ಚಳ್ಳಕೆರೆ ಜನಧ್ವನಿ ವಾರ್ತೆ ಫೆ.27
ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ರಥದ ಗಾಲಿ ಪೂಜೆ ಹಾಗೂ ಗುಗ್ಗರಿ ಹಬ್ಬಕ್ಕೆ ಸೋಮವಾರ ಸಂಭದ್ರಮದಿAದ ಆರಾದ್ಯ ದೈವ ಗುರುತಿಪ್ಪೇರುದ್ರಸ್ವಾಮಿಯ ಹೊರಮಠದಲ್ಲಿ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಮಾರ್ಚ್ ೧೦ ರಂದು ಮಧ್ಯಹ್ನಾ ೩ ಗಂಟೆಗೆ ನಡೆಯಲಿರುವ ದೊಡ್ಡ ರಥೋತ್ಸವ ಅಂಗವಾಗಿ ಜಾತ್ರೆಯ ಮೊದಲು ಕಾರ್ಯಘಕ್ರಮಕೆಕ ಚಾಲನೆ ನೀಡಲಾಯಿತು.
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀಗುರು ತಿಪ್ಪೇಸ್ವಾಮಿ ಜಾತ್ರೆಗೆ ಲಕ್ಷಾಂತರ ಭಕ್ತರ ದೈವವಾಗಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಹೊರಮಠ ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಪಶುಪಾಲಕ ಮತ್ತು ಬೇಸಾಯಗಾರರ ನೆಲಮೂಲ ಸಂಸ್ಕೃತಿಯ ನೆಲೆಯಲ್ಲಿ ಕಂಡು ಬರುತ್ತವೆ. ಅಂಥಹ ಆಚರಣೆಗಳಲ್ಲಿ ಪ್ರಮುಖವಾದದ್ದು ಗುಗ್ಗರಿ ಹಬ್ಬ.
ಗುಗ್ಗರಿ ಹಬ್ಬದ ವಿಶೇಷ
ವಾರ್ಷಿಕ ಜಾತ್ರೆ ಆಚರಣೆಗೆ ಸಾಕ್ಷಿಯಾಗಿ ಕಂಕಣ ಪೂಜೆಯ ಮೊದಲು ಬರುವ ಸೋಮವಾರದಂದು ಗುಗ್ಗರಿ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಪಟ್ಟಣದ ಹೊರಮಠ ಮತ್ತು ಒಳಮಠದ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಕೈಗೊಂಡು ರೈತರು ಬೆಳೆದ ಹೊಸ ಹುರುಳಿ ಧಾನ್ಯವನ್ನು ಮೊದಲು ದೇವರಿಗೆ ಅರ್ಪಿಸುವುದು ವಾಡಿಕೆ. ಜತೆಗೆ ಸಮೀಪದ ಹಳ್ಳಿಗಳಲ್ಲಿ ನೆಲೆಸಿರುವ ಮ್ಯಾಸಮಂಡಲದ ಪ್ರತೀಕವಾದ ದೇವರೆತ್ತುಗಳ ಸಗಣಿ ಬೆರಣಿ (ಕುರುಳಿ)ನಿಂದ ಹುರುಳಿ ಧಾನ್ಯವನ್ನು ಬೇಯಿಸಲಾಗುವುದು. ಹಾಗೂ ಸುಟ್ಟ ಕುರುಳಿನ ಭಷ್ಮವನ್ನು ಹೊರಮಠದಲ್ಲಿ ವಿಭೂತಿಯಾಗಿ ವರ್ಷಪೂರ್ತಿ ಬಳಸುತ್ತಾರೆ. ಮತ್ತು ಬೇಯುಸಿದ ಹುರುಳಿ ಗುಗ್ಗರಿಯನ್ನು ಸಂಜೆ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾಧವಾಗಿ ಹಂಚಲಾಗುವುದು. ಆ ಮೂಲಕ ಸುಗ್ಗಿಯ ಹಬ್ಬವಾಗಿ ಬಿಂಬಿತವಾಗುವ ಗುಗ್ಗರಿ ಹಬ್ಬವು ಆಹಾರ ಪದ್ಧತಿಯಲ್ಲಿ ಸಮಾನತೆಯನ್ನು ತರುವುದಾಗಿದೆ.
ಒಳಮಠ ಹಾಗೂ ಹೊರಮಠದಲ್ಲಿ ಗುಗ್ಗರಿ ಸ್ವೀಕರಿದ ಭಕ್ತರು
ಪ್ರತಿ ಸೋಮವಾರ ಗುರುತಿಪ್ಪೇರುದ್ರಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಪೂಜಾ ಕೈಂಕರ್ಯ ಸೇವೆಗಾಗಿ ಹೊರಮಠಕ್ಕೆ ಕರೆತರಲಾಗುವುದು. ದೇವಾಲಯದಲ್ಲಿ ವಿಶೇ? ಪೂಜೆ ಹಾಗೂ ಮಂಗಳಾರತಿ ನಂತರ ನೆರೆದ ಭಕ್ತರಿಗೆ ಗುಗ್ಗರಿಯನ್ನು ಪ್ರಸಾಧವಾಗಿ ನೀಡುವ ಪರಿಪಾಠವಿದೆ. ಹಾಗೇ ಇಂದು ದೇವಾಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಗ್ಗರಿ ಪ್ರಸಾಧ ಪಡೆದು ಬೆಲ್ಲದ ಜತೆಗೆ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ದೇವಾಸ್ಥನದ ಕಮಿಟಿಯವರು. ಪಟ್ಟಣಪಂಚಾಯತ್ ಸದಸ್ಯರು, ,ಅರ್ಚಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments