ಹಿರಿಯೂರು:
ಶೇಕಡ 60ರಷ್ಟು ಹೆಚ್ಚಿಸಿರುವ ಬಿತ್ತನೆ ಬೀಜದ ದರ ಕಡಿತಗೊಳಿಸಿ ಪರಿಹಾರವನ್ನು ಸಮರ್ಪಕವಾಗಿ ಜಿಲ್ಲೆಯ ಎಲ್ಲಾ ರೈತರ ಖಾತೆಗೆ ಜಮಾ ಮಾಡುವ ಬಗ್ಗೆ ಸಂಬಂಧಿಸಿದಂತೆ ಮಾನ್ಯ ಕೃಷಿ ಸಚಿವರು ಕರ್ನಾಟಕ ಸರ್ಕಾರ ವಿಕಾಸಸೌಧ ಬೆಂಗಳೂರು ಇವರಿಗೆ ಸಹಾಯಕ ಕೃಷಿ ನಿರ್ದೇಶಕರು ಹಿರಿಯೂರು ರವರ ಮುಖಾಂತರ ಮನವಿ ಸಲ್ಲಿಸಲಾಯಿತು ಎಂಬುದಾಗಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಸಿ. ಹೊರೆಕೆರಪ್ಪ ತಿಳಿಸಿದರು.
ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಬರಗಾಲ ಆವರಿಸಿದ್ದು ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆ, ಬರಗಾಲಕ್ಕೆ ಒಳಪಟ್ಟಿದ್ದು ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಮಳೆ ಬರದೆ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಇಂದಿನ ಸರ್ಕಾರ ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೂ ತಾರತಮ್ಯವಿಲ್ಲದೆ, ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದು, ತಮ್ಮ ಸರ್ಕಾರ ಕೊಳವೆಬಾವಿ ಇರುವ ರೈತರಿಗೆ ,ನೀರಾವರಿ ಪ್ರದೇಶದ ರೈತರಿಗೆ ಬೆಳೆ ನಷ್ಟ ಪರಿಹಾರ ಮೊತ್ತವನ್ನು ನೀಡದೆ ತಾರತಮ್ಯ ಮಾಡಿ ಮಾಡುತ್ತಿದೆ.
ರೈತರು ಟ್ಯಾಂಕರ್ ಮೂಲಕ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೋಟಗಾರಿಕೆ ಬೆಳೆಗಳಿಗೆ ನೀರು ಹಾಯಿಸಿ, ಸಂಕಷ್ಟ ಅನುಭವಿಸಿದ್ದು ಸರ್ಕಾರ ತಾರತಮ್ಯ ಮಾಡದೆ ಎಲ್ಲಾ ರೈತರಿಗೂ ಬರ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವಂತೆ ತಾಲ್ಲೂಕು ರೈತ ಸಂಘವು ಒತ್ತಾಯಿಸುತ್ತದೆ ಎಂದರು.
ಚಿತ್ರದುರ್ಗ ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗಿದ್ದು, ರೈತರು ಬಿತ್ತಿದ ಬೆಳೆ ಕೈ ಸೇರದೆ ಸಾಲಗಾರಾಗಿದ್ದು ಸರ್ಕಾರ ಬಿತ್ತನೆ ಬೀಜದ ಬೆಲೆಯನ್ನು ಶೇಕಡ 60 ರಷ್ಟು ಹೆಚ್ಚಿಸಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದರಿಂದ ಕೃಷಿ ಚಟುವಟಿಕೆ ಕುಂಟಿತವಾಗಿದೆ ಎಂದರಲ್ಲದೆ,
ಈ ಕೂಡಲೇ ಸರ್ಕಾರ ಬಿತ್ತನೆ ವೇಗದ ದರವನ್ನು ಪೂರ್ಣ ಕಡಿತಗೊಳಿಸುವಂತೆ ಹಾಗೂ ಇದುವರೆಗೂ ಸ್ಪಿಂಕ್ಲರ್ ಸೆಟ್ ದರ 1746ರೂ ಇದ್ದಿದ್ದನ್ನು ಏಕಾಏಕಿ 4,139 ರೂ ಕ್ಕೆ ಹೆಚ್ಚಿಸಿರುವುದು ಕೂಡ ರೈತರಿಗೆ ದುಬಾರಿ ವೆಚ್ಚವಾಗಿದ್ದು ಕೂಡಲೇ ಕಳೆದುಗೊಳಿಸುವಂತೆ ತಾಲ್ಲೂಕು ರೈತ ಸಂಘ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಿ. ಹೊರೆಕೆರಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ. ಓ. ಶಿವಕುಮಾರ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ತಾಲೂಕು ಕಾರ್ಯದರ್ಶಿ ಹೆಚ್.ದಸ್ತಗಿರಿಸಾಬ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮಿಕಾಂತ್, ಮಲ್ಲಪ್ಪನಹಳ್ಳಿ ಟಿ. ಮುನಿಸ್ವಾಮಿ, ನಾಗರಾಜ, ಗಿರೀಶ್, ಚಿಕ್ಕತಾಯಮ್ಮ, ಮಾರುತಿ, ನಾಗರಾಜ್, ರುದ್ರಮ್ಮ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments