ನಾಯಕನಹಟ್ಟಿ:: ಮತ್ತೊಮ್ಮೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲು 140 ಕೋಟಿ ಮತದಾರರು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ್ ಎಂ.ಕಾರಜೋಳ ಹೇಳಿದ್ದಾರೆ.
ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶನಿವಾರ ಬಿಜೆಪಿ ನಾಯಕನಹಟ್ಟಿ ಮಂಡಲ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಈ ದೇಶವನ್ನು ಹಾಳಿದೆ ದೇಶದ ಜನರ ಭಾವನಾತ್ಮಕ ವಿಷಯಗಳು ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ನಿರಂತರವಾಗಿ ಎಲ್ಲಾ ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ರಾಜಕಾರಣವನ್ನು ನಿರ್ಮಿಸಿಕೊಂಡಿದೆ. ಭಾರತೀಯ ಜನತಾ ಪಕ್ಷ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತದೆ. ಈ ದೇಶವನ್ನು ಹಾವಾಡಿಗರ ದೇಶ ಎಂಬ ಹಣೆ ಪಟ್ಟಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕಳೆದ ಹತ್ತು ವರ್ಷಗಳಿಂದ ಇಡೀ ಭಾರತ ದೇಶವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ವಿಶ್ವದ ನಾನಾ ರಾಷ್ಟ್ರಗಳು ಇಂದು ಭಾರತಕ್ಕೆ ಸ್ವಾಗತ ಕೋರುತ್ತಿವೆ. ಇದು ಬಿಜೆಪಿಯ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದವರು ಈ ಸತ್ಯವಲ್ಲ ಅರಿತುಕೊಳ್ಳಬೇಕು.
ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ ಬದಲಿಗೆ ಎ. ನಾರಾಯಣಸ್ವಾಮಿ ರವರಿಗೆ ಟಿಕೆಟ್ ನೀಡುವಂತೆ ಶಿಫಾರಸ್ ಮಾಡಿದ್ದೆ ಆದರೆ ಅವರು ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಲು ಒಲವು ತೋರಿಸಿದ್ದರಿಂದ ಪಕ್ಷ ನನಗೆ ಟಿಕೆಟ್ ನೀಡಿದೆ ಎಂದರು.
ಚಿತ್ರದುರ್ಗ ಬಿಜೆಪಿ ಘಟಕದ ಅಧ್ಯಕ್ಷ ಎ. ಮುರಳಿ, ಪದಾಧಿಕಾರಿಗಳಾದ ಜೆ ಪಿ ಜಯಪಾಲಯ್ಯ, ರಾಮದಾಸ್, ಜಿ ಟಿ ಸುರೇಶ್, ಸಂಪತ್ ಕುಮಾರ್, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ಪಿ ಶಿವಣ್ಣ, ಎಸ್ ಟಿ ಬೋರ್ ಸ್ವಾಮಿ, ಗಿಡ್ಡಪುರ ಬಿ ಶಾರದಮ್ಮ, ಚಳ್ಳಕೆರೆ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್,ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಮುಖಂಡರಾದ. ಟಿ ರೇವಣ್ಣ, ಬಿ ತಿಪ್ಪೇಸ್ವಾಮಿ, ಮಂಡಲ, ಪ್ರಧಾನ ಕಾರ್ಯದರ್ಶಿ ಎಚ್ ಪಿ ಪ್ರಕಾಶ್, ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಡಿ ಓ ಮುರಾರ್ಜಿ, ಮಲ್ಲೂರಹಳ್ಳಿ ಮಲ್ಲಯ್ಯ, ಓಬಣ್ಣ, ಗುಂತಕೋಲಮ್ಮನಹಳ್ಳಿ ಎನ್ ತಿಪ್ಪೇಸ್ವಾಮಿ ಜೆಸಿಬಿ, ಅಬ್ಬೇನಹಳ್ಳಿ ಎಂ ಎಸ್ ಶಿವಪ್ರಕಾಶ್, ಮಲೇಬೋರಯ್ಯನಹಟ್ಟಿ ಬಿ. ಶಂಕರಸ್ವಾಮಿ, ತೊರೆಕೊಲಮ್ಮನಹಳ್ಳಿ, ಮಂಜಣ್ಣ, ತಾರಕೇಶ್ , ಗುಂತಕೂಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ಇದ್ದರು
0 Comments