*ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಕಾರ್ಯಾಲಯದಲ್ಲಿ ನೂತನ 2024ನೇ ವರ್ಷದ ಕೇಕ್ ಕತ್ತರಿಸುವ ಸಂಭ್ರಮಾಚರಣೆಗೆ ಮೂಲಕ ಚಾಲನೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ.

by | 01/01/24 | ಸುದ್ದಿ

ನಾಯಕನಹಟ್ಟಿ:: ಜ.1.
ನೊಂದವರ ಅಸಹಾಯಕರ ಮತ್ತು ಬಡವರಂತಹ ವರ್ಗದ ಜನರ ಸಮಾಜ ಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ ಉತ್ಕರ್ಷವಾದ ಮನಸ್ಸು ಇರಬೇಕು ಇಂತಹ ಸಮಾಜ ಸೇವೆಗಳು ಮುಂದಿನ ಜನ್ಮದವರೆಗೆ ನಮ್ಮಗಳನ್ನು ಯಶಸ್ಸಿನ ದಾರಿಯಲ್ಲಿ ಕೊಂಡಯುತ್ತವೆ ಎಂದು ನಿಕಟಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು..


ಸೋಮವಾರ ಪಟ್ಟಣದ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದಂತ 2024ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಈ ಸಂಘದ ಮುಖಾಂತರ ಇಂತಹ ಸೇವೆಗಳನ್ನು ಕೈಗೊಳ್ಳಲು ವಿಪು ಲವಾದ ಅವಕಾಶಗಳಿವೆ ಈ ಭಾಗದಲ್ಲಿರುವಂತಹ ಅನೇಕ ಜನರಿಗೆ ನನ್ನ ಉಡುಪು ಶೈಕ್ಷಣಿಕ ಸಾಮಗ್ರಿಗಳು ಅಂಗನವಾಡಿ ಮತ್ತು ಶಾಲಾ ಕೊಠಡಿಗಳ ದುರಸ್ತಿ ಕಾರ್ಯಗಳು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬಹುದು ಇದರ ಮುಖಾಂತರ ಸಮಾಜದ ಋಣವನ್ನು ತೀರಿಸಬಹುದು ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಸಂಘದೊಂದಿಗೆ ಕಾರ್ಯಯೋಜನೆ ರೂಪಿಸಿ ಹೆಜ್ಜೆ ಹಾಕಲಾಗುವುದೆಂದು ಎಂದರು.

