ಪಾವಗಡ ಏ.11 ಬರದ ತೀವ್ರತೆ ಎಷ್ಟಿದೆ ಅಂದರೆ, ರೈತಾಪಿಗಳು ದನಕರುಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುವಂತಾಗಿದೆ.
ಹೌದು ಇದು ಪಾವಗಡ ನಗರದ ಹೊರವಲಯದ ರಾಮಕೃಷ್ಣಾಶ್ರಮದಲ್ಲಿಜಾನುವಾರುಗಳಿಗೆ ಉಚಿತ ಮೇವಿಗಾಗಿ ಮೇವು ಬ್ಯಾಂಕ್ ಬಳಿ ರೈತರು ಮೇವು ಪಡೆಯಲು ಬಿಸಿಲು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಉಚಿತ ಮೇವು ಪಡೆಯುತ್ತಿದ್ದಾರೆ. ಮೇವು ಪಡೆಯಲು ಬಂದ ರೈತರಿಗೆ ನೆರಳು.ನೀರು. ಐಸ್ಕ್ರೀಂಗನ್ನು ಆಶ್ರಮದಿಂದ ಉಚಿತವಾಗಿ ನೀಡಲಾಗುತ್ತಿದೆ.
ಪಾವಗಡ.ಚಳ್ಳಕೆರೆ.ಮೊಳಕಾಲ್ಮೂರು ತಾಲೂಕುಗಳಲ್ಲಿ ದೇವರ ಎತ್ತುಗಳ ಸಂಖ್ಯೆ ಹೆಚ್ಚಾಗಿದ್ದು ಈ ಬಾರಿ ಹಿಂಗಾರು .ಮುಂಗಾರು ಮಳೆ ಬಾರದೆ ಅಂತರ್ಜಲ ಮಟ್ಟ ಕುಸಿದಿದ್ದು ಜನ ಜಾನುವಾರುಗಳಿಗೆ ನೀರು ಮೇವಿನ ಕೊರತೆ ಎದುರಾಗಿದ್ದುರೈತರು . ಕಿಲಾರಿಗಳು ಜಾನುವಾರುಗಳನ್ನು ಉಳಿಸಿಕೊಳ್ಳಲು ಮೇವಿಗಾಗಿ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಶ್ರೀರಾಮಕೃಷ್ಣಾಶ್ರಮ. ಸುಧಾಮೂರ್ತಿಯವ ಸಹಯೋಗದೊಂದಿಗೆ ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಮಾಡುವ ಮೂಲಕ ಗೋ ಸಂತತಿ ಪಾಲನೆ ಪೋಷಣೆ ಮಾಡಲು ಮುಂದಾಗಿದ್ದಾರೆ. ಇಂದು ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಕರ್ನಾಟಕ ರಾಜ್ಯದಲ್ಲಿಯೇ ಯಶಸ್ವಿಯಾಗಿ ನಡೆಯುತ್ತಿರುವ ಏಕೈಕ ಉಚಿತ ಮೆವು ವಿತರಣಾ ಕೇಂದ್ರದಲ್ಲಿ ಕಂಡುಬಂದ ದೃಶ್ಯ. ಭಯಂಕರ ತಾಪಮಾನದಲ್ಲಿಯೂ ತಮ್ಮ ತಮ್ಮ ಗೋವುಗಳನ್ನು ರಕ್ಷಿಸಿಕೊಳ್ಳಲು ಮೇವನ್ನು ಉಚಿತವಾಗಿ ಕೊಂಡೋಯುತ್ತಿರುವ ದೃಶ್ಯ!
ಪೂಜ್ಯ ಸ್ವಾಮಿ ಜಪಾನಂದಜಿ ರವರು ಈ ಸಂಧರ್ಭದಲ್ಲಿ ಉಚಿತ ಮಜ್ಜಿಗೆ, ಸಿಹಿ ಹಾಗೂ ಮಧ್ಯಾನ್ಹದ 40° ಉಷ್ಣ ದ ಬೇಗೆಯಲ್ಲಿ, ಉರಿಯಲ್ಲಿ ಬಸವಳಿದ ಜನರಿಗೆ ಶುದ್ಧ ಕುಡಿಯುವ ನೀರು, ಐಸ್ಕ್ರೀಂ ಮತ್ತು ಮಜ್ಜಿಗೆಯನ್ನು ಕಾಲ ಕಾಲಕ್ಕೆ ರೈತಾಪಿ ಜನರಿಗೆ ವಿತರಿಸುತ್ತಿರುವುದು ಕಂಡುಬರುತ್ತಿತ್ತು. ಈ ಸೇವಾಯಜ್ಞ ನಿಜಕ್ಕೂ ಅಸಂಖ್ಯಾತ ಜನರಿಗೆ ಸಹಕಾರವಾಯಿತು ಎನ್ನಬಹುದು.ಪ್ರತಿ ದಿನ ಬೆಳೆಗ್ಗೆಯಿಂದ ಸಂಜೆಯವರೆವಿಗೂ ಈ ಕಾರ್ಯ ನೆರವೇರುತ್ತದೆ. ಇದೇ ಅಲ್ಲವೇ ಸ್ವಾಮಿ ವಿವೇಕಾನಂದಜಿ ರವರು ಬಯಸಿದ “ನಿಷ್ಕಾಮ ಕರ್ಮ ಯೋಗ “.” ಜೀವನಲಿ ಶಿವನ ಸೇವೆ “……..ಎನ್ನುತ್ತಾರೆ ಸಂತ ಜಪಾನಂದಸ್ವಾಮೀಜಿಯವರು.
0 Comments