ಚಳ್ಳಕೆರೆ ಜನಧ್ವನಿವಾರ್ತೆ ಮಾ.8
ಮಧ್ಯಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ಮೊತ್ತದ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವಾರ್ಷಿಕ ಜಾತ್ರೆ ನಿಮಿತ್ತ ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ವಿಮಾ ಕಂಪನಿಯ ಅಧಿಕಾರಿಗಳಿಂದ ವಿಮಾ ಪ್ರಮಾಣ ಪತ್ರವನ್ನು ಪಡೆದುಕೊಂಡು ಅವರು ಮಾತನಡಿದರು.
ಮಧ್ಯಕರ್ನಾಟಕದಲ್ಲಿ ಅತೀ ಎತ್ತರದ ರಥ ಎಂಬ ಹೆಗ್ಗಳಿಕೆ ಪಡೆದಿರುವ ಗುರುತಿಪ್ಪೇರುದ್ರಸ್ವಾಮಿ ರಥವನ್ನು ಬೆಲೆಬಾಳುವ ಮರದಿಂದ ನಿರ್ಮಿಸಲಾಗಿದೆ. ಹಾಗೂ ಪ್ರತಿವರ್ಷವೂ ರಥದವನ್ನು ಸಂಪೂರ್ಣವಾಗಿ ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಥದ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ನೀಡಿದ ನಂತರ ರಥೋತ್ಸವಕ್ಕೆ ಸಿದ್ಧಗೊಳಿಸಲಾಗುವುದು. ರಥೋತ್ಸವ ವೇಳೆ ಹಾಗೂ ದಿನನಿತ್ಯ ರಥಕ್ಕೆ ಸಾಕಷ್ಟು ಸುರಕ್ಷತೆ ಒದಗಿಸಲಾಗುತ್ತಿದೆ. ಹೀಗಿದ್ದರೂ ಯಾವುದಾದರೂ ನೈಸರ್ಗಿಕ ಅವಘಡಗಳ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ. ಜಾತ್ರೆಗೆ ಈಗಾಗಲೆ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮಾರ್ಚ್ ೧೦ರಂದು ಮಹಾರಥೋತ್ಸವ ನಡೆಯಲಿದೆ ಎಂದರು.
ಚಿತ್ರದುರ್ಗದ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿಯ ವ್ಯವಸ್ಥಾಪಕ ಎ.ಎಂ.ಶೇಖರಯ್ಯ ಮಾತನಾಡಿ, “ಸತತ ನಾಲ್ಕನೇ ವರ್ಷವೂ ರಥಕ್ಕೆ ವಿಮೆ ನೀಡಲಾಗುತ್ತಿದ್ದು, ಸದರಿ ವರ್ಷ ರಥಕ್ಕೆ ವರ್ಷದ ಎಲ್ಲ ದಿನಗಳಲ್ಲಿ ಮಳೆ, ಗಾಳಿ, ಬೆಂಕಿ ಸೇರಿದಂತೆ ನೈಸರ್ಗಿಕ ಹಾನಿಗಳಿಂದ ಸಂಭವಿಸಬಹುದಾದ ಅವಘಡಗಳಿಗೆ ರೂ.೨.೫ಕೋಟಿ ವಿಮೆ ನೀಡಲಾಗಿದೆ. ಜತೆಗೆ ಜಾತ್ರೆಗಾಗಿ ರಥವನ್ನು ಕಟ್ಟುವ, ಜಾತ್ರೆಯ ದಿನದಂದು ರಥವನ್ನು ಚಲಾಯಿಸುವ ಸಾಂಪ್ರದಾಯಿಕ ಕುಲಕಸುಬುಗಳ ಬಾಬುದಾರರ ಹೆಸರಿರುವ ಒಟ್ಟು ೮೫ಜನರಿಗೆ ರೂ.೨ಲಕ್ಷ, ಮತ್ತು ರಥೋತ್ಸವದಲ್ಲಿ ಭಾಗವಹಿಸುವ ೨೫ಜನ ಅನಾಮಿಕ ಭಕ್ತರಿಗೆ ತಲಾ ರೂ.೧ ಲಕ್ಷ ವಿಮೆ ಒದಗಿಸಲಾಗುವುದು. ವಿಮೆಗಾಗಿ ದೇವಾಲಯದಿಂದ ರೂ.೫೨,೩೬೪ ಮೊತ್ತವನ್ನು ವಿಮಾಕಂಪನಿಯು ಪಡೆದುಕೊಂಡು ಪ್ರಮಾಣಪತ್ರ ನೀಡಲಾಗಿದೆ” ಎಂದರು.
ಧಾರ್ಮಿಕ ದತ್ತಿ ಇಲಾಖೆ ಮುಜುರಾಯಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್, ವಕೀಲ ಬಿ.ಎಂ.ಅರುಣ್ಕುಮಾರ್ ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments