ಚಳ್ಳಕೆರೆ ಮೇ 16 ನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಚಳಕರೆಮ್ಮ ಸಾರ್ವಜನಿಕ ದೇವಸ್ಥಾನಗಳಲ್ಲಿ ದುರಾಡಳಿತ ಹಾಗೂ ಹಣದ ದುರುಪಯೋಗ ವಾಗುತ್ತಿರುವ ಕಾರಣ ಈ ಎರಡು ದೇವಸ್ಥಾನವನ್ನು ಕೂಡಲೆ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಪಡೆಯುವಂತೆ ಎಂ.ಎಸ್. ಬಸವರಾಜು ಜಿಲ್ಲಾಧಿಕಾರಿಗಳಿಗೆ ದೂರುಸಲ್ಲಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಸಭೆ ನಡೆಸಿ ಆರೋಪಕ್ಕೆ ಸುಖಾಂತ್ಯ ಕಂಡಿದೆ.
ಚಳ್ಳಕೆರೆ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ವರದಿ ನೀಡಲು ಎರಡು ಬಣದವರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ
ನಗರದ ಆರಾಧ್ಯದೇವ ಶ್ರೀ ವೀರಭದ್ರಸ್ವಾಮಿ ದೇವಾಲಯ ಹಾಗೂ ಶ್ರೀಚಳ್ಳಕೆರೆಮ್ಮ ದೇವಿ ದೇವಾಲಯದ ಎರಡು ದೇವಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ದೇವರ ಆರಾಧನೆ ನಡೆಯುತ್ತಿಲ್ಲ ಆದ್ದರಿಂದ ಮುಜುರಾಯಿ ಇಲಾಖೆಗೆ ಸೇರಿಸಬೇಕು ಎಂಬ ವರದಿ ಮೇರೆಗೆ ಚಳ್ಳಕೆರೆ ತಾಲೂಕು ಕಂದಾಯ ಅಧಿಕಾರಿಗಳು ತಂಡ ದೇವಾಸ್ಥಾನಕ್ಕೆ ಸಂಬಂಧಿಸಿದ ಪದಾಧಿಕಾರಗಳ ಸಮಕ್ಷಮದಲ್ಲಿ ಸಭೆ ನಡೆಸಿದ್ದಾರೆ.
ಇನ್ನೂ ಸಭೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವರುಗಳ ದೇವಾಲಯ ಹೊರತು ಪಡಿಸಿದರೆ ಬೇರೆ ಯಾವುದೇ ಮೂಲ ಆದಾಯ ಇಲ್ಲ ಇನ್ನೂ ಭಕ್ತರು ನೀಡಿದ ಅಲ್ಪ ಕಾಣಿಕೆ ಸಂದಾಯವಾಗುತ್ತಿದೆ, ಇದರಿಂದ ದೇವರ ಪೂಜಾ ಕೈಂಕಾರ್ಯಗಳು ಜರುಗುತ್ತಿವೆ, ಇದರಿಂದ ಮುಜರಾಯಿ ಇಲಾಖೆಗೆ ಒಳಪಡುವ ಯಾವುದೇ ಆಸ್ತಿ ಪಾಸ್ತಿ ಈ ದೇವಾಲಯಗಳಿಗೆ ಇಲ್ಲದೆ ಇರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ, ಇನ್ನೂ ಪೂರ್ವಿಕರು ಯಾವ ರೀತಿಯಲ್ಲಿ ವಿಧಿ ವಿಧಾನ ಪದ್ದತಿಗಳನ್ನು ಅನುಸರಿಸಿಕೊಂಡು ದೇವಿಗಳ ಆರಾಧಕರು ಹಾಗಿದ್ದರು, ಆದೇ ರೀತಿಯಲ್ಲಿ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲಾಗುವುದು ಹಾಗೂ ಈಗೀರುವ ಕೇವಲ “ಕಮಿಟಿ” ಬದಲಾಗಿ ‘ಟ್ರಸ್ಟ್” ಮಾಡಿಸಿಕೊಂಡು ಮುಂದುವರೆಸಲಾಗುವುದು ಎಂದು ಕಂದಾಯ ಅಧಿಕಾರಿಗಳಿಗೆ ಎರಡು ಬಣದವರು ಒಪ್ಪಿಕೊಂಡಿದ್ದಾರೆ.
ಪಟ್ಟದ ಐನೋರು ಬಸವರಾಜ್. ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಇರುವ ಗುರುಪರಂಪರೆಯ ದೇವಾಲಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನ ಸೇಳೆದಿದ್ದೆ ಆದ್ದರಿಂದ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಮಾಹಿತಿ ಪಡೆಯಲು ಬಂದಿದ್ದರು, ಎರಡು ಬಣಗಳ ಸಮಕ್ಷಮದಲ್ಲಿ ಸಭೆ ನಡೆಸಿ ಅಂತಿಮವಾಗಿ ಈಗಿರುವ ಎರಡು ದೇವಾಲಯಗಳ ಕಮಿಟಿ ಬೇಡ ಅದರ ಬದಲಾಗಿ ಟ್ರಸ್ಟ್ ಮಾಡಿಸಿಕೊಂಡರೆ ಅಧಿಕೃತವಾಗುತ್ತದೆ, ಎಂದು ಕಂದಾಯ ಅಧಿಕಾರಿಗಳ ಗಮನ ಸೇಳೆದಿದ್ದೆವೆ ಎಂದು ತಿಳಿಸಿದ್ದಾರೆ.
ಧರ್ಮಧಶಿಗಳಾದ ಪಿಜಿ.ರಾಮಣ್ಣ, ಪಿ.ತಿಪ್ಪೆಸ್ವಾಮಿ ತಳವಾರ ಮುಖ್ಯಸ್ಥರು. ಮಾತನಾಡಿ ಪೂರ್ವಿಕರು ಆರಾಧನೆ ಮಾಡಿಕೊಂಡ ಪುರಾತನ ಈ ದೇವರುಗಳ ದೇವಾಲಯಕ್ಕೆ ಸಂಬಂಧಿಸಿದಂತೆ ದೇವಾಲಯ ಬಿಟ್ಟರೆ ಯಾವುದೇ ಆದಾಯ ಬರುವ ಆಸ್ತಿಗಳು ಇಲ್ಲ, ಆದ್ದರಿಂದ ಗ್ರಾಮದಲ್ಲಿ ಒಪ್ಪಿ ಟ್ರಸ್ಟ್ ಮಾಡಿಸಲು ಒಪ್ಪಿಗೆ ಸಹಿ ಮಾಡಲಾಗಿದೆ, ಈಗೀರುವ ಎಲ್ಲಾ ಬಾಬ್ತುದಾರರು ಯಥಾ ಪ್ರಕಾರ ಸಂಪ್ರದಾಯ ಮುಂದುವರೆಸಲಾಗುವುದು.–
ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರ ಪಿ.ಲಿಗೇಗೌಡ, ಗ್ರಾಮ ಲೆಕಕ್ಕಾಧಿಕಾರಿ ಪ್ರಕಾಶ್, ಧರ್ಮಧಶಿಗಳಾದ ಪಿಜಿ.ರಾಮಣ್ಣ. ಪಿ.ತಿಪ್ಪೆಸ್ವಾಮಿ, ದಳವಾಯಿಮೂರ್ತಿ, ನಾಗರಾಜ್, ಗೌಡ್ರುನಾಗಣ್ಣ, ಮಂಜಣ್ಣ, ಸೂರಯ್ಯ, ಚಿಕ್ಕಣ್ಣ, ರುದ್ರಣ್ಣ, ಬಸವರಾಜ್, ಹೆಚ್.ಮಂಜಣ್ಣ, ವಿ.ತಿಪ್ಪೆಸ್ವಾಮಿ. ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments