕೇಸ್ ಗಳನ್ನು ಹಿಡಿದುಕೊಂಡು ಸಚಿವರ ಮನೆ ಭಾಗಿಲು ಎಡ ತಾಕುತ್ತಿರುವುದು ಅಲ್ಲದೆ ಪದವಿಗೆ ಇಷ್ಟು ಮತ್ತು ಅನುದಾನಕ್ಕೆ ಇಷ್ಟು ಎಂದು ಲಂಚ – ರುಶುವತ್ತು ಕೊಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಗೌರವ ಡಾಕ್ಟರೇಟ್ ಗಳನ್ನು ಸಹ ಕೊಟ್ಟು ಅದರಿಂದಲೂ ಹಣ ಮಾಡುವ ಹುನ್ನಾರ ಅಥವಾ ಲಾಭ ಮಾಡುವ ಕೆಲಸಗಳಿಗೆ ಈ ಪದವಿಗಳೇ ಬೇಕೆ.? ಬೇಕಾದರೆ ವೃತ್ತಿಗೆ ರಾಜೀನಾಮೆ ಕೊಟ್ಟು ಹೆಚ್ಚು ಹಣ ಮಾಡುವ ದಂದೆ ಮಾಡಲಿ ಅದು ಬಿಟ್ಟು ಉನ್ನತ ಸ್ಥಾನದಲ್ಲಿ ಕುಳಿತು ಈ ರೀತಿ ಮಾಡುವುದರಿಂದ ಸಮಾಜದಲ್ಲಿ ವಿಶ್ವವಿದ್ಯಾನಿಲಯಗಳ ಗೌರವ ಘನತೆ ಕಡಿಮೆಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಹೇಳಿದರು.
ಈ ಸಂದರ್ಭದಲ್ಲಿ ಹುಲಿರಂಗನಾಥ್, ಚಂದ್ರಗಿರಿ, ಶಶಿಕಲಾ, ಕುಬೇರಪ್ಪ, ಪೆಪ್ಸಿ ಹನುಮಂತರಾಯ, ಶಿವಮೂರ್ತಿ, ಪ್ರಕಾಶ್, ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments