ಚಳ್ಳಕೆರೆ:: ಬಾಲ್ಯ ದಿಂದಲೇ ಅವಮಾನ ಕೀಳಿರಿಮಯಿಂದ ಶೋಷಿತ ಸಮಾಜಕ್ಕೆ ಗಟ್ಟಿಯಾಗಿ ನಿಂತವರು ಡಾ ಬಿ ಆರ್ ಅಂಬೇಡ್ಕರ್ ಅವರು ಎಂದು ಹಿರಿಯ ಹೋರಾಟಗಾರ ಶ್ರೀಧರ್ ಕಲಿವೀರ್ ಹೇಳಿದ್ದಾರೆ.
ನಗರದ ಬಿಇಓ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ಚಿತ್ರದುರ್ಗ ಮತ್ತು ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಪರಿನಿಬ್ಬಾಣ ಅಂಗವಾಗಿ ಸಂವಿಧಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಹಾಕಿ ಕೊಟ್ಟಂತಹ ಸಂವಿಧಾನ ಮತ್ತು ತತ್ವ ಸಿದ್ಧಾಂತಗಳು ಕೇವಲ ಒಂದು ದೇಶಕ್ಕೆ ಸೀಮಿತವಾಗದೆ ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಡಾಕ್ಟರ್ ಬಿ ಅಂಬೇಡ್ಕರ್ ನಮ್ಮ ದೇಶ ಕಂಡ ಮಹಾನ್ ಸಾಮಾಜಿಕ ಪರಿವರ್ತಕ ಆರ್ಥಿಕ ಶಾಸ್ತ್ರಜ್ಞರಾಗಿದ್ದು ಅವರು ರಚಿಸಿದಂತಹ ಸಂವಿಧಾನದಿಂದ ರಾಜಕೀಯ ಸಾಮಾಜಿಕ ಸ್ವಾತಂತ್ರ್ಯ ಹೊಂದಲು ಸಾಧ್ಯವಾಗಿದೆ ಎಂದರು,
ಇದೆ ವೇಳೆ ಜಿಲ್ಲಾ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್ ಮಾತನಾಡಿ ಅಜ್ಞಾನದ ಕತ್ತಲೆ ತುಂಬಿದ ಜಗತ್ತಿಗೆ ಬೆಳಕು ಚೆಲ್ಲಿದ ಮಹಾ ಚಿಂತಕ ಬಾಬಾ ಸಾಹೇಬ್ ಡಾ. ಬಿ .ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ ಎಂದರು.
ಇನ್ನೂಜಿಲ್ಲಾ ಕಲಾಮಂಡಳಿಯ ಸಂಚಾಲಕ ನಲಗೇತನಹಟ್ಟಿ ಕೆ ಟಿ ಮುತ್ತುರಾಜ್ ಮಾತನಾಡಿ ಭವಿಷ್ಯದ ಬದುಕಿಗೆ ಪವಿತ್ರ ಗ್ರಂಥವಾದ ಸಂವಿಧಾನ ಸಾರವನ್ನು ತಿಳಿಯಬೇಕಾದರೆ ಮೊದಲು ಅಂಬೇಡ್ಕರ್ ಅವರನ್ನು ಬೆಳಕಿಗೆ ತರಬೇಕಿದೆ ಪ್ರತಿಯೊಂದು ಮನೆಯಲ್ಲಿ ಪ್ರಜ್ವಲಿಸಬೇಕಿದ್ದ ಅಂಬೇಡ್ಕರ್ ಅವರನ್ನು ಜಾತಿ ಸಂಕೋಲೆಯಲ್ಲಿ ಬಂಧಿಸುವುದು ಸಮಾಜಸವಲ್ಲ ಜಾತ್ಯತೀತ ಮನಸ್ಸಿನಿಂದ ಅವರನ್ನು ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಸರ್ವಧರ್ಮ ಶಾಂತಿ ಪೀಠದ ಶ್ರೀ ರಾಮಮೂರ್ತಿ ಸ್ವಾಮೀಜಿ, ಜಿಲ್ಲಾ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್, ರಾಜ್ಯ ಪ್ರಧಾನ ಸಂಚಾಲಕ ಎಂ ಗೋವಿಂದರಾಜು, ಜಿಲ್ಲಾ ಕಲಾ ಮಂಡಳಿ ಸಂಚಾಲಕ ನಲಗೇತನಹಟ್ಟಿ ಗಾಯಕ ಕೆ ಟಿ ಮುತ್ತುರಾಜ್, ಚಳ್ಳಕೆರೆ ಶಿವಮೂರ್ತಿ, ಪೆನ್ನೇಶ್, ಶಾಂತಮ್ಮ, ಪ್ರಧಾನ ಸಂಚಾಲಕ ಟಿ ಗೋವಿಂದಪ್ಪ, ಪ್ರದೀಪ್, ಇಂದಿರಮ್ಮ, ಜೆ ಮಂಜುನಾಥ್, ಓ ಬಸವರಾಜ್, ಡಿ. ರುದ್ರಮುನಿ ,ಸಂಘಟನಾ ಸಂಚಾಲಕ ದ್ಯಾವರನಹಳ್ಳಿ ಸುರೇಶ್, ಜೋಗಿ ತಿಪ್ಪೇಸ್ವಾಮಿ, ಕಲಾವಿದ ರಾಜಣ್ಣ, ತಾಲೂಕು ಸಂಚಾಲಕ ನಲಗೇತನಹಟ್ಟಿ ಕೆ ಟಿ ಚನ್ನಯ್ಯ, ಕೆ ಎಂ ಅಭಿನವ, ಸೇರಿದಂತೆ ಇನ್ನೂ ಮುಂತಾದವರು ಇದ್ದರು
0 Comments