ಇದೆ ವೇಳೆ ಎಂ ವೈ ಟಿ ಸ್ವಾಮಿ ಮಾತನಾಡಿ ಈ ಸಂಘವು ಇಂತಹ ಸಮಾಜ ಸೇವೆ ಅಂತ ಕಾರ್ಯಗಳಿಗೆ ಒಂದು ಮುನ್ನುಡಿ ಹಾಕಿಕೊಂಡಿರುವುದು ಸಂತಸದ ವಿಚಾರ ಇಂತಹ ಒಂದು ಹೊಸ ಸಂಪ್ರದಾಯಕ್ಕೆ ಮುಂದಾಗಿರುವುದು ಈ ಭಾಗದ ಹಲವು ಬಡವರು ಮತ್ತು ಅಸಹಾಯಕರಿಗೆ ನೆರವಾಗುತ್ತದೆ ಸಂಘದ ಎಲ್ಲ ಸದಸ್ಯರುಗಳು ಸಮಾಜ ಸೇವೆ ಅಂತ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಹಟ್ಟಿ ಮಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು .ಮಾತನಾಡಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸಂಕಷ್ಟದಲ್ಲಿರುವಂತಹ ಜನಗಳ ಕೈ ಹಿಡಿದು ಆಸರೆ ನೀಡುವಂತಹ ಮಹತ್ವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಈ ನಿಟ್ಟಿನಲ್ಲಿ ನೆರವು ನೀಡುವಂತಹ ಹೆಚ್ಚು ಹೆಚ್ಚು ಅಧಿಕಾರಿಗಳು ಈ ಸಂಘದೊಂದಿಗೆ ಕೈಜೋಡಿಸಿ ಹಿಂದುಳಿದ ಇಂತಹ ತಾಲೂಕುಗಳಲ್ಲಿ ನೊಂದವರ ಧ್ವನಿ ಆಗಬೇಕು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಘುಮೂರ್ತಿ ಅವರು ತಹಸಿದ್ದರಾಗಿ ಸಾಕಷ್ಟು ಇಂತಹ ಕೆಲಸಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಈ ಸಂಘದ ಇಂತಹ ಕಾರ್ಯಗಳ ಜೊತೆ ನೆರವು ನೀಡಿ ಹೆಜ್ಜೆ ಹಾಕಬೇಕೆಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ನಿಕಟಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ, ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು , ಎಂವೈಟಿ ಸ್ವಾಮಿ, ರೇಖಲಗೆರೆ ಚಿನ್ನಯ್ಯ, ಮಲ್ಲೂರಹಳ್ಳಿ ಬಿ ಕಾಟಯ್ಯ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಬೋರ್ ಸ್ವಾಮಿ, ಕರವೇ ಹೋಬಳಿ ಘಟಕ ಅಧ್ಯಕ್ಷ ಪಿ .ಮುತ್ತಯ್ಯ ಜಾಗನೂರಹಟ್ಟಿ, ಮಲ್ಲೂರಹಳ್ಳಿ ಕೆ ಟಿ ನಾಗರಾಜ್, ಗುಂತಕೋಲಮ್ಮನಹಳ್ಳಿ ಜಿ ಎಂ ಜಯಣ್ಣ, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ರೆಕಲಗೆರೆ ಯುವ ಮುಖಂಡ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ಪಿ ತಿಪ್ಪೇಸ್ವಾಮಿ, ರಾಮಸಾಗರ ಸಿ ಎಂ ಪಾಲಯ್ಯ, ಗೌಡ್ರು ಬಸವರಾಜ್ ರಾಮಸಾಗರ, ಇದ್ದರು

Latest News >>

ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮ ಲಿಂಗಯ್ಯನವರ ಆದೇಶದ ಮೇರೆಗೆ ಜಿಲ್ಲಾಪದಾಧಿಕಾರಿಗಳ ಹಾಗೂ ಕಾರ್ಯಕಾರಣಿ ಸಭೆಯ ಉದ್ಘಾಟನೆ ಕಾರ್ಯಕ್ರಮ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಭೀಮ ಸೇನೆ ಸಂಘಟನೆಯನ್ನು ಬಲಪಡಿಸುವ ಮೂಲಕ ಬಡವರಿಗೆ, ನೊಂದವರಿಗೆ, ಶೋಷಿತರಿಗೆ, ಸಮಾಜದ...

ಚಿತ್ರದುರ್ಗ ನಗರದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ನ್ಯಾಯಾಧೀಶರ ಅನಿರೀಕ್ಷಿತ ಭೇಟಿ ಅಂಗನವಾಡಿ ಕೇಂದ್ರದ ಕಟ್ಟಡ, ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ

ಚಿತ್ರದುರ್ಗ ಜುಲೈ24: ಚಿತ್ರದುರ್ಗ ನಗರ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೊಣ...

ಕೆಎಂಆರ್‌ಸಿ ನಿಧಿಯಡಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಗಣಿ ಪ್ರದೇಶದಲ್ಲಿ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸೂಚನೆ -ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ ಜುಲೈ23: ಕೆಎಂಇಆರ್‌ಸಿ(ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ನಿಧಿಯಡಿ ಜಿಲ್ಲೆಯ ಗಣಿ ಬಾಧಿತ ಪ್ರದೇಶದಲ್ಲಿನ ಆರೋಗ್ಯ...

