ನಾಯಕನಹಟ್ಟಿ::ಜ.3. ಸಮೀಪದ ಮಲ್ಲೂರಹಳ್ಳಿ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ವಿಚಾರದಲ್ಲಿ ಉತ್ಕೃಷ್ಟವಾದ ಮನ್ನಣೆ ಇದೆ ಹಾಗಾಗಿ ಗ್ರಾಮದಲ್ಲಿ ಸಾಮರಸ್ಯ ಮತ್ತು ಶಾಂತಿ, ಮನೆ ಮಾಡಿದೆ . ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಹೇಳಿದ್ದಾರೆ.
ಬುಧವಾರ ಮಲ್ಲೂರಹಳ್ಳಿ ಗ್ರಾಮದಲ್ಲಿ ಕಾರ್ತಿಕೋತ್ಸವ ಪ್ರಯುಕ್ತ ಶ್ರೀ ಕೊಲ್ಲಾಪುರದಮ್ಮ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಮಲ್ಲೂರಹಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀ ಕೊಲ್ಲಾಪುರದಮ್ಮ ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಕೊಲ್ಲಾಪುರದಮ್ಮ ದೇವಿ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ ಶ್ರೀದೇವಿಯ ಆಶೀರ್ವಾದ ಗ್ರಾಮದ ಮೇಲೆ ಸದಾ ಕಾಲ ಇರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ, ಮಂಡಲ ಕಾರ್ಯದರ್ಶಿ ಎಚ್. ವಿ. ಪ್ರಕಾಶ್ ರೆಡ್ಡಿ, ಗುತ್ತಿಗೆದಾರ ಡಿ ಎಚ್ ಮಲ್ಲಯ್ಯ, ಕರಿಯಣ್ಣ, ತಮ್ಮಯ್ಯ, ಇದ್ದರು
0 Comments