ರೈತರು ಕೃಷಿಯನ್ನ ವ್ಯವಹಾರಿಕವಾಗಿ ಮಾಡಿ ಹೆಚ್ಚಿನ ಆದಾಯ,ಲಾಭಗಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಆಡಳಿತ ಮಂಡಳಿ ಸದಸ್ಯರಾದ ಡಾಪಿ.ಕೆ.ಬಸವರಾಜ್

ಹಿರಿಯೂರು: ರೈತರು ಕೃಷಿಯನ್ನು ವ್ಯವಹಾರಿಕವಾಗಿ ಮಾಡಿ ಹೆಚ್ಚಿನ ಆದಾಯ ಹಾಗೂ ಲಾಭಗಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂಬುದಾಗಿ ಕೆಳದಿ...

ದಕ್ಷಿಣಕಾಶಿ ಖ್ಯಾತಿಯ ಹಿರಿಯೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವೇಗವನ್ನು ನೀಡಲು ಸ್ಮಾರ್ಟ್ ಸಿಟಿ ಸ್ಪರ್ಷ ನೀಡಲಾಗುವುದು:ಉಸ್ತುವಾರಿಸಚಿವರಾದ ಡಿ.ಸುಧಾಕರ್

ಹಿರಿಯೂರು: ದಕ್ಷಿಣಕಾಶಿ ಖ್ಯಾತಿಯ ಹಿರಿಯೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ವೇಗವನ್ನು ನೀಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಸ್ಪರ್ಷ...

ಜಿಲ್ಲಾ ಮಟ್ಟದ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಿಸಿ

ಚಿತ್ರದುರ್ಗ ಜುಲೈ.23: ಜಿಲ್ಲೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಳಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು...

ಜುಲೈ 27 ಕ್ಕೆ ಬಯಲುಸೀಮೆ ಮಲೆನಾಡು ಕರಾವಳಿ ಕುಂಚಿಟಿಗರ ಏಕೀಕರಣ ಪ್ರವಾಸ

ಹಿರಿಯೂರಯ ಜು.22 ದಕ್ಷಿಣ ಭಾರತದಲ್ಲಿ ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಮುಂದುವರಿದ ಭಾಗವಾಗಿ ಬಯಲುಸೀಮೆ ಮಲೆನಾಡು ಕರಾವಳಿ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬಾಲ ಗರ್ಭಿಣಿ ಪ್ರಕರಣ : ಎಂ.ಎಲ್.ಸಿ ಹಾಗೂ ಎಫ್.ಐ.ಆರ್ ಕೈಗೊಳ್ಳಲು ಸೂಚನೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಚಿತ್ರದುರ್ಗ ಜು 22: ಆಸ್ಪತ್ರೆಗಳಲ್ಲಿ ಬಾಲ ಗರ್ಭಿಣಿ ಪ್ರಕರಣ ಪತ್ರೆಯಾದ ತಕ್ಷಣವೇ ಎಂ.ಎಲ್.ಸಿ (ಮೆಡಿಕೋ ಲೀಗಲ್ ಕೇಸ್) ಮಾಡಿ ಎಫ್.ಐ.ಆರ್....

ತಾಲ್ಲೂಕಿನ ಹಾಲಮಾದೇನಹಳ್ಳಿಯಲ್ಲಿ ವಿದ್ಯುತ್ಅವಗಡ ದುರಸ್ತಿವೇಳೆ ಲೈನ್ ಮ್ಯಾನ್ ಶ್ರೀಶೈಲಾ ಸ್ಥಿತಿಗಂಭೀರ

ಹಿರಿಯೂರು: ತಾಲ್ಲೂಕಿನ ಹಾಲಮಾದೇನಹಳ್ಳಿಯಲ್ಲಿ ವಿದ್ಯುತ್ ದುರಸ್ತಿವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ಇಲಾಖೆಯ ಶ್ರೀಶೈಲ ಎನ್ನುವ ಲೈನ